ಕರ್ನಾಟಕ ಪೊಲೀಸರಿಗೆ ದೀಪಾವಳಿ ಕೊಡುಗೆ
ಬೆಂಗಳೂರು, ಅ.21 : ಕರ್ನಾಟಕದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಹಬ್ಬದ ಕೊಡುಗೆ ನೀಡಿದ್ದಾರೆ. ಆರೋಗ್ಯ ತಪಾಸಣಾ ವೆಚ್ಚ, ಪಬ್ಲಿಕ್ ಶಾಲೆ ಸ್ಥಾಪನೆ, ಪರಿಹಾರ ಮೊತ್ತ ಹೆಚ್ಚಳ, ಗುಂಪು ವಿಮಾ ಯೋಜನೆಯ ಮೊತ್ತ ಹೆಚ್ಚಳ ಮುಂತಾದ ಯೋಜನೆಗಳನ್ನು ಮಂಗಳವಾರ ಘೋಷಿಸಿದ್ದಾರೆ.
ಮಂಗಳವಾರ
ಮೈಸೂರು
ರಸ್ತೆಯಲ್ಲಿರುವ
ಸಿಎಆರ್
ಮೈದಾನದಲ್ಲಿ
ಪೊಲೀಸ್
ಹುತಾತ್ಮ
ದಿನಾಚರಣೆ
ಪ್ರಯುಕ್ತ
ಹುತಾತ್ಮ
ಪೊಲೀಸರಿಗೆ
ಶ್ರದ್ಧಾಂಜಲಿ
ಅರ್ಪಿಸಿ
ಮಾತನಾಡಿದ
ಸಿಎಂ
ಸಿದ್ದರಾಮಯ್ಯ,
ರಕ್ಷಣಾ
ಕಾರ್ಯದಲ್ಲಿ
ತೊಡಗಿರುವ
ಪೊಲೀಸರು
ಬಿಪಿ,
ಸಕ್ಕರೆ
ಕಾಯಿಲೆ
ಮುಂತಾದ
ಆರೋಗ್ಯ
ಸಮಸ್ಯೆಗಳಿಂದ
ಬಳಲುತ್ತಿದ್ದಾರೆ
ಪೊಲೀಸರ
ಆರೋಗ್ಯದ
ಬಗ್ಗೆ
ಕಾಳಜಿ
ವಹಿಸಲು
ಸರ್ಕಾರ
ಸಿದ್ಧವಿದೆ
ಎಂದು
ಘೋಷಿಸಿದರು.
ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ವಾರ್ಷಿಕ 1500 ರೂ.ಗಳ ಆರೋಗ್ಯ ತಪಾಸಣಾ ವೆಚ್ಚವನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಪೊಲೀಸರಿಗೆ ವಾರ್ಷಿಕ 1000 ರೂ.ಗಳ ಆರೋಗ್ಯ ತಪಾಸಣಾ ವೆಚ್ಚವನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಐಪಿಎಸ್ ಹೊರತುಪಡಿಸಿ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದರು. [10 ವರ್ಷದ ಬಾಲಕ ಪೊಲೀಸ್ ಕಮಿಷನರ್]
ಪರಿಹಾರ ಧನ ಹೆಚ್ಚಳ : ಭಯೋತ್ಪಾದನೆ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪೊಲೀಸರಿಗೆ ನೀಡಲಾಗುತ್ತಿದ್ದ 5 ಲಕ್ಷ ರೂ.ಗಳ ಪರಿಹಾರ ಧನವನ್ನು 30 ಲಕ್ಷಕ್ಕೆ, ಶಾಶ್ವತವಾಗಿ ಅಂಗವಿಕಲರಾದವರಿಗೆ ನೀಡುತ್ತಿದ್ದ ಪರಿಹಾರ ಧನವನ್ನು 10 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಗಂಭೀರವಾಗಿ ಗಾಯಗೊಂಡವರಿಗೆ ನೀಡುತ್ತಿದ್ದ 20 ಸಾವಿರದ ಪರಿಹಾರ ಧನವನ್ನು 2 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಘೋಷಿಸಿದರು. [ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]
ಇದುವರೆಗೂ ಮುಖ್ಯಪೇದೆಗಳಿಗೆ ಮಾತ್ರ ಸೀಮಿತವಾಗಿದ್ದ ವಿಮಾ ಸೌಲಭ್ಯವನ್ನು ಎಎಸ್ಐ ಹಾಗೂ ಸಬ್ ಇನ್ಸ್ಪೆಕ್ಟರ್ ಗಳಿಗೂ ವಿಸ್ತರಿಸಲಾಗುವುದು. ವಿಮಾ ಯೋಜನೆಯ ಮೊತ್ತವನ್ನು 10 ಲಕ್ಷ ರೂ. ಗಳಿಂದ 20ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು ಎಂದು ಹೇಳಿದ ಸಿಎಂ ಈ ಯೋಜನೆಯಿಂದ 83,939 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದರು.
ಪೊಲೀಸ್ ಪಬ್ಲಿಕ್ ಶಾಲೆ : ಪೊಲೀಸರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ತೆರೆಯಲಾಗಿದೆ. 15 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ, ಬಳ್ಳಾರಿ, ಬೆಳಗಾವಿ, ಗುಲ್ಬರ್ಗ ಮತ್ತು ಉಡುಪಿಯಲ್ಲಿಯೂ ಶಾಲೆ ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದರು.
1818 ಕೋಟಿ ರೂ. ವೆಚ್ಚದಲ್ಲಿ 11ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ 740 ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಸೇನಾ ಪಡೆ ಮಾದರಿಯಲ್ಲೇ 46 ಕಡೆ ಪೊಲೀಸ್ ಕ್ಯಾಂಟಿನ್ ತೆರೆಯುವ ನಿರ್ಧಾರ ಕೈಗೊಳ್ಳಲಾಗಿದ್ದು, ಈಗಾಗಲೇ 39 ಕಡೆ ಕ್ಯಾಂಟಿನ್ ಆರಂಭವಾಗಿವೆ. ಉಳಿದ ಕಡೆಗಳಲ್ಲೂ ಶೀಘ್ರವೇ ಕ್ಯಾಂಟಿನ್ ಆರಂಭಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯ ಬಲವರ್ಧನೆಗೆ ಸರ್ಕಾರ ಸಿದ್ಧವಿದೆ. ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ, ಹೊಸ ಶಸ್ತ್ರಾಸ್ತ್ರ ಖರೀದಿ ಮುಂತಾದವುಗಳಿಗೆ ಅಗತ್ಯ ನೆರವು ನೀಡಲು ಸರ್ಕಾರ ಅಗತ್ಯ ಅನುದಾನ ನೀಡಲಿದೆ ಎಂದು ಸಿಎಂ ಪೊಲೀಸರಿಗೆ ಭರವಸೆ ನೀಡಿದರು.