ಶಾಸಕರಿಗೆ ಬಂಪರ್ ಕೊಡುಗೆ, ಅನುದಾನ 3 ಕೋಟಿಗೆ ಏರಿಕೆ
ಬೆಂಗಳೂರು, ಮಾ.5 : ಎಲ್ಲಾ ಪಕ್ಷದ ಶಾಸಕರ ಬಹುದಿನ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು 3 ಕೋಟಿ ರೂ.ಗಳಿಗೆ ಹೆಚ್ಚಿಸುವ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡಲಿದ್ದಾರೆ.
ಶಾಸಕರಿಗೆ
ಪ್ರತಿ
ವರ್ಷ
2
ಕೋಟಿ
ರೂ.ಗಳ
ಸ್ಥಳೀಯ
ಪ್ರದೇಶಾಭಿವೃದ್ಧಿ
ಅನುದಾನವನ್ನು
ಸದ್ಯ
ನೀಡಲಾಗುತ್ತಿದೆ.
ಇದನ್ನು
5
ಕೋಟಿ
ರೂ.ಗಳಿಗೆ
ಹೆಚ್ಚಳ
ಮಾಡಬೇಕು
ಎಂದು
ಶಾಸಕರು
ಬೆಳಗಾವಿ
ಅಧಿವೇಶನದಲ್ಲಿ
ಸಿಎಂ
ಸಿದ್ದರಾಮಯ್ಯ
ಅವರಿಗೆ
ಒತ್ತಾಯಿಸಿದ್ದರು.
[ಕರ್ನಾಟಕದ
ಶಾಸಕರ
ಸಂಬಳ
ಎಷ್ಟು
ಗೊತ್ತಾ?]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದ್ದು, ಅನುದಾನವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಮಾರ್ಚ್ 13ರಂದು ಮಂಡನೆಯಾಗುವ ಬಜೆಟ್ನಲ್ಲಿ ಅನುದಾನವನ್ನು 2 ರಿಂದ 3 ಕೋಟಿಗೆ ಹೆಚ್ಚಳ ಮಾಡುವ ಕುರಿತು ಅಧಿಕೃತ ಘೋಷಣೆಯಾಗಲಿದೆ.
ಮೂಲಸೌಕರ್ಯಕ್ಕೆ ಆದ್ಯತೆ : ಶಾಸಕರಿಗೆ ನೀಡುವ ವಾರ್ಷಿಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ, ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್ ಒದಗಿಸುವುದು, ಶಾಲೆಗಳಲ್ಲಿ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.
1 ಕೋಟಿ ಹೆಚ್ಚು ಮಾಡಿದ್ದರು : 2013ರ ತನಕ ಶಾಸಕರಿಗೆ 1 ಕೋಟಿ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬರುತ್ತಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ಮಂಡಿಸಿದ ಮೊದಲ ಬಜೆಟ್ನಲ್ಲಿಯೇ ಇದನ್ನು ಸಿದ್ದರಾಮಯ್ಯ ಅವರು 2 ಕೋಟಿಗೆ ಹೆಚ್ಚಿಸಿದ್ದರು. ಸದ್ಯ ಮತ್ತೊಂದು ಕೋಟಿ ಏರಿಕೆ ಮಾಡಲು ನಿರ್ಧರಿಸಿದ್ದಾರೆ.