ಪಂಚಾಯತ್ ರಾಜ್ ವಿವಿಗೆ 100 ಕೋಟಿ ನೆರವು ಕೇಳಿದ ಕರ್ನಾಟಕ
ಗದಗ, ಜೂನ್ 29 : ಗದಗದಲ್ಲಿ ಸ್ಥಾಪನೆಯಾಗುತ್ತಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ್ ಮನವಿ ಮಾಡಿದ್ದಾರೆ.
ನವದೆಹಲಿಯ
ವಿಜ್ಞಾನ
ಭವನದಲ್ಲಿ
ಮಂಗಳವಾರ
ಎಲ್ಲಾ
ರಾಜ್ಯಗಳ
ಗ್ರಾಮೀಣಾಭಿವೃದ್ಧಿ
ಹಾಗೂ
ಪಂಚಾಯತ್
ರಾಜ್
ಸಚಿವರ
ಕಾರ್ಯಾಗಾರದಲ್ಲಿ
ಪಾಲ್ಗೊಂಡು
ಮಾತನಾಡಿದ
ಅವರು,
'ರಾಜ್ಯದಲ್ಲಿ
ಗ್ರಾಮೀಣಾಭಿವೃದ್ಧಿ
ಹಾಗೂ
ಪಂಚಾಯತ್
ರಾಜ್
ಇಲಾಖೆಯು
ಗ್ರಾಮೀಣ
ಪ್ರದೇಶದ
ಜನತೆಗಾಗಿ
ಗ್ರಾಮೀಣ
ಅಭಿವೃದ್ಧಿ,
ನೈರ್ಮಲ್ಯ,
ಆರೋಗ್ಯ
ಸಂರಕ್ಷಣೆಗಾಗಿ
ಗಣನೀಯವಾಗಿ
ಕಾರ್ಯನಿರ್ವಹಿಸುತ್ತಿದೆ'
ಎಂದರು.
[ಕೃಷಿ
ತಜ್ಞ
ಗದಗದ
ಭರಮಗೌಡ್ರ
ಹೆಸರಲ್ಲಿ
ಪ್ರತಿಷ್ಠಾನ]
'ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮತ್ತಷ್ಟು ಅಧ್ಯಯನಗಳು, ತರಬೇತಿ, ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ಗದಗ್ ನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಎಸ್.ವಿ.ರಂಗನಾಥ್ ಅವರ ನೇತೃತ್ವದ ತಜ್ಞರ ಸಮಿತಿಯು ನೀಡಿದ ವರದಿಯನ್ವಯ ವಿವಿಯ ಅಧೀನದಲ್ಲಿ ಶಾಲೆಗಳು ಹಾಗು ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಸ್ಥಾಪಿಸಲಾಗುತ್ತದೆ' ಎಂದು ಹೇಳಿದರು.
'ಕರ್ನಾಟಕ
ವಿಧಾನ
ಸಭೆಯಲ್ಲಿ
ಗ್ರಾಮೀಣಾಭಿವೃದ್ಧಿ
ಹಾಗೂ
ಪಂಚಾಯತ್
ರಾಜ್
ಅಧಿನಿಯಮ
ಅಂಗೀಕಾರವಾಗಿದೆ.
ವಿಧಾನ
ಪರಿಷತ್ತಿನಲ್ಲಿ
ಅಂಗೀಕಾರವಾಗಬೇಕಿದೆ.
ವಿವಿ
ಸ್ಥಾಪನೆಗೆ
ಗದಗದಲ್ಲಿ
353
ಎಕರೆ
ಜಮೀನನ್ನು
ಗುರುತಿಸಲಾಗಿದೆ.
15
ಕೋಟಿ
ರೂ.
ಅನುದಾನವನ್ನು
ಮೀಸಲಿಡಲಾಗಿದೆ'
ಎಂದು
ಸಚಿವರು
ವಿವರಿಸಿದರು.