ಬಜೆಟ್ 2017: ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 15 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಆರೋಗ್ಯವಲಯಕ್ಕೆ ಕೆಲವು ವಿಶೇಷ ಕೊಡುಗೆ ನೀಡಿದ್ದಾರೆ.
* ಶಿಶು ಮತ್ತು ತಾಯಂದಿರ ಹಾರೈಕೆ ಮಾಡುವ ಆಶಾ ಕಾರ್ಯಕರ್ತರಿಗೆ 1 ಸಾವಿರ ರು ಗೌರವಧನ.[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]
* 200 ಜನರಿಕ್ ಔಷಧಿ ಮಳಿಗೆಗಳು.
* ತುಮಕೂರು,ರಾಮನಗರ,ವಿಜಯಪುರ ಮತ್ತು ಕೋಲಾರ್ ನಲ್ಲಿ ತಲಾ 25 ಕೋಟಿ ರೂ.ಗಳ ವೆಚ್ಚದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ.[ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ]
* ಯಶಸ್ವಿನಿ ಆರೋಗ್ಯ ಸುರಕ್ಷಾ ಯೋಜನೆಯು ಜಾರಿಯಲ್ಲಿರುವ ನಿಯಮಾವಗಳಿಗಳಂತೆಯೇ ಮುಂದುವರಿಯುತ್ತದೆ. ಆದರೆ, ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಕ್ಕೆ.
* 6 ಮೆಡಿಕಲ್ ಕಾಲೇಜು.[LIVE: ಬೆಂಗಳೂರಿನ ಅರ್ಬನ್ ರೈಲ್ವೆಗೆ 345 ಕೋಟಿ ರು]
* ಲೈಂಗಿಕ ದೌರ್ಜನ್ಯಕೊಳಗಾದವರಿಗೆ ವಿಶೇಷ ಚಿಕಿತ್ಸಾ ಕೇಂದ್ರ.
* 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ.
* 6 ಜಿಲ್ಲಾಸ್ಪತ್ರೆಗಳಲ್ಲಿ ಎಂಐಆರ್ ಸ್ಕ್ಯಾನಿಂಗ್ ಸೆಂಟರ್.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಹೊಸ ಯೋಜನೆಗಳು]
* 144 ತಾಲೂಕುಗಳಲ್ಲಿ ಡಯಾಲಿಸಿಸ್.
* 25 ಕೋಟಿ ರುಗಳಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಅಭಿವೃದ್ಧಿ.[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]
* ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೆ.
* ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ 3 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಾದರಿಯಲ್ಲಿ ಪ್ರಾದೇಶಿಕ ಹಾಗೂ ಉನ್ನತ ಮಕ್ಕಳ ಆರೋಗ್ಯ ಸಂಸ್ಥೆ ಸ್ಥಾಪನೆ.[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]
* ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ 14.32 ಕೋಟಿ ರೂಗಳ ವೆಚ್ಚದಲ್ಲಿ ಬೆನ್ನು ಹುರಿಗಾಯ ಹಾಗೂ ಆಘಾತ ಚಿಕಿತ್ಸೆ ಒದಗಿಸಲು 10 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ಮತ್ತು 20 ಹಾಸಿಗೆಯ ಪಾಲಿಟ್ರಾಮಾ ಕೇಂದ್ರ ಸ್ಥಾಪನೆ.
* ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಕಿ.ಮೀ.ಗಳಿಗಿಂತಲೂ ಹೆಚ್ಚು ದೂರವಿರುವ ಗ್ರಾಮಗಳಲ್ಲಿ ತಲಾ 10 ಲಕ್ಷ ರೂ.ಗಳಂತೆ ಒಟ್ಟಾರೆ 15 ಕೋಟಿ ರೂ.ಗಳ ವೆಚ್ಚದಲ್ಲಿ ಒಬ್ಬ ವೈದ್ಯರು, ಒಬ್ಬ ಶುಶ್ರೂಷಕರು ಹಾಗೂ ಒಬ್ಬ ಫಾರ್ಮಾಸಿಸ್ಟ್ ಗಳನ್ನು ಒಳಗೊಂಡ 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯಗಳನ್ನು ಸ್ಥಾಪನೆ.[ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ]
* ರಾಜ್ಯದಲ್ಲಿನ 711 ಅಂಬ್ಯುಲೆನ್ಸ್ ಗಳನ್ನು ರಾಜ್ಯ ಆರೋಗ್ಯ ಇಲಾಖೆಯ 827 ಅಂಬ್ಯುಲೆನ್ಸ್ ಗಳೊಡನೆ ಒಟ್ಟುಗೂಡಿಸಿ, ಪ್ರತಿ 10 ರಿಂದ 15 ಕಿ.ಮೀ. ಸುತ್ತಳತೆಯಲ್ಲಿರುವ 35 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಸೇವೆ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೇ.40ರಷ್ಟು ಜನಸಂಖ್ಯೆ ಹೊಂದಿರುವ ಗ್ರಾಮಗಳ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಮುಂದಿನ ಎರಡು ವರ್ಷಗಳಲ್ಲಿ 25.34 ಕೋಟಿ ರೂ. ಗಳ ವೆಚ್ಚದಲ್ಲಿ 64 ಸಂಚಾರಿ ಆರೋಗ್ಯ ಘಟಕಗಳ ಪ್ರಾರಂಭ.
*
ಬೆಳಗಾವಿ
ನಗರ
ಲಸಿಕಾ
ಸಂಸ್ಥೆಯ
ಆವರಣದಲ್ಲಿ
5
ಕೋಟಿ
ರೂ.
ಗಳ
ವೆಚ್ಚದಲ್ಲಿ
ಆಯುಷ್
ಔಷಧ
ತಯಾರಿಕಾ
ಕೇಂದ್ರ
ಸ್ಥಾಪನೆ.
*
4.5
ಕೋಟಿ
ರೂ.
ಗಳ
ವೆಚ್ಚದಲ್ಲಿ
150
ಸಮುದಾಯ
ಆರೋಗ್ಯ
ಕೇಂದ್ರಗಳಲ್ಲಿ
ಶವಾಗಾರಗಳನ್ನು
ತಲಾ
3
ಲಕ್ಷ
ರೂ.ಗಳ
ವೆಚ್ಚದಲ್ಲಿ
ನಿರ್ಮಿಣ.
*
ಚಿತ್ರದುರ್ಗ
ಮತ್ತು
ಚಿಕ್ಕಮಗಳೂರು
ಜಿಲ್ಲಾ
ಆಸ್ಪತ್ರೆಗಳಲ್ಲಿ
50
ಹಾಸಿಗೆಗಳ
ಸಂಯೋಜಿತ
ಆಯುಷ್
ಆಸ್ಪತ್ರೆಗಳನ್ನು
ಒಟ್ಟಾರೆ
6
ಕೋಟಿ
ರೂ.
ಗಳ
ವೆಚ್ಚದಲ್ಲಿ
ಸ್ಥಾಪನೆ.
*
ಸ್ಥಳೀಯ
ಮಟ್ಟದಲ್ಲಿ
ಪರಿಣಾಮಕಾರಿ
ಆರೋಗ್ಯ
ಪಾಲನೆ
ಪರಿಹಾರಗಳ
ಉದ್ದೇಶಕ್ಕಾಗಿ
2
ಕೋಟಿ
ರು.
ರಾಷ್ಟ್ರೀಯ
ಆರೋಗ್ಯ
ಮಿಷನ್
ಅಡಿಯಲ್ಲಿ
*
ಡೆಂಗ್ಯು,
ಮಲೇರಿಯಾ
ಮತ್ತು
ಇತರ
ರೋಗಿಗಳ
ಅಗತ್ಯತೆ
ಪೂರೈಸಲು
ಬಾಗಲಕೋಟೆ,
ವಿಜಯಪುರ,
ಚಾಮರಾಜನಗರ,
ಚಿಕ್ಕಮಗಳೂರು,
ಚಿತ್ರದುರ್ಗ,
ಹಾವೇರಿ,
ಕೊಡಗು,
ಕೋಲಾರ,ತುಮಕೂರು
ಮತ್ತು
ಉತ್ತರ
ಕನ್ನಡದ
10
ಜಿಲ್ಲಾ
ಆಸ್ಪತ್ರೆಗಳಲ್ಲಿ
6
ಕೋಟಿ
ರುಗಳ
ವೆಚ್ಚದಲ್ಲಿ
ರಕ್ತ
ವಿದಳನ
ಘಟಕಗಳು.
* ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಲಭ್ಯತೆಯನ್ನು ಹೆಚ್ಚಿಸಲು ಹತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಎನ್ ಬಿ ಸ್ನಾತಕೋತ್ತರ ಕೋಸ್.
* ರಾಜ್ಯದ 21 ಜಿಲ್ಲಾ ಆಸ್ಪತ್ರೆಗಳು, 146 ತಾಲ್ಲೂಕು ಆಸ್ಪತ್ರೆಗಳು ಹಾಗೂ 21 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 188 RO*UV ಕುಡಿಯುವ ನೀರಿನ ಸೌಲಭ್ಯ.
* ಪ್ರಸ್ತುತ ರಾಜ್ಯದ 3 ಆಸ್ಪತ್ರೆಗಳಲ್ಲಿ ಇ-ಹಾಸ್ಪಿಟಲ್ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ 13.78 ಕೋಟಿ ರುಗಳ ವೆಚ್ಚದಲ್ಲಿ 206 ಸಮುದಾಯ ಆರೋಗ್ಯ ಕೇಂದ್ರಗಳು, 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ.
* ತಾಯಿ ಮತ್ತು ಮಗುವಿನ ಅನುಸರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್ ಗಳು.