ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ
ಬೆಂಗಳೂರು, ಮಾ. 14: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದಾರೆ. ಕೃಷಿ, ಕೈಗಾರಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೂ ಭರಪೂರ ಕೊಡುಗೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಬಜೆಟ್ ನ ಹೈಲೈಟ್ಸ್. ಸೋಲಾರ್ ಬಳಕೆಗೆ ಉತ್ತೇಜನ, ಕಾನೂನು ಪದವಿಧರರಿಗೆ ಹೆಚ್ಚುವರಿ ಶುಷ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ನಾಂದಿ ಹಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ.[ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]
*
ಗ್ರಾಮೀಣ
ಭಾಗದ
ಸಾವಿರ
ಶಾಲೆಗಳಿಗೆ
ಟೆಲಿ
ಶಿಕ್ಷಣ
ಕಾರ್ಯಕ್ರಮ
ವಿಸ್ತರರಣೆ.
*
ಸರ್ಕಾರಿ
ಶಾಲೆ,
ಕಾಲೇಜುಗಳಲ್ಲಿ
ಗ್ರಂಥಾಲಯ,
ಪ್ರಯೋಗಾಲಯ,
ಹೊಸ
ಕಟ್ಟಡ,
ಹೆಚ್ಚುವರಿ
ಕಟ್ಟಡ,
ಶೌಚಾಲಯ,
ಕುಡಿವ
ನೀರು
ಸೇರಿದಂತೆ
ಇನ್ನಿತರ
ಮೂಲ
ಸೌಕರ್ಯ
ಕಲ್ಪಿಸಲು
110
ಕೋಟಿ
ರೂ.
*
ಶಾಲಾ
ಕಾಲೇಜುಗಳನ್ನು
ಖಾಸಗಿ
ಸಹಭಾಗಿತ್ವದಲ್ಲಿ
ಅಭಿವೃದ್ಧಿಪಡಿಸಲು
'ಶಾಲೆಗಾಗಿ
ನಾವು
ನೀವು'
ಕಾರ್ಯಕ್ರಮ
ಅನುಷ್ಠಾನ
*
1ರಿಂದ
10ನೇ
ತರಗತಿ
ವರೆಗೆ
54.54
ಲಕ್ಷ
ಮಕ್ಕಳಿಗೆ
ಒಂದು
ಜೊತೆ
ಶೂ
ಮತ್ತು
ಎರಡು
ಜೊತೆ
ಸಾಕ್ಸ್
ಒದಗಿಸಲು
120
ಕೋಟಿ
ರೂ.
*
100
ಸರ್ಕಾರಿ
ಹಿರಿಯ
ಪ್ರಾಥಮಿಕ
ಶಾಲೆಗಳು,
ನೂರು
ಪ್ರೌಢಶಾಲೆಗಳು
ಹಾಗೂ
ನೂರು
ಪದವಿ
ಪೂರ್ವ
ಕಾಲೇಜುಗಳಿಒಗೆ
ಸೋಲಾರ್
ಎಜುಕೇಷನಲ್
ಕಿಟ್[ಬಜೆಟ್
ನಲ್ಲಿ
ಬೆಂಗಳೂರಿಗೆ
ಸಿಕ್ಕಿದ್ದೇನು?]
*
ಪ್ರಾಥಮಿಕ
ಶಿಕ್ಷಣಕ್ಕೆ
ಒಟ್ಟಾರೆ
16,204
ಕೋಟಿ
ರೂ.
ನಿಗದಿ
*
ಗ್ರಾಮೀಣ
ಭಾಗದ
ವಿದ್ಯಾರ್ಥಿಗಳು
ರಾಷ್ಟ್ರೀಯ
ಮತ್ತು
ಅಂತಾರಾಷ್ಟ್ರೀಯ
ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ
ಪಾಲ್ಗೊಳ್ಳುವಂತೆ
ಉತ್ತೇಜಿಸಲು
ಡಿಎಸ್ಇಆರ್ಟಿ
ಮತ್ತು
ಮೆ.ಹೆಚ್ಸಿಎಲ್
ಫೌಂಡೇಷನ್
ವತಿಯಿಂದ
'ಸ್ಪರ್ಧಾಕಲಿ'
ಕಾರ್ಯಕ್ರಮ
ಜಾರಿ.
*
ಚಿಕ್ಕಬಳ್ಳಾಪುರದ
ಸರ್ಕಾರಿ
ಬಿಇಡಿ
ಕಾಲೇಜಿಗೆ
ಉನ್ನತೀಕರಣ
ಭಾಗ್ಯ
*
ಉನ್ನತ
ಶಿಕ್ಷಣ
ಸಹಭಾಗಿತ್ವ
ಎಂಬ
ಹೆಸರಿನಡಿ
ಸಮುದಾಯ
ಸಹಭಾಗಿತ್ವ
ಯೋಜನೆ
ರೂಪಿಸಲು
ಉದ್ದೇಶಿಸಲಾಗಿದ್ದು,
ಕಾಲೇಜುಗಳು,
ಪಾಲಿಟೆಕ್ನಿಕ್ಗಳು
ಮತ್ತು
ವಿವಿಗಳಲ್ಲಿ
ಪ್ರಾರಂಭಿಸಲು
ಆಲೋಚನೆ
*
ಸ್ವಾವಲಂಬನೆ
ಯೋಜನೆ:
ಉದ್ದಿಮೆ
ಆರಂಭಿಸಲು
ವಿದ್ಯಾರ್ಥಿಗಳು
ಬ್ಯಾಂಕಿನಿಂದ
ಪಡೆಯುವ
ವಾರ್ಷಿಕ
10
ಲಕ್ಷದವರೆಗಿನ
ಸಾಲದ
ಮೇಲಿನ
ಬಡ್ಡಿಯನ್ನು
ಮೂರು
ವರ್ಷಗಳವರೆಗೆ
ಸರ್ಕಾರವೇ
ಭರಿಸಲಿದ್ದು
ಇದಕ್ಕೆ
10
ಕೋಟಿ
ರೂ.
ನಿಗದಿ.
*
ಉನ್ನತ
ಶಿಕ್ಷಣದಲ್ಲಿ
ಅಧ್ಯಾಪಕರ
ಕೊರತೆ
ನೀಗಿಸಲು
ಜ್ಞಾನ
ಪ್ರಸಾರ
ಯೋಜನೆಯಡಿ
ಗುಣಮಟ್ಟದ,
ಏಕರೂಪದ
ಪಠ್ಯಾಂಶ
ಒದಗಿಸಲು
ತೀರ್ಮಾನ
*
ಹಿರಿಮೆ-ಗರಿಮೆ
ಯೋಜನೆಯಡಿ
ನೂರು
ವರ್ಷ,
75
ವರ್ಷ
ಹಾಗೂ
50
ವರ್ಷ
ಪೂರ್ಣಗೊಳಿಸಿದ
ಸರ್ಕಾರಿ
ಉನ್ನತ
ಶಿಕ್ಷಣ
ಸಂಸ್ಥೆಗಳ
ಮೂಲಸೌಕರ್ಯ
ಕಲ್ಪಿಸಲು
10
ಕೋಟಿ
ರೂ.
ಅನುದಾನ.
*
ನೂರು
ವರ್ಷ
ಪೂರೈಸಿರುವ
ಮೈಸೂರು
ವಿವಿ
ಶತಮಾನೋತ್ಸವ
ಆಚರಣೆಗಾಗಿ
50
ಕೋಟಿ
ರೂ.
*
ಹಿಂದುಳಿದ
ವಿದ್ಯಾರ್ಥಿಗಳಲ್ಲಿ
ಉತ್ತಮ
ಕಲಿಕಾ
ಪರಿಣಾಮ
ಉಂಟು
ಮಾಡಲು
'ಅಭ್ಯಾಸ'
ಯೋಜನೆಯಡಿ
ಪ್ರೋತ್ಸಾಹ
*
ಕರ್ನಾಟಕ
ಪರೀಕ್ಷಾ
ಪ್ರಾಧಿಕಾರಕ್ಕೆ
40
ಕೋಟಿ
ರೂ.
ಅನುದಾನ
*
ಕರ್ನಾಟಕ
ಪರೀಕ್ಷಾ
ಪ್ರಾಧಿಕಾರದ
ಉತ್ತಮ
ಆಡಳಿತಕ್ಕಾಗಿ
ಕಲಬುರಗಿ
ಮತ್ತು
ಧಾರವಾಡದಲ್ಲಿ
ಎರಡು
ವಲಯ
ಕಚೇರಿ
ಸ್ಥಾಪನೆ
*
ಮಂಗಳೂರು
ವಿವಿ
ವ್ಯಾಪ್ತಿಯಲ್ಲಿ
ರಾಣಿ
ಅಬ್ಬಕ್ಕ
ಪೀಠ
ಸ್ಥಾಪನೆ,
ಒಂದು
ಕೋಟಿ
ರೂ.
ಅನುದಾನ.
*
ನೆಹರೂ
125ನೇ
ಜನ್ಮ
ದಿನಾಚರಣೆ
ಹಾಗೂ
50ನೇ
ಪುಣ್ಯತಿಥಿ
ಸ್ಮರಣಾರ್ಥ
ಬೆಂಗಳೂರು
ವಿವಿಯಲ್ಲಿ
ನೆಹರೂ
ಚಿಂತನ
ಕೇಂದ್ರ
ಸ್ಥಾಪಿಸಲು
3
ಕೋಟಿ
ರೂ.
*
ಸಾಹಿತಿ
ದಿ.ಯು.ಆರ್.ಅನಂತಮೂರ್ತಿ
ಹೆಸರಿನಲ್ಲಿ
ಮೈಸೂರು
ವಿವಿಯಲ್ಲಿ
ಅಧ್ಯಯನ
ಪೀಠ
ಸ್ಥಾಪನೆ.
ಒಂದು
ಕೋಟಿ
ಅನುದಾನ.
*
ಎಲ್ಲ
ವಿವಿಗಳಲ್ಲಿಯೂ
ಹೊರ
ವಿಶ್ವವಿದ್ಯಾಲಯದ
ಎಲ್ಲ
ಕೋರ್ಸ್ಗಳಿಗೆ
ವಿದ್ಯಾರ್ಥಿಗಳ
ಪ್ರವೇಶದಲ್ಲಿ
ಶೇ.15ರಷ್ಟು
ಹೆಚ್ಚುವರಿ
ಸೀಟು
ನೀಡಲು
ನಿರ್ಧಾರ.
*
ಉನ್ನತ
ಶಿಕ್ಷಣದಲ್ಲಿ
ಅಂತಾರಾಷ್ಟ್ರೀಯತೆಯನ್ನು
ಉತ್ತೇಜಿಸಲು
ಕರ್ನಾಟಕ
ರಾಜ್ಯ
ಉನ್ನತ
ಶಿಕ್ಷಣ
ಪರಿಷತ್ನಿಂದ
ಸಾಗರೋತ್ತರ
ಶಿಕ್ಷಣ
ಕೇಂದ್ರ
ಸ್ಥಾಪನೆ.
*
ಕೆಂಗೇರಿ
ಬಳಿ
ಗಾಣಕಲ್
ಗ್ರಾಮದಲ್ಲಿ
ರಾಷ್ಟ್ರೀಯ
ಮಟ್ಟದ
ಚಿತ್ರಕಲಾ
ಶಿಕ್ಷಣದ
ಕರ್ನಾಟಕ
ಚಿತ್ರಕಲಾ
ಪರಿಷತ್
ಹೊರ
ಆವರಣ
ಕೇಂದ್ರ
ಸ್ಥಾಪಿಸಲು
ಐದು
ವರ್ಷಗಳಲ್ಲಿ
20
ಕೋಟಿ
ವಿಶೇಷ
ಅನುದಾನ
ನೀಡಲಾಗುವುದು.
*
ನಂಜನಗೂಡು
ತಾಲೂಕಿನ
ಹಿಮ್ಮಾವು
ಗ್ರಾಮದಲ್ಲಿ
ನಳಂದ
ಬೌದ್ಧ
ಅಧ್ಯಯನ
ಕೇಂದ್ರ
ಸ್ಥಾಪಿಸಲು
5
ಕೋಟಿ
ನೆರವು.
*
ಉನ್ನತ
ಶಿಕ್ಷಣ
ಕ್ಚೇತ್ರಕ್ಕೆ
ಬಜೆಟ್ನಲ್ಲಿ
ಒಟ್ಟು
3896
ಕೋಟಿ
ಒದಗಿಸಲಾಗಿದೆ.
*
2013-14ನೇ
ಸಾಲಿನಲ್ಲಿ
ಘೋಷಿಸಲಾದ
ಆರು
ವೈದ್ಯ
ಕಾಲೇಜುಗಳಿಗೆ
(ಕಲಬುರಗಿ,
ಗದಗ,
ಕೊಪ್ಪಳ,
ಕಾರವಾರ,
ಚಾಮರಾಜನಗರ
ಹಾಗೂ
ಕೊಡಗು)
ಅಗತ್ಯ
ಮೂಲಸೌಲಭ್ಯ
*
ಗುಲ್ಬರ್ಗದಲ್ಲಿ
ಹೃದ್ರೋಗ
ಚಿಕಿತ್ಸಾ
ಘಟಕವನ್ನು
15
ಕೋಟಿ
ರೂ.
ವೆಚ್ಚದಲ್ಲಿ
ಸ್ಥಾಪನೆ.
ರಾಜೀವ್ಗಾಂಧಿ
ವಿವಿ,
ಹೈದರಾಬಾದ್
ಕರ್ನಾಟಕ
ಅಭಿವೃದ್ಧಿ
ಮಂಡಳಿ
ತಲಾ
ಆರು
ಕೋಟಿ
ರೂ.
*
ಮೂತ್ರಪಿಂಡ
ರೋಗ
ಚಿಕಿತ್ಸೆಗಾಗಿ
ಬೆಂಗಳೂರಿನ
ನೆಫ್ರಾಲಜಿ
ಸಂಸ್ಥೆಯಲ್ಲಿ
ಮೂತ್ರಪಿಂಡ
ಕಸಿ
ಕಾರ್ಯಕ್ರಮ
ಜಾರಿಗೆ.
*
ವೈದ್ಯ
ಶಿಕ್ಷಣಕ್ಕೆ
ಒಟ್ಟು
6107
ಕೋಟಿ
ರೂ.
ಮೀಸಲಿಡಲಾಗಿದೆ.
*
ರಾಜ್ಯ
ಕಾನೂನು
ವಿವಿಗೆ
ಕಾರ್ಯಸೌಧ
*
ಕಾನೂನು
ಶಾಲೆ,
ವಿದ್ಯಾರ್ಥಿನಿಲಯಗಳ
ಕಟ್ಟಡಗಳ
ನಿರ್ಮಾಣ
ಹಾಗೂ
ಬೋಧಕ
ಮತ್ತು
ಬೋಧಕೇತರ
ಸಿಬ್ಬಂದಿ
ನೇಮಕಾತಿ
ಸಲುವಾಗಿ
9
ಕೋಟಿ
ರೂ.
ಮೀಸಲು
*
ಕಾನೂನು
ಮತ್ತು
ನ್ಯಾಯಾಲಯಗಳ
ಇಲಾಖೆಗೆ
ಒಟ್ಟಾರೆಯಾಗಿ
597
ಕೋಟಿ
ರೂ.
*
ವಿಭಾಗೀಯ
ಮಟ್ಟದಲ್ಲಿ
ವಕೀಲರಿಗೆ
60
ಲಕ್ಷ
ರೂ
ವೆಚ್ಚದಲ್ಲಿ
ವೃತ್ತಿ
ತರಬೇತಿ.
*
2
ಕೋಟಿ
ವೆಚ್ಚದಲ್ಲಿ
ಜಿಲ್ಲಾ
ಅಸೋಸಿಯೇಷನ್ಗಳಲ್ಲಿ
ಇ-ಲೈಬ್ರೆರಿಗಳ
ಸ್ಥಾಪನೆ.
*
ಕಾನೂನು
ಪದವೀಧರರಿಗೆ
ನೀಡುವ
ಮಾಸಿಕ
ಶಿಷ್ಯ
ವೇತನ
1000ದಿಂದ
2000ಕ್ಕೆ
ಹೆಚ್ಚಳ