ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಬಿಎಸ್ವೈ ಘರ್ಜನೆ
ಬೆಂಗಳೂರು, ಆಗಸ್ಟ್ 3 : ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಯಹತ್ಯೆ ಪ್ರಕರಣಗಳ ಬಗ್ಗೆ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. 'ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ' ಎಂದು ಅವರು ಆರೋಪಿಸಿದರು.
ಸೋಮವಾರದ
ಲೋಕಸಭೆ
ಕಲಾಪದಲ್ಲಿ
ಯಡಿಯೂರಪ್ಪ
ಅವರು
ಆತ್ಮಹತ್ಯೆ
ಪ್ರಕರಣಗಳ
ಬಗ್ಗೆ
ವಿಷಯ
ಪ್ರಸ್ತಾಪಿಸಿದರು.
'ರೈತರ
ಆತ್ಮಹತ್ಯೆಯಲ್ಲಿ
ಕರ್ನಾಟಕ
2ನೇ
ಸ್ಥಾನಗಳಿಸಿದೆ.
ರಾಜ್ಯ
ಸರ್ಕಾರ
ಆತ್ಮಹತ್ಯೆ
ತಡೆಯಲು
ವಿಫಲವಾಗಿದೆ.
ರಾಜ್ಯದಲ್ಲಿ
6
ತಿಂಗಳಿನಲ್ಲಿ
250ಕ್ಕೂ
ಹೆಚ್ಚು
ರೈತರು
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ'
ಎಂದು
ಹೇಳಿದರು.[ಮಂಡ್ಯದಲ್ಲಿ
ಕಣ್ಣೀರು
ಹಾಕಿದ
ಕುಮಾರಸ್ವಾಮಿ]
'ರಾಜ್ಯ ಸರ್ಕಾರ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ ಯಡಿಯೂರಪ್ಪ ಅವರು, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು' ಎಂದು ಒತ್ತಾಯಿಸಿದರು. [ಕಬ್ಬು ಬೆಳೆಗಾರರ ಆತ್ಮಹತ್ಯೆ ಸರಣಿಗೆ ಕೊನೆಯಿಲ್ಲ]
'ಶೇ 80ರಷ್ಟು ರೈತರಿಗೆ ಬೆಳೆ ವಿಮೆ ತುಂಬಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಸೂಕ್ತ ಸಮಯದಲ್ಲಿ ಮಳೆಯಾಗುತ್ತಿಲ್ಲ. ರೈತರ ಆತ್ಮಹತ್ಯೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಕೃಷಿ ಯಂತ್ರಗಳಿಗೆ ಶೇ 50ರಷ್ಟು ಸಬ್ಸಿಡಿ ನೀಡಬೇಕು ಎಂದು ಯಡಿಯೂರಪ್ಪ ಹೇಳಿದರು.
ರಾಹುಲ್ ಬಗ್ಗೆ ಆಕ್ರೋಶ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದರು, 'ರಾಹುಲ್ ಗಾಂಧಿ ಅವರು ರೈತರು ಆತ್ಮಹತ್ಯೆ ಮಾಡಿಕೊಂಡ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಆದರೆ, ಕರ್ನಾಟಕಕ್ಕೆ ಮಾತ್ರ ಆಗಮಿಸಿಲ್ಲ' ಎಂದು ಯಡಿಯೂರಪ್ಪ ದೂರಿದರು.