ಬಜೆಟ್ ಅಧಿವೇಶನ : ಬುಧವಾರದ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಮಾರ್ಚ್ 23 : ಆರೋಗ್ಯ ಕವಚ ಯೋಜನೆಯ ಕೆಲವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಚರ್ಚೆ ನಡೆಯಿತು. ಮೈಸೂರಿನ ಬಿಜೆಪಿ ಕಾರ್ಯಕರ್ತ ರಾಜು ಕೊಲೆ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿತು.
ಬುಧವಾರ
ಬೆಳಗ್ಗೆ
11
ಗಂಟೆಗೆ
ಮೂರನೇ
ದಿನದ
ಕಲಾಪ
ಆರಂಭ
ವಾಗುತ್ತಿದ್ದಂತೆ
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಅವರು,
ಬಿಜೆಪಿ
ಕಾರ್ಯಕರ್ತ
ರಾಜು
ಹತ್ಯೆ
ಪ್ರಕರಣದ
ಬಗ್ಗೆ
ಚರ್ಚೆ
ನಡೆಸಲು
ಅವಕಾಶ
ನೀಡಬೇಕು
ಎಂದು
ಮನವಿ
ಮಾಡಿದರು.
[ಬೇಸತ್ತ
108
ನೌಕರರಿಂದ
ಸಾಮೂಹಿಕ
ವಿಷ
ಸೇವನೆ
ಬೆದರಿಕೆ]
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಇದಕ್ಕೆ ಒಪ್ಪಿಗೆ ನೀಡಿದ ಬಳಿಕ, ಬಿಜೆಪಿ ಆರೋಗ್ಯ ಕವಚ ಸಿಬ್ಬಂದಿ ಸಮಸ್ಯೆ ಬಗ್ಗೆ ಚರ್ಚೆ ಆರಂಭಿಸಿತು. 'ಸರ್ಕಾರ ಸಿಬ್ಬಂದಿಗಳ ರಕ್ಷಣೆಗೆ ಧಾವಿಸಬೇಕು. ಕಂಪನಿಯ ಬೆಂಬಲಕ್ಕೆ ನಿಲ್ಲಬಾರದು' ಎಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದರು.
'ಮುಷ್ಕರ ನಡೆಸಿದ 108ರ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅವರು ಈಗ ಬೀದಿಗೆ ಬಿದ್ದಿದ್ದಾರೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ' ಎಂದು ಶೆಟ್ಟರ್ ಒತ್ತಾಯಿಸಿದರು. ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಇದಕ್ಕೆ ಧ್ವನಿಗೂಡಿಸಿದರು. 'ಜಿವಿಕೆ ಕಂಪೆನಿಯವರು ಹಣ ಲೂಟಿ ಮಾಡುತ್ತಿದ್ದಾರೆ. ಅವರನ್ನು ಹಿಡಿತದಲ್ಲಿಟ್ಟುಕೊಳ್ಳಿ. ಕೆಲಸದಿಂದ ತೆಗೆದು ಹಾಕಿರುವ ಸಿಬ್ಬಂದಿಯನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಿ' ಎಂದು ಆಗ್ರಹಿಸಿದರು.
ಶಾಸಕ ಪುಟ್ಟಣ್ಣಯ್ಯ ಅವರು ಮಾತನಾಡಿ, 'ಕೆಲಸದಿಂದ ತೆಗೆದು ಹಾಕಿರುವವರು ಕನ್ನಡಿಗರು. ಈಗ ಹೊರ ರಾಜ್ಯದವರನ್ನು ತಂದು ನೇಮಕಾತಿ ಮಾಡಿಕೊಳ್ಳಲಾಗಿದೆ. ಕೆಲಸದಿಂದ ತೆಗೆದು ಹಾಕಿರುವವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಬೇಕು' ಎಂದು ಒತ್ತಾಯಿಸಿದರು. ["ಕನ್ನಡ ಸಂಘಟನೆಗಳಿಗೆ ಕನ್ನಡದ ಮಕ್ಕಳು ಕಾಣಿಸುತ್ತಿಲ್ಲವಾ"?]
ಸಿಎಜಿ ವರದಿ ಮಂಡನೆ : ಸ್ವಾಯತ್ತ ಹಾಗೂ ಬೋಧನಾ ಆಸ್ಪತ್ರೆ ಹಾಗೂ ರಾಜ್ಯ ವಲಯ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಕುರಿತು ಮಹಾಲೇಖಪಾಲರ (ಸಿಎಜಿ)ವರದಿ ಸಿದ್ಧಪಡಿಸಿದೆ. ಬುಧವಾರ ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ. [ಸರ್ಕಾರಿ ಆಸ್ಪತ್ರೆಗಳ ಕಥೆ ಬಿಚ್ಚಿಟ್ಟ ಸಿಎಜಿ ವರದಿ]