ಸಿದ್ದರಾಮಯ್ಯ ಬಜೆಟ್ ಬಗ್ಗೆ ನಿರೀಕ್ಷೆಗಳೇನು?
ಬೆಂಗಳೂರು, ಮಾರ್ಚ್ 17 : ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 1.50 ಲಕ್ಷ ಕೋಟಿ ರೂ. ದಾಟಲಿದ್ದು, ಕೃಷಿ, ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ದೊರೆಯುವ ಸಾಧ್ಯತೆ ಇದೆ.
ಮಾರ್ಚ್ 18ರ ಶುಕ್ರವಾರ ಬೆಳಗ್ಗೆ 11.30ಕ್ಕೆ 11ನೇ ಬಾರಿ ಬಜೆಟ್ ಮಂಡನೆ ಮಾಡಲಿರುವ ಸಿದ್ದರಾಮಯ್ಯ ಅವರು, ಹಲವು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಪ್ರಕಟಿಸಲಿದ್ದಾರೆ. ಬಡವರಿಗೆ, ಕೃಷಿಕರಿಗೆ ಬಜೆಟ್ನಲ್ಲಿ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ. [ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]
ಜಿಲ್ಲಾ
ಮತ್ತು
ತಾಲೂಕು
ಪಂಚಾಯತಿ
ಚುನಾವಣೆಯಲ್ಲಿ
ನೀಡಿದ
ಭರವಸೆಯಂತೆ
ಗ್ರಾಮಗಳಲ್ಲಿ
ಶುದ್ಧ
ಕುಡಿಯುವ
ನೀರಿನ
ಘಟಕಗಳನ್ನು
ಹೆಚ್ಚಾಗಿ
ಸ್ಥಾಪಿಸಲು
ಆದ್ಯತೆ
ನೀಡಲಿದ್ದಾರೆ.
ಬರಗಾಲ
ಮತ್ತು
ಸಾಲಭಾಧೆಯಿಂದ
ಕಂಗೆಟ್ಟಿರುವ
ರೈತರಿಗೂ
ಅನೇಕ
ಸೌಲಭ್ಯಗಳನ್ನು
ನೀಡುವ
ನಿರೀಕ್ಷೆ
ಇದೆ.
[ಕೇಂದ್ರ
ಬಜೆಟ್
2016:
ಯಾವುದು
ಅಗ್ಗ?
ಯಾವುದು
ತುಟ್ಟಿ?]
ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೇರದೆ ಪರ್ಯಾಯ ಮೂಲಗಳಿಂದ ಹೆಚ್ಚಿನ ಆದಾಯ ಸಂಗ್ರಹಿಸಲು ಒತ್ತು ನೀಡಲಿದ್ದಾರೆ. ಉಳ್ಳವರಿಂದ ಪಡೆದು ಇಲ್ಲದವರಿಗೆ ತಲುಪಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಬಡವರ ಮೇಲೆ ಯಾವುದೇ ಹೆಚ್ಚಿನ ತೆರಿಗೆ ಹೊರೆ ಹೇರದಿದ್ದರೂ ಮದ್ಯ, ಸಿಗರೇಟು ಸೇರಿದಂತೆ ವ್ಯಸನಗಳಿಗೆ ಅಂಟಿಕೊಂಡವರಿಗೆ ಬಜೆಟ್ ಭಾರವಾಗಲಿದೆ. [ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]
ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ಸ್ವಂತವಾಗಿಯೇ ವಿದ್ಯುತ್ ತಯಾರಿಸುವ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳು ಯೋಚಿಸಿದ್ದು, ವಿದ್ಯುತ್ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ ಎಂದು ತಮ್ಮ ಜತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ಅಧಿಕಾರಿಗಳಿಗೆ ನೇರವಾಗಿ ಹೇಳಿದ್ದಾರೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
ದೇಶದಲ್ಲಿ ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕವೇ ನೀರಿನ ವಿಷಯದಲ್ಲಿ ಹೆಚ್ಚು ಕಷ್ಟಪಡುತ್ತಿರುವ ರಾಜ್ಯ. ಆದರೆ, ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ನೀರನ್ನು ಉಳಿಸಿ ಕಾಪಾಡಿಕೊಂಡು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವೇ ಹೊರತು ಉತ್ಪಾದಿಸಲು ಸಾಧ್ಯವಿಲ್ಲ. [ಬಜೆಟ್ ನಿರೀಕ್ಷೆಗಳೇನು? : ಕೇಳಿ]
ಮುಂದಿನ ಮಳೆಗಾಲದಿಂದ ನೀರನ್ನು ಸಂರಕ್ಷಿಸುವ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿಕೊಳ್ಳಬೇಕು. ನೀರಿರಲಿ, ವಿದ್ಯುತ್ ಇರಲಿ, ಇನ್ನೇನೇ ಇರಲಿ. ರಾಜ್ಯದ ಸಂಪತ್ತು ರಾಜ್ಯದ ಜನರಿಗೆ ಎಂಬುದನ್ನು ಮರೆಯಕೂಡದು.
ಇಂತಹ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು ಕಾರ್ಯಕ್ರಮ ರೂಪಿಸಬೇಕು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇದಕ್ಕೇನು ನೆರವು ಬೇಕೋ? ಆ ನೆರವನ್ನು ನೀಡಲು ಸಿದ್ಧ ಎಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಹಾಗೆಯೇ
ರೈತರು,
ಮಹಿಳೆಯರು,
ಶೋಷಿತರಿಗೆ
ಹೆಚ್ಚಿನ
ಬೆಂಬಲ
ನೀಡುವ
ಯೋಜನೆಗಳನ್ನು
ಜಾರಿಗೊಳಿಸಲು
ಸಿದ್ದರಾಮಯ್ಯ
ಈಗಾಗಲೇ
ತೀರ್ಮಾನಿಸಿದ್ದು,
ಶುಕ್ರವಾರ
ಮಂಡನೆ
ಯಾಗುವ
ಬಜೆಟ್
ನಿರೀಕ್ಷೆ
ಹುಟ್ಟು
ಹಾಕಿದೆ.