ಬುಧವಾರದಿಂದ ಕಾರ್ಕಳದಲ್ಲಿ ಮಹಾ ಮಸ್ತಕಾಭಿಷೇಕ
ಉಡುಪಿ, ಜ. 20 : ಕಾರ್ಕಳದಲ್ಲಿ ಭಗವಾನ್ ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. 12 ವರ್ಷಗಳ ನಂತರ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯಲಿದ್ದು, ಜ.21ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಸ್ತಕಾಭಿಷೇಕದ
ಸಮಯದಲ್ಲಿ
ಹಲವು
ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ
ಎಂದು
ಮಹಾಮಸ್ತಕಾಭಿಷೇಕ
ಸಮಿತಿಯ
ಕಾರ್ಯಾಧ್ಯಕ್ಷ
ಡಾ.ಎಂ.ಎನ್.
ರಾಜೇಂದ್ರ
ಕುಮಾರ್
ಹೇಳಿದ್ದಾರೆ.
ಕಾರ್ಕಳ
ಜೈನಮಠಾಧೀಶ
ಲಲಿತಕೀರ್ತಿ
ಭಟ್ಟಾರಕರ
ಮಾರ್ಗದರ್ಶನದಲ್ಲಿ,
ಧರ್ಮಸ್ಥಳದ
ಧರ್ಮಾಧಿಕಾರಿ
ವೀರೇಂದ್ರ
ಹೆಗ್ಗಡೆ
ಅವರ
ನೇತೃತ್ವದಲ್ಲಿ
ಮಹಾಮಸ್ತಕಾಭಿಷೇಕ
ಸಮಿತಿ
ಹಾಗೂ
ಉಪಸಮಿತಿಗಳನ್ನು
ರಚಿಸಲಾಗಿದೆ
ಎಂದು
ಹೇಳಿದರು.
ಕಾಮಗಾರಿಗಳು : ಬೆಟ್ಟದ ಹೊರಾಂಗಣದಲ್ಲಿ ವಿಶಾಲವಾದ ಸ್ಥಳಾವಕಾಶವನ್ನು ಕಲ್ಪಿಸಲು 7 ಲಕ್ಷ ರೂ. ವೆಚ್ಚದಲ್ಲಿ ನೆಲಸಮತಟ್ಟುಗೊಳಿಸಲಾಗಿದೆ. ಬಾಹುಬಲಿ ಬೆಟ್ಟ ಹತ್ತಲು ಮತ್ತು ಇಳಿಯಲು ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಬೆಟ್ಟಕ್ಕೆ ಹೋಗುವ ವಾಹನದ ರಸ್ತೆಯನ್ನು ಅಗಲಗೊಳಿಸಲಾಗಿದೆ. ಬೆಟ್ಟದಲ್ಲಿ ಜೈನ್ ಮಿಲನ್ ವತಿಯಿಂದ ಶುದ್ಧ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಏಕಕಾಲದಲ್ಲಿ 5 ಅಂತಸ್ತಿನ ಮೂಲಕ ಸುಮಾರು 500 ಜನರಿಗೆ ಮಸ್ತಕಾಭಿಷೇಕ ನೆರವೇರಿಸಲು ಮೊತ್ತ ಮೊದಲ ಬಾರಿಗೆ ಉಕ್ಕಿನ ಅಟ್ಟಳಿಗೆ ನಿರ್ಮಾಣ ಮಾಡಲಾಗಿದೆ. ಬಾಹುಬಲಿ ಬೆಟ್ಟದ ಸುತ್ತಮುತ್ತ 6 ಕಡೆಗಳಲ್ಲಿ ಸುಮಾರು 35 ಎಕರೆ ಪ್ರದೇಶಗಳಲ್ಲಿ ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. [ಜ.21ರಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ]
ವಸ್ತು ಪ್ರದರ್ಶನ : ಸುಮಾರು 3.5 ಎಕರೆ ವಿಸ್ತಾರವಾದ ಬೆಟ್ಟದ ಬುಡದ ಜಾಗದಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಅರಣ್ಯ, ಕಷಿ, ರೇಷ್ಮೆ ಮೊದಲಾದ ಇಲಾಖೆಗಳ ವಸ್ತು ಪ್ರದರ್ಶನಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದ್ದು, 356 ಮಳಿಗೆಗಳನ್ನು ತೆರೆಯಲಾಗಿದೆ ಎಂದರು.
ಕಾರ್ಕಳಕ್ಕೆ ಬರುವ ಯಾತ್ರಾರ್ಥಿಗಳಿಗಳ ಅನುಕೂಲಕ್ಕೆ ಸಂಚಾರಿ ವೈದ್ಯಕೀಯ ಘಟಕ, ತುರ್ತು ವಾಹನ, ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ದಿನದ 24 ಗಂಟೆಗಳ ಕಾಲ ಸ್ವಚ್ಛತೆ, ಧೂಳು ನಿವಾರಣೆಗಾಗಿ ನಿರಂತರ ನೀರಿನ ಸಿಂಪರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಸತಿ ವ್ಯವಸ್ಥೆ : ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಈ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸ್ಥಳೀಯ ಹಾಗೂ ಆಸುಪಾಸಿನ ಹೋಟೆಲ್ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.