ವಿಡಿಯೋ ಬಹಿರಂಗ: ಸಚಿವ ಎಚ್ ವೈ ಮೇಟಿ ರಾಜೀನಾಮೆ ಅಂಗೀಕಾರ
ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ಬುಧವಾರ (ಡಿಸೆಂಬರ್ 14) ರಾಜೀನಾಮೆ ನೀಡಿದ್ದಾರೆ
ಬೆಂಗಳೂರು, ಡಿಸೆಂಬರ್ 14: ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ಬುಧವಾರ (ಡಿಸೆಂಬರ್ 14) ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಎಚ್,ವೈ.ಮೇಟಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಮೇಟಿ ಅವರ ರಾಜೀನಾಮೆಯನ್ನು ಸಿದ್ದರಾಮಯ್ಯ ಅವರು ಅಂಗೀಕರಿಸಿದ್ದಾರೆ.
ಇದಕ್ಕೂ
ಮುನ್ನ
ಎಚ್
ವೈ
ಮೇಟಿ
ಅವರ
ರಾಸಲೀಲೆ
ಪ್ರಕರಣ
ದೆಹಲಿ
ತಲುಪಿತ್ತು.
ಆರ್
ಟಿಐ
ಕಾರ್ಯಕರ್ತ
ರಾಜಶೇಖರ್
ಅವರು
ಎಐಸಿಸಿ
ಉಪಾಧ್ಯಕ್ಷ
ರಾಹುಲ್
ಗಾಂಧಿ
ಅವರನ್ನು
ಭೇಟಿ
ಮಾಡಿ
ಈ
ಪ್ರಕರಣದ
ಬಗ್ಗೆ
ಚರ್ಚೆ
ನಡೆಸಲು
ತೆರಳಿದ್ದರು.
ಆದರೆ,
ರಾಹುಲ್
ಭೇಟಿ
ಬಗ್ಗೆ
ಯಾವುದೇ
ಮಾಹಿತಿ
ಸಿಕ್ಕಿಲ್ಲ.
ಬದಲಿಗೆ
ದೆಹಲಿಯಲ್ಲಿ
ಈ
ವಿಡಿಯೋ
ಬಹಿರಂಗವಾಗಿದೆ.
[ಈ
ಪ್ರಕರಣದಲ್ಲಿ
ನನ್ನದ್ದೇನೂ
ತಪ್ಪಿಲ್ಲ
:
ಎಚ್
ವೈ
ಮೇಟಿ]
ಕೆಲ
ಮಾಧ್ಯಮಗಳು
ಅಪಪ್ರಚಾರ
ಮಾಡುತ್ತಿವೆ
ಎಂದು
ಹೇಳಿದ್ದಾರೆ.
ಪಕ್ಷ
ಮತ್ತು
ರಾಜ್ಯದ
ಹಿತದೃಷ್ಟಿಯಿಂದ
ನಾನು
ರಾಜೀನಾಮೆ
ಕೊಡಲು
ಸಿದ್ಧವಾಗಿದ್ದೇನೆ
ಎಂದು
ಮೇಟಿ
ಅವರು
ಇತ್ತೀಚೆಗೆ
ಮಾಧ್ಯಮಗಳ
ಮುಂದೆ
ಹೇಳಿದ್ದನ್ನು
ಇಲ್ಲಿ
ಸ್ಮರಿಸಬಹುದು.
ಇಂಥದ್ದೊಂದು ವಿಡಿಯೋ ಇಡೀ ರಾಜ್ಯ ನೋಡುವುದು ಬೇಡ ಎಂದು ನನ್ನ ಉದ್ದೇಶವಾಗಿತ್ತು. ಆದರೆ ಈಗ ಅದನ್ನು ಜನರು ನೋಡಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಪ್ರಕರಣದಲ್ಲಿ ನನ್ನ ಹೆಸರು ಚಾಲ್ತಿಗೆ ಬರಬೇಕು ಎಂಬ ಉದ್ದೇಶ ಇಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಅವರ ಬಂಡವಾಳ ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಆರ್ ಟಿಐ ರಾಜಶೇಖರ್ ಹೇಳಿದ್ದಾರೆ.