ಮೂರನೇ ಬಾರಿ ರಜೆ ವಿಸ್ತರಣೆ ಮಾಡಿದ ನ್ಯಾ. ಭಾಸ್ಕರರಾವ್
ಬೆಂಗಳೂರು, ಸೆಪ್ಟೆಂಬರ್ 29 : ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಮತ್ತೊಮ್ಮೆ ಸರಣಿ ರಜೆ ಪಡೆದಿದ್ದಾರೆ. ಅಕ್ಟೋಬರ್ 21ರ ತನಕ ಅವರು ರಜೆಯನ್ನು ವಿಸ್ತರಣೆ ಮಾಡಿದ್ದಾರೆ. ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರನ ಬಂಧನವಾದ ಬಳಿಕ ಲೋಕಾಯುಕ್ತರು ಸರಣಿ ರಜೆ ಪಡೆಯುತ್ತಿದ್ದಾರೆ.
ಒನ್
ಇಂಡಿಯಾಕ್ಕೆ
ಲಭ್ಯವಾಗಿರುವ
ಮಾಹಿತಿಯಂತೆ
ಲೋಕಾಯುಕ್ತದ
ರಿಜಿಸ್ಟ್ರಾರ್
ಅವರಿಗೆ
ರಜೆ
ವಿಸ್ತರಣೆ
ಮಾಡುವ
ಕುರಿತು
ನ್ಯಾ.ಭಾಸ್ಕರರಾವ್
ಪತ್ರ
ಬರೆದಿದ್ದಾರೆ.
ಆದರೆ,
ರಜೆ
ವಿಸ್ತರಣೆ
ಮಾಡಲು
ನಿಖರವಾದ
ಕಾರಣವನ್ನು
ಅವರು
ಪತ್ರದಲ್ಲಿ
ತಿಳಿಸಿಲ್ಲ.
[ಸೆ.30ರ
ತನಕ
ರಜೆ
ವಿಸ್ತರಣೆ
ಮಾಡಿದ
ಭಾಸ್ಕರರಾವ್]
3ನೇ ಬಾರಿ ರಜೆ ವಿಸ್ತರಣೆ : ಮೊದಲು ಭಾಸ್ಕರರಾವ್ ಅವರು ಜುಲೈ 17ರಿಂದ ಆ.17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದ್ದರು. ಸದ್ಯ, ಅಕ್ಟೋಬರ್ 21ರ ತನಕ ಮತ್ತೆ ರಜೆ ವಿಸ್ತರಣೆ ಮಾಡಿದ್ದಾರೆ. [ಲೋಕಾದಲ್ಲಿ ಭ್ರಷ್ಟಾಚಾರ, ಚಾರ್ಜ್ ಶೀಟ್ ವಿವರ]
ಸರಣಿ ರಜೆಗಳನ್ನು ಪಡೆಯುತ್ತಿರುವ ನ್ಯಾಯಮೂರ್ತಿ ಭಾಸ್ಕರರಾವ್ ಅವರು ತಮ್ಮ ಕೆಲಸಗಳನ್ನು ಯಾರಿಗೂ ಹಸ್ತಾಂತರ ಮಾಡಿಲ್ಲ. ಆದ್ದರಿಂದ, ಲೋಕಾಯುಕ್ತ ಕಚೇರಿಯಲ್ಲಿ ಹಲವಾರು ಕಡತಗಳು ಬಾಕಿ ಉಳಿದಿವೆ. ಹೊಸ ದೂರುಗಳ ತನಿಖೆಯೂ ನಡೆಯುತ್ತಿಲ್ಲ. [ಲೋಕಾಯುಕ್ತರನ್ನು ಬಂಧಿಸಿ, ವಿಚಾರಿಸಲು ಸಕಾಲ]
ಒನ್ ಇಂಡಿಯಾಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಲೋಕಾಯುಕ್ತ ಕಚೇರಿಯಲ್ಲಿ ಕೆಲಸಗಳು ಬಾಕಿ ಇರುವ ಬಗ್ಗೆ ರಾಜ್ಯಪಾಲರು ಮತ್ತು ಅಡ್ವೊಕೇಟ್ ಜನರಲ್ ಅವರಿಗೆ ಮಾಹಿತಿ ರವಾನಿಸಲಾಗಿದೆ. ರಾಜ್ಯಪಾಲರು ಮತ್ತು ಅಡ್ವೊಕೇಟ್ ಜನರಲ್ ಅವರು ಈ ಕುರಿತು ಚರ್ಚಿಸಿ, ಮುಂದಿನ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆ ಇದೆ.