ಕರ್ನಾಟಕ ಬಜೆಟ್ 2017ರ 24 ಪ್ರಮುಖ ಅಂಶಗಳು..
ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಜನಪ್ರಿಯ ಬಜೆಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಕಳೆದ ಸಾಲಿನ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಬಾರಿ ಶೇ 14ರಷ್ಟು ಹೆಚ್ಚಾಗಿದೆ. ಆದರೆ ಬಂಡವಾಳ ವೆಚ್ಚ (33,630) ಅಂದರೆ ಆ ಖರ್ಚಿನಿಂದ ಮತ್ತೆ ಆದಾಯ ಬರುವಂಥದ್ದು ಕಡಿಮೆ ಅನಿಸುತ್ತದೆ.
ಕೃಷಿಗಾಗಿ ಮೀಸಲಿಟ್ಟಿರುವ ಹಣದ ಪ್ರಮಾಣ ಹೆಚ್ಚಿದೆ. ಇರಲಿ ಹೀಗೆ ಬಿಡಿಬಿಡಿಯಾಗಿ ಹೇಳುವ ಬದಲು ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ತುಂಬ ಪ್ರಮುಖವಾದವು ಎನಿಸಿದ 24 ಅಂಶಗಳನ್ನು ಆರಿಸಿ, ನಿಮ್ಮ ಮುಂದೆ ಇಡುತ್ತಿದ್ದೇವೆ.
*
ಕೃಷಿ
ಕ್ಷೇತ್ರಕ್ಕೆ
5080
ಕೋಟಿ
ರುಪಾಯಿ
*
ಮೊದಲ
ವರ್ಷದ
ಎಂಜಿನಿಯರಿಂಗ್,
ವೈದ್ಯಕೀಯ,
ಪಾಲಿಟೆಕ್ನಿಕ್
ಮತ್ತು
ಪ್ರಥಮ
ದರ್ಜೆ
ಕಾಲೇಜಿಗಳ
ವಿದ್ಯಾರ್ಥಿಗಳಿಗೆ
ಉಚಿತ
ಲ್ಯಾಪ್
ಟಾಪ್
*
ಕಡಿಮೆ
ದರದಲ್ಲಿ
ತಿಂಡಿ
ಹಾಗೂ
ಊಟ
ಒದಗಿಸುವ
ನಮ್ಮ
ಕ್ಯಾಂಟಿನ್
ಬೆಂಗಳೂರಿನಲ್ಲಿ,
ರಾಜ್ಯದ
ಇತರ
ಎಲ್ಲ
ಜಿಲ್ಲೆಗಳಲ್ಲೂ
ಸವಿರುಚಿ
ಮೊಬೈಲ್
ಕ್ಯಾಂಟಿನ್
*
ಮೈಸೂರಿನ
ಹಿಮ್ಮಾವಿನಲ್ಲಿ
ಫಿಲ್ಮ್
ಸಿಟಿ
ಸ್ಥಾಪನೆ
[ಬಜೆಟ್:
ಸಾಲ
ಮನ್ನಾ
ಇಲ್ಲ,
ನೀರಾಕ್ಕೆ
ಲೈಸೆನ್ಸ್,
ಕೃಷಿಗೆ
ಸಿದ್ದು
ನೀಡಿದ್ದೇನು?]
* ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ಶುಲ್ಕ ಗರಿಷ್ಠ 200 ರುಪಾಯಿಗೆ ಮಿತಿ.
* ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಅನುದಾನ. ಏಕೀಕರಣದ ಅರವತ್ತು ವರ್ಷಗಳ ನೆನಪಿಗಾಗಿ ವಿಶ್ವಕನ್ನಡ ಸಮ್ಮೇಳನ
* ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗ
* ತಾಪಂ ಅಧ್ಯಕ್ಷರ ಗೌರವಧನ 6 ಸಾವಿರಕ್ಕೆ, ಜಿಪಂ ಸದಸ್ಯರದು 5 ಸಾವಿರಕ್ಕೆ, ತಾಪಂ ಸದಸ್ಯರದು 3 ಸಾವಿರಕ್ಕೆ ಹಾಗೂ ಗ್ರಾಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ
* ನಿವೃತ್ತ ಪತ್ರಕರ್ತರ ಮಾಸಾಶನ 8ರಿಂದ 10 ಸಾವಿರಕ್ಕೆ ಏರಿಕೆ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್
* 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ. 4 ಸ್ಟ್ರೋಕ್ ಎಲ್ ಪಿಜಿಯ ಹತ್ತು ಸಾವಿರ ಆಟೋಗಳಿಗೆ 30 ಸಾವಿರ ಸಹಾಯಧನ
* ಎರಡು ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ
* ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವೈಫೈ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ
* 21 ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ
* 25 ಲಕ್ಷ ರೈತರಿಗೆ 13,500 ಕೋಟಿ ಕೃಷಿ ಸಾಲ ನೀಡುವ ಗುರಿ
* ರಾಜ್ಯದ ಪ್ರತಿ ಮಾಂಸದ ಅಂಗಡಿಗೆ 1.25 ಲಕ್ಷ ಅನುದಾನ
* ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರುಪಾಯಿ ವಿಶೇಷ ಗೌರವಧನ
* ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18ರಿಂದ 40 ಯೂನಿಟ್ ಗೆ ಏರಿಕೆ
* ಜನೌಷಧಿ ಜೆನರಿಕ್ ಔಷಧಿ ಮಳಿಗೆ ಯೋಜನೆ ಅಡಿ 200 ಮೆಡಿಕಲ್ ಷಾಪ್
* ಸ್ವಾತಂತ್ರ್ಯ ಯೋಧರ ಮಾಸಾಶನ 10 ಸಾವಿರ, ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನ 4 ಸಾವಿರಕ್ಕೆ ಹೆಚ್ಚಳ