ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?
ವರದಿ ಸಿದ್ದವಾಗಿದೆ ಎಂದು ಹಿಂದುಳಿದ ವರ್ಷಗಳ ರಾಜ್ಯಾಧ್ಯಕ್ಷ ಕಾಂತರಾಜ್ ಹೇಳಿದರೂ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಸರಕಾರವಿಲ್ಲ. ಕಾರಣ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡದಂತೆ ಕೆಪಿಸಿಸಿ ಸಮನ್ವಯ ಸಮಿತಿ ಮುಖ್ಯಮಂತ್ರಿಗೆ ತಾಕೀತು ಮಾಡಿದೆ.
ಬೆಂಗಳೂರು, ಮಾರ್ಚ್ 1: ಸ್ವಾತಂತ್ರ್ಯ ನಂತರದ ಪ್ರಥಮ ಜಾತಿ ಗಣತಿಗೆ ಸಿದ್ದರಾಮಯ್ಯ ಸರಕಾರ ಎಳ್ಳು ನೀರು ಬಿಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1931ರಲ್ಲಿ ಜಾತಿ ಗಣತಿ ನಡೆದಿತ್ತು. ಇದಾದ ನಂತರ ಜಾತಿ ಗಣತಿಯೇ ನಡೆದಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದಾಗಿನಿಂದ ಜಾತಿ ಗಣತಿ ಮಾಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಆಗಿರಲಿಲ್ಲ. [ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?]
ಮುಖ್ಯಮಂತ್ರಿಯಾದ
ಬಳಿಕ
ತಮ್ಮ
ಮಹತ್ವಾಕಾಂಕ್ಷಿಯ
ಜಾತಿ
ಗಣತಿಗೆ
ಸಿದ್ದರಾಮಯ್ಯ
ಚಾಲನೆ
ನೀಡಿದ್ದರು.
2015ರ
ಏಪ್ರಿಲ್
ನಲ್ಲಿ
20
ದಿನಗಳ
ಕಾಲ
ಸಾಮಾಜಿಕ,
ಆರ್ಥಿಕ
ಮತ್ತು
ಶೈಕ್ಷಣಿಕ
ಸಮೀಕ್ಷೆ
(ಜಾತಿ
ಗಣತಿ)
ನಡೆದಿತ್ತು.
ಆದರೆ
ಎರಡು
ವರ್ಷವಾದರೂ
ಇನ್ನೂ
ವರದಿ
ಸಲ್ಲಿಕೆಯಾಗಿಲ್ಲ.
ಇದೀಗ
ವರದಿ
ಸಿದ್ದವಾಗಿದೆ
ಎಂದು
ಹಿಂದುಳಿದ
ವರ್ಷಗಳ
ರಾಜ್ಯಾಧ್ಯಕ್ಷ
ಕಾಂತರಾಜ್
ಹೇಳಿದರೂ
ಬಿಡುಗಡೆ
ಮಾಡುವ
ಸ್ಥಿತಿಯಲ್ಲಿ
ಸರಕಾರವಿಲ್ಲ.
ಕಾರಣ
ಜಾತಿ
ಗಣತಿ
ಸಮೀಕ್ಷೆ
ಬಿಡುಗಡೆ
ಮಾಡದಂತೆ
ಕೆಪಿಸಿಸಿ
ಸಮನ್ವಯ
ಸಮಿತಿ
ಮುಖ್ಯಮಂತ್ರಿಗೆ
ತಾಕೀತು
ಮಾಡಿದೆ.
ಸದ್ಯ
ಹೈಕಮಾಂಡಿಗೆ
ಕಪ್ಪ
ಸಲ್ಲಿಕೆ,
ಆಡಳಿತ
ವಿರೋಧಿ
ಅಲೆಯಲ್ಲಿ
ನಲುಗಿದೆ.
ಜತೆಗೆ
ಕಾಂಗ್ರೆಸ್
ಪಕ್ಷದ
ಒಳಗೆ
ಜಾತಿ
ಸಮೀಕ್ಷೆಗೆ
ವಿರೋಧಗಳು
ವ್ಯಕ್ತವಾಗಿವೆ.
ಹೀಗಾಗಿ
ಮತ್ತೊಂದು
ಸಾಹಸಕ್ಕೆ
ಕೈ
ಹಾಕುವುದು
ಬೇಡ
ಎಂದು
ಹಿರಿಯ
ನಾಯಕ
ಮಲ್ಲಿಕಾರ್ಜುನ
ಖರ್ಗೆ
ಮುಖ್ಯಮಂತ್ರಿಗಳಿಗೆ
ಸೂಚನೆ
ನೀಡಿದ್ದಾರಂತೆ
.
[ಕೌರ್-ದಾವೂದ್
ಹೋಲಿಕೆ;
ಪ್ರತಾಪ್
ಸಿಂಹ
ವಿರುದ್ದ
ಪೊಲೀಸರಿಗೆ
ದೂರು]
ಸಿದ್ದರಾಮಯ್ಯಗೆ ಸಂಕಷ್ಟ
ಮೂಲಗಳ ಪ್ರಕಾರ ಜಾತಿ ಸಮೀಕ್ಷೆ ಬಿಡುಗಡೆ ಮಾಡಿ ಚುನಾವಣೆಗೆ ಹೋಗುವ ಯೋಜನೆ ಸಿದ್ದರಾಮಯ್ಯ ತಲೆಯಲ್ಲಿತ್ತು. ಜಾತಿ ಸಮೀಕ್ಷೆ ಬಿಡುಗಡೆ ಮಾಡಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಒಲವು ಗಳಿಸಿ ಹೊಸ ರಾಜಕೀಯ ಸಮೀಕರಣ ಹೊಸೆಯಬಹುದು ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರು. ಆದರೆ ಇದು ಈಗ ಸಾಧ್ಯವಾಗುತ್ತಿಲ್ಲ.