ಕರ್ನಾಟಕದ ಶುಕ್ರವಾರದ ತುಣುಕು ಸುದ್ದಿಗಳು
ಬೆಂಗಳೂರು, ಅ. 31 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 3.25 : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ. ವಿಜಯ್ ಆತ್ಮಹತ್ಯೆ ಮಾಡಿಕೊಂಡ ಕೈದಿ, ಕ್ರಿಕೆಟ್ ಬೆಟ್ಟಿಂಗ್ ಆರೋಪದಡಿ ಬಂಧಿತನಾಗಿದ್ದ ಈತ, ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಮಯ 3 ಗಂಟೆ : ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಜಯಶಂಕರ್ನನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಸಮಯ 2 ಗಂಟೆ : ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಒಡಕಿಲ್ಲ. ಅಣ್ಣತಮ್ಮಂದಿರಂತೆ ಹಲವಾರು ವರ್ಷಗಳಿಂದ ಜೊತೆಯಲ್ಲಿದ್ದೇವೆ. ಆದರೆ, ಮಾಧ್ಯಮಗಳು ಮಾತ್ರ ಅನಗತ್ಯವಾಗಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಸಮಯ 1 ಗಂಟೆ : ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಜೆಡಿಎಸ್ ತೊರೆಯಲಿದ್ದಾರೆ. ನ.2ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿರುವ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. [ಅಬ್ದುಲ್ ಅಜೀಂ ಬಿಜೆಪಿಗೆ]
ಸಮಯ
12
ಗಂಟೆ
:
ಶಾಲೆಯ
ಅವರಣದೊಳಗೆ
ಮಕ್ಕಳ
ಮೇಲೆ
ಲೈಂಗಿಕ
ದೌರ್ಜನ್ಯ
ನಡೆಯುತ್ತಿದೆ.
ಮಕ್ಕಳ
ಸುರಕ್ಷತೆಯ
ಹೊಣೆ
ಶಾಲೆಗಳ
ಜವಾಬ್ದಾರಿಯಾಗಿದೆ
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಹೇಳಿದ್ದಾರೆ.
These
rapes
are
taking
place
inside
school
premises,school
management
has
to
take
care
of
it:
Siddaramaiah,K'taka
CM
pic.twitter.com/KBqYKXbsUS
—
ANI
(@ANI_news)
October
31,
2014
ಸಮಯ 11 ಗಂಟೆ : ಜಮ್ಮುವಿನಿಂದ ಕನ್ಯಾಕುಮಾರಿವರೆಗೂ ಏಕತೆ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ರಾಷ್ಟ್ರದ ಏಕತೆಗೆ ಒತ್ತು ನೀಡಬೇಕೆಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಓಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿವಿಎಸ್ ಮಾತನಾಡಿದರು.
ಸಮಯ 10 ಗಂಟೆ : ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಶುಕ್ರವಾರ 35 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ರೌಡಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಸಮಯ
9
ಗಂಟೆ
:
ಆರ್ಕಿಡ್ಸ್
ಶಾಲೆಯಲ್ಲಿ
ಮೂರೂವರೆ
ವರ್ಷದ
ಬಾಲಕಿ
ಮೇಲೆ
ಲೈಂಗಿಕ
ದೌರ್ಜನ್ಯ,
ಇಂದಿರಾನಗರದ
ಕೇಂಬ್ರಿಡ್ಜ್
ಶಾಲೆಯಲ್ಲಿ
ಆರು
ವರ್ಷದ
ಬಾಲಕಿ
ಮೇಲೆ
ಲೈಂಗಿಕ
ದೌರ್ಜನ್ಯ
ನಡೆದಿರುವ
ಘಟನೆ
ಬಗ್ಗೆ
ಮಾಹಿತಿ
ಪಡೆಯಲು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಶಿಕ್ಷಣ
ಸಚಿವರು
ಮತ್ತು
ಹಿರಿಯ
ಪೊಲೀಸ್
ಅಧಿಕಾರಿಗಳ
ಸಭೆಯನ್ನು
ಕರೆದಿದ್ದಾರೆ.
[ಬೆಂಗಳೂರಿನ
ಶಾಲೆಯಲ್ಲಿ
ಮತ್ತೊಂದು
ಅತ್ಯಾಚಾರ]
ಸಮಯ 8 ಗಂಟೆ : ಬೆಂಗಳೂರಿನ ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿವೆ. ಜೀವನ್ಭೀಮಾ ನಗರ ಪೊಲೀಸ್ ಠಾಣೆ ಲೈಂಗಿಕ ದೌರ್ಜನ್ಯದ ಕುರಿತು ದೂರು ದಾಖಲಾಗಿದ್ದು, ಒಬ್ಬ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತುದೆ.