ಸರ್ಕಾರ, ರಾಜಭವನದ ನಡುವೆ ಕೆಪಿಎಸ್ಸಿ ಗುದ್ದಾಟ
ಬೆಂಗಳೂರು, ಜ. 5 : ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ವಿಚಾರದಲ್ಲಿ ರಾಜ್ಯಪಾಲರು ಸ್ಪಷ್ಟನೆಗಳನ್ನು ಕೇಳಿ ಸರ್ಕಾರ ಕಳುಹಿಸಿದ್ದ ಶಿಫಾರಸುಗಳನ್ನು ವಾಪಸ್ ಕಳಿಸಿದ್ದಾರೆ. ಆದ್ದರಿಂದ ಸರ್ಕಾರ ಮತ್ತು ರಾಜಭವನದ ನಡುವೆ ಗುದ್ದಾಟ ಆರಂಭವಾಗಿದೆ.
ಕರ್ನಾಟಕ
ಲೋಕಸೇವಾ
ಆಯೋಗದ
ಅಧ್ಯಕ್ಷ,
ಸದಸ್ಯರ
ನೇಮಕಕ್ಕೆ
ರಾಜಕೀಯ
ಹಿನ್ನೆಲೆ
ಹೊಂದಿರುವವರು
ಮತ್ತು
ಆಡಳಿತದ
ಅನುಭವ
ಇಲ್ಲದವರನ್ನು
ಶಿಫಾರಸು
ಮಾಡಲಾಗಿದೆ
ಎಂದು
ರಾಜ್ಯಪಾಲ
ವಜೂಭಾಯಿ
ವಾಲಾ
ಅವರು
ಹೇಳಿದ್ದು,
ಈ
ಕುರಿತು
ಸರ್ಕಾರದಿಂದ
ಸ್ಪಷ್ಟನೆ
ಕೇಳಿದ್ದಾರೆ.
[ಲೋಕಸೇವಾ
ಆಯೋಗದ
ಅಧ್ಯಕ್ಷ
ಸ್ಥಾನಕ್ಕೆ
ವಿ.ಆರ್.ಸುದರ್ಶನ್?]
ಈ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ವಿ.ಆರ್. ಸುದರ್ಶನ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ರಘುನಂದನ್ ರಾಮಣ್ಣ ಅವರನ್ನು ಸದಸ್ಯರಾಗಿ ನೇಮಕ ಮಾಡುವ ಶಿಫಾರಸನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿತ್ತು.[ಇನ್ಮುಂದೆ 'ಘನವೆತ್ತ' ರಾಜ್ಯಪಾಲರು ಅನ್ನೋ ಹಾಗಿಲ್ಲ]
ಶಿಫಾರಸ್ಸಿನ ಕುರಿತು ದೂರು : ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ರಾಜಕೀಯ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನಾಮಕರಣ ಮಾಡಲಾಗಿದೆ, ಇದಕ್ಕೆ ಅನುಮೋದನೆ ನೀಡಬಾರದು ಎಂದು ಬಿಜೆಪಿ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿದ್ದರು.
ಯಾವ ಸ್ಪಷ್ಟನೆ ಬೇಕು : ಪಂಜಾಬ್ನ ಲೋಕಸೇವಾ ಆಯೋಗಕ್ಕೆ ಶಾಸಕರೊಬ್ಬರನ್ನು ನೇಮಕ ಮಾಡಿದ್ದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ರದ್ದುಪಡಿಸಿತ್ತು. ಈ ವಿಚಾರ ಸುಪ್ರೀಂಕೋರ್ಟ್ಗೆ ಹೋದಾಗಲೂ ಅಲ್ಲಿಯೂ ಆಡಳಿತದಲ್ಲಿ ಸೂಕ್ತ ಅನುಭವವಿಲ್ಲದ ರಾಜಕೀಯ ವ್ಯಕ್ತಿಗಳನ್ನು ಲೋಕಸೇವಾ ಆಯೋಗದಂತಹ ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ನಾಮಕರಣ ಮಾಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಆದ್ದರಿಂದ ವಿ.ಆರ್. ಸುದರ್ಶನ್ ಮತ್ತು ರಘುನಂದನ್ ರಾಮಣ್ಣ ಅವರ ಹೆಸರು ಶಿಫಾರಸು ಮಾಡಿರುವ ಕುರಿತು ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ. ರಾಜ್ಯಪಾಲರು ಕೆಲವು ವಿಷಯದಲ್ಲಿ ಹೆಚ್ಚಿನ ಮಾಹಿತಿ ಕೇಳಿದ್ದರು. ಅವುಗಳನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.