ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಲಾಂಛನ ನೋಡಿ
ಬೆಂಗಳೂರು, ಏ.1 : ಏಪ್ರಿಲ್ 11 ರಿಂದ ರಾಜ್ಯಾದ್ಯಂತ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಖ್ಯಾತ ಕಲಾವಿದ ಜಿ.ಕೆ.ಸತ್ಯ ಅವರು ಈ ಲಾಂಛನವನ್ನು ರಚಿಸಿದ್ದಾರೆ.
ಮಂಗಳವಾರ
ಗೃಹ
ಕಚೇರಿ
ಕೃಷ್ಣಾದಲ್ಲಿ
ನಡೆದ
ಕಾರ್ಯಕ್ರಮದಲ್ಲಿ
ಲಾಂಛನ
ಬಿಡುಗಡೆ
ಮಾಡಿ
ಮಾತನಾಡಿದ
ಸಿದ್ದರಾಮಯ್ಯ
ಅವರು,
ಸಮಾಜದಲ್ಲಿ
ನಿಜವಾಗಿಯೂ
ದುರ್ಬಲರು,
ಸೌಲಭ್ಯ
ವಂಚಿತರನ್ನು
ಗುರುತಿಸಿ
ಅವರನ್ನು
ಸಬಲೀಕರಣಗೊಳಿಸುವುದೇ
ಈ
ಸಮೀಕ್ಷೆಯ
ಮೂಲ
ಉದ್ದೇಶವಾಗಿದೆ
ಎಂದರು.
ಏ.11ರಿಂದ ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಮ್ಮ ಕುಟುಂಬದ ಬಗ್ಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನೇ ನೀಡಬೇಕು ಎಂದು ಮನವಿ ಮಾಡಿದರು. ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮೀಕ್ಷೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು. [ಕರ್ನಾಟಕದಲ್ಲಿ ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]
30
ಸಾವಿರ
ಬಹುಮಾನ
:
ಸಮೀಕ್ಷೆಯ
ಮೂಲ
ಆಶಯಕ್ಕೆ
ಪೂರಕವಾದ
ಘೋಷವಾಕ್ಯವನ್ನು
ಸಾರ್ವಜನಿಕರಿಂದ
ಸ್ಪರ್ಧಾತ್ಮಕ
ರೂಪದಲ್ಲಿ
ಆಹ್ವಾನಿಸಿ
ಆಯ್ಕೆ
ಮಾಡಲಾಗಿದೆ.
ಘೋಷವಾಕ್ಯವನ್ನು
ನೀಡಿದ
ಉಡುಪಿಯ
ಎಂ.ಜ್ಯೋತಿ
ಅವರಿಗೆ
30
ಸಾವಿರೂ.
ಬಹುಮಾನ
ನೀಡಲಾಗುತ್ತದೆ
ಎಂದು
ಮುಖ್ಯಮಂತ್ರಿಗಳು
ಘೋಷಿಸಿದರು.
[ಜಾತಿ
ಗಣತಿ
:
ಲಾಂಛನ,
ಘೋಷವಾಕ್ಯ
ರಚಿಸಿ,
ಬಹುಮಾನ
ಗೆಲ್ಲಿ]
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಮಾತನಾಡಿ, ಸಮೀಕ್ಷೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧರು.