ಸೋಮವಾರದಿಂದ ವಿಧಾನಸಭೆ ಜಂಟಿ ಅಧಿವೇಶನ
ಬೆಂಗಳೂರು, ಜ.31 : ಅರ್ಕಾವತಿ ಹಗರಣ, ಕಬ್ಬು ಬೆಳೆಗಾರರ ಸಮಸ್ಯೆ ಮುಂತಾದ ವಿಚಾರಗಳಿಂದ ಕಲಾಪಕ್ಕೆ ತೊಂದರೆ ಉಂಟು ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ.
ಶನಿವಾರ
ವಿಧಾನಸೌಧದಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಕಾಗೋಡು
ತಿಮ್ಮಪ್ಪ
ಅವರು
ಫೆ.2ರಿಂದ
ಆರಂಭವಾಗುವ
ಜಂಟಿ
ಅಧಿವೇಶನದ
ಬಗ್ಗೆ
ಮಾಹಿತಿ
ನೀಡಿದರು.
ಸದನದಲ್ಲಿ
ಪ್ರತಿಯೊಬ್ಬ
ಸದಸ್ಯರು
ಶಿಸ್ತನ್ನು
ಕಾಪಾಡುವುದು
ಅಗತ್ಯ.
ನಿಯಮ
ಉಲ್ಲಂಘನೆ
ಮಾಡಿದರೆ
ಅಂತವರ
ವಿರುದ್ಧ
ಕ್ರಮ
ಕೈಗೊಳ್ಳಲಾಗುವುದು
ಎಂದು
ಹೇಳಿದರು.
[ಹಿಂದಿವಾದಿ
ವಜುಭಾಯಿ
ವಿರುದ್ಧ
ಕರವೇ
ಪ್ರತಿಭಟನೆ]
ಅರ್ಕಾವತಿ ಹಗರಣ, ಕಬ್ಬು ಬೆಳೆಗಾರರ ಸಮಸ್ಯೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಕಲಾಪವನ್ನು ಹೈಜಾಕ್ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. 10 ದಿನಗಳ ಅಧಿವೇಶನದಲ್ಲಿ ಬಹಳಷ್ಟು ವಿಚಾರಗಳ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದರು. [ಜಂಟಿ ಸದನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ]
ಫೆ.2ರಿಂದ 13ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ. ಸದಸ್ಯರಿಗೆ ಕನ್ನಡ ಮತ್ತು ಹಿಂದಿ ಪ್ರತಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ವಿಧೇಯಕಗಳು : ಕರ್ನಾಟಕ ಶಿಕ್ಷಣ ತಿದ್ದುಪಡಿ ವಿಧೇಯಕ, ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಶ್ನೆಗಳು : ಅಧಿವೇಶನಕ್ಕಾಗಿ ಸದಸ್ಯರಿಂದ 2,256 ಪ್ರಶ್ನೆಗಳು ಬಂದಿವೆ, 2,181 ಪ್ರಶ್ನೆಗಳು ಸ್ವೀಕೃತವಾಗಿವೆ. ಈ ಪೈಕಿ 75 ಚುಕ್ಕೆ ಗುರುತಿನ ಪ್ರಶ್ನೆಗಳಾಗಿದ್ದು, 2,106 ಪ್ರಶ್ನೆಗಳು ಚುಕ್ಕೆ ಗುರುತು ರಹಿತ ಪ್ರಶ್ನೆಗಳಾಗಿವೆ ಎಂದು ಸ್ಪೀಕರ್ ಹೇಳಿದರು.