ಕರ್ನಾಟಕದಲ್ಲಿ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ?
ಬೆಂಗಳೂರು, ಮೇ 04 : ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಎರಡು ಬಣವಾಗಬಾರದು ಎಂಬುದು ಹೈಕಮಾಂಡ್ ಉದ್ದೇಶ. ಆದ್ದರಿಂದ, ಉಪಮುಖ್ಯಮಂತ್ರಿ ಪಟ್ಟದ ಸಂಧಾನ ಸೂತ್ರವನ್ನು ಮುಂದಿಡಲಾಗಿದೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರ
ವಿರುದ್ಧ
ಹೈಕಮಾಂಡ್
ನಾಯಕರಿಗೆ
ಸರಣಿ
ದೂರುಗಳು
ತಲುಪಿವೆ
ಎಂಬುದು
ಈಗ
ಗುಟ್ಟಾಗಿ
ಉಳಿದಿಲ್ಲ.
ಆದರೆ,
ಹೈಕಮಾಂಡ್
ನಾಯಕತ್ವ
ಬದಲಾವಣೆ
ಬಗ್ಗೆ
ಇನ್ನೂ
ತೀರ್ಮಾನ
ಕೈಗೊಂಡಿಲ್ಲ.
ಮೇ
20ರ
ಬಳಿಕ
ಈ
ಬಗ್ಗೆ
ಚರ್ಚೆ
ನಡೆಯುವ
ಸಾಧ್ಯತೆ
ಇದೆ.
[ಕೃಷ್ಣ
ದೆಹಲಿಗೆ,
ಸಿದ್ದರಾಮಯ್ಯ
ಬದಲಾವಣೆ?]
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂಬುದು ಹಲವು ನಾಯಕರ ಇಚ್ಛೆ. ಆದರೆ, ದೆಹಲಿಯಲ್ಲಿ ಖರ್ಗೆ ಅವರಿಗೆ ನೀಡಿರುವ ಜವಾಬ್ದಾರಿಯಿಂದ ಅವರನ್ನು ಬಿಡುಗಡೆ ಮಾಡಲು ಹೈಕಮಾಂಡ್ ಸಿದ್ಧವಿಲ್ಲ. [ನಾಯಕತ್ವ ಬದಲಾವಣೆ ವರದಿ ತಳ್ಳಿಹಾಕಿದ ಸಿದ್ದರಾಮಯ್ಯ]
ಆದ್ದರಿಂದ ಉಪಮುಖ್ಯಮಂತ್ರಿ ಸ್ಥಾನದ ಸಂಧಾನ ಸೂತ್ರವನ್ನು ಮುಂದಿಡಲಾಗಿದೆ. ಒನ್ ಇಂಡಿಯಾಕ್ಕೆ ಸಿಕ್ಕಿರುವ ಮಾಹಿತಿಯಂತೆ ಎರಡು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಒಂದು ಹುದ್ದೆಗೆ ಲಿಂಗಾಯತ ಮತ್ತೊಂದು ಹುದ್ದೆಗೆ ದಲಿತ ಸಮುದಾಯದ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. [ಕೃಷ್ಣ ಮನೆಯಂಗಣದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಅಪಸ್ವರ]
ದಲಿತ ಮುಖ್ಯಮಂತ್ರಿ ಕೂಗು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿ, ದಲಿತ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಪಕ್ಷದ ಹಲವು ನಾಯಕರ ಬೇಡಿಕೆ. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ಪಕ್ಷ ಎರಡು ಹೋಳಾಗಬಹುದು ಎಂಬದು ಹೈಕಮಾಂಡ್ ನಾಯಕರ ಆತಂಕ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡದೆ ಲಿಂಗಾಯತ ಮತ್ತು ದಲಿತ ಸಮುದಾಯದ ಇಬ್ಬರಿಗೆ ಉಪ ಮುಖ್ಯಮಂತ್ರಿ ಪಟ್ಟ ಕೊಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಆದರೆ, ಈ ಬಗ್ಗೆ ಮೇ 20ರ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ.
ಉತ್ತರ ಕರ್ನಾಟಕಕ್ಕೆ ಆದ್ಯತೆ : ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿರುವ ನಾಯಕರು ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಮುಖ್ಯಮಂತ್ರಿ ಪಟ್ಟ ನೀಡಿ, ಮುಸ್ಲಿಂ ಮತ್ತು ದಲಿತ ಸಮುದಾಯದ ನಾಯಕರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡಿ ಎಂದು ಒತ್ತಾಯಿಸುವ ಸಾಧ್ಯತೆ ಇದೆ.
ಮೇ 20ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಲಿದ್ದಾರೆ. ಒಂದು ವೇಳೆ ಸಂಪುಟ ಪುನಾರಚನೆಯಾಗದಿದ್ದರೆ ನಾಯಕತ್ವ ಬದಲಾವಣೆಯ ಮುನ್ಸೂಚನೆ ಸಿಗಲಿದೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರು.