ಸರ್ಕಾರಿ ನೌಕರರ ಮುಷ್ಕರ, ಹೇಗಿದೆ ಬೆಂಬಲ?
ಬೆಂಗಳೂರು, ಜೂನ್ 02 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮುಷ್ಕರದ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸುಮಾರು
6
ಲಕ್ಷ
ಸರ್ಕಾರಿ
ನೌಕರರು
ಇಂದು
ಮುಷ್ಕರದಲ್ಲಿ
ಪಾಲ್ಗೊಳ್ಳಬೇಕಿತ್ತು.
ಆದರೆ,
ಸರ್ಕಾರ
ಮುಷ್ಕರ
ನಡೆದಂತೆ
ಆದೇಶ
ಹೊರಡಿಸಿದೆ.
ಆದರೆ,
ಈ
ಆದೇಶವನ್ನೂ
ಮೀರಿ
ಮುಷ್ಕರಕ್ಕೆ
ಬೆಂಬಲ
ವ್ಯಕ್ತವಾಗಿದೆ.
ತುಮಕೂರು,
ಹಾಸನ,
ಬೀದರ್
ಜಿಲ್ಲೆಗಳಲ್ಲಿ
ಮುಷ್ಕರಕ್ಕೆ
ನೌಕರರು
ಬೆಂಬಲ
ಕೊಟ್ಟಿದ್ದಾರೆ.
[ನೌಕರರ
ಬೇಡಿಕೆಗಳೇನು?]
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದಾರೆ. ಆದರೆ, ಕೆಲಸಕ್ಕೆ ಹಾಜರಾಗಿದ್ದಾರೆ. ಆದ್ದರಿಂದ ಸಂಚಾರ ವ್ಯವಸ್ಥೆ ಎಂದಿನಂತೆ ಇದೆ. ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ನೌಕರರು ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದು, ಹಲವು ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. [ಜೂನ್ 4ರಂದು ಪೊಲೀಸರ ಪ್ರತಿಭಟನೆ]
ಸರ್ಕಾರಿ ಕಾರು ಚಾಲಕರು ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದಾರೆ. ಇದರಿಂದಾಗಿ ವಿಧಾನಸೌಧದಕ್ಕೆ ಹಲವು ಐಎಎಸ್ ಅಧಿಕಾರಿಗಳು ಖಾಸಗಿ ಕಾರಿನಲ್ಲಿ ಆಗಮಿಸಿದ್ದಾರೆ. ವಿಧಾನಸೌಧಕ್ಕೆ ನೌಕರರನ್ನು ಕರೆತರುವ ಬಿಎಂಟಿಸಿ ಬಸ್ಸುಗಳು ಖಾಲಿಯಾಗಿವೆ.
* ಬೆಂಗಳೂರಿನ ಕೆ.ಆರ್.ಸರ್ಕಲ್ನಲ್ಲಿ ಸರ್ಕಾರಿ ಕಾರಗಳನ್ನು ತಡೆಯಲಾಗಿದೆ
ನೌಕರರ ಪ್ರಮುಖ ಬೇಡಿಕೆಗಳು
*
ಕೇಂದ್ರ
ಸರ್ಕಾರಿ
ನೌಕರರ
ವೇತನ
ನೀಡಬೇಕು
*
ಸಮಾನ
ಕೆಲಸಕ್ಕೆ
ಸಮಾನ
ವೇತನ
ನೀಡಬೇಕು
*
ಹಳೆ
ಪಿಂಚಣಿ
ಯೋಜನೆ
ಮುಂದುವರಿಸಬೇಕು
*
ಖಾಲಿ
ಇರುವ
ಹುದ್ದೆ
ಭರ್ತಿ
ಮಾಡಬೇಕು
*
7ನೇ
ವೇತನ
ಆಯೋಗ
ರಚಿಸಿ,
ವೇತನ
ಪರಿಷ್ಕರಣೆ