ಕಾವೇರಿ ವಿವಾದ : ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲೇನಿದೆ?
ಬೆಂಗಳೂರು, ಸೆಪ್ಟೆಂಬರ್ 12 : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕು ಎಂಬ ಆದೇಶವನ್ನು ಮಾರ್ಪಾಡು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ರಜಾದಿನವಾದ ಇಂದು ರಾಜ್ಯ ಸಲ್ಲಿಸಿರುವ ತುರ್ತು ಅರ್ಜಿಯ ವಿಚಾರಣೆ ನಡೆಯಲಿದೆ.
ಮುಖ್ಯ
ನ್ಯಾಯಮೂರ್ತಿ
ಟಿ.ಎಸ್.ಠಾಕೂರ್
ಮತ್ತು
ನ್ಯಾಯಮೂರ್ತಿ
ದೀಪಕ್
ಮಿಶ್ರಾ
ಅವರ
ಪೀಠ
ಇಂದು
ತುರ್ತು
ಅರ್ಜಿಯ
ವಿಚಾರಣೆ
ನಡೆಸಲಿದೆ.
ಬಕ್ರೀದ್
ಪ್ರಯುಕ್ತ
ಇಂದು
ಕೋರ್ಟ್ಗೆ
ರಜೆ
ಇದೆ.
ಆದರೆ,
ತುರ್ತು
ಅರ್ಜಿ
ಆಗಿರುವುದರಿಂದ
ವಿಚಾರಣೆ
ನಡೆಸಲಾಗುತ್ತದೆ.[ತ.ನಾಡಿಗೆ
ನೀರು
ಹರಿಸಲು
ಹೇಳಿದ್ದು
ನಾನೇ
:
ದೇವೇಗೌಡ]
10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಕಳೆದ ಸೋಮವಾರ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಬಳಿಕ ಕರ್ನಾಟಕದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಸೆ.9ರಂದು ಕರ್ನಾಟಕ ಬಂದ್ ಸಹ ನಡೆಸಲಾಗಿತ್ತು. ಈ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಶನಿವಾರ ಅರ್ಜಿ ಸಲ್ಲಿಸಿದೆ.[ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ, ಇಳಿಯದ ಕಾವು]
ಅರ್ಜಿಯಲ್ಲಿ ಏನಿದೆ? : ಸೆಪ್ಟೆಂಬರ್ 5 ರಿಂದ 10ರ ತನಕ ಕರ್ನಾಟಕ 66,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ತನ್ನ ಅರ್ಜಿಯಲ್ಲಿ ಹೇಳಿದೆ. ತಮಿಳುನಾಡಿನಲ್ಲಿ ಸಾಂಬ ಬೆಳೆಗೆ ಸಾಕಷ್ಟು ನೀರಿದೆ. ಆದ್ದರಿಂದ, ನೀರು ಹರಿಸುವುದನ್ನು ಸ್ಥಗಿತಗೊಳಿಸಲು ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.[ಕಾವೇರಿ ವಿವಾದ : ಸೆಪ್ಟೆಂಬರ್ 15ರಂದು ರೈಲ್ವೆ ಬಂದ್]
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠದ ಮುಂದೆ ಇಂದು ಅರ್ಜಿಯ ವಿಚಾರಣೆ ನಡೆಯಲಿದೆ. ಸೆ.5ರಂದು ತಮಿಳುನಾಡಿಗೆ ನೀರು ಬಿಡುವಂತೆ ದೀಪಕ್ ಮಿಶ್ರಾ ಅವರು ಆದೇಶ ನೀಡಿದ್ದರು. ಅರ್ಜಿಯ ವಿಚಾರಣೆ ವೇಳೆ 'ಬದುಕಿ ಮತ್ತು ಬದುಕಲು ಬಿಡಿ' ಎಂದು ಅವರು ಹೇಳಿದ್ದರು.