ಕನ್ನಡಿಗ ದತ್ತು ಸುಪ್ರೀಂಕೋರ್ಟ್ ನೂತನ ಸಿಜೆ
ಬೆಂಗಳೂರು, ಸೆ.4 : ಕರ್ನಾಟಕದವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಸಿಕ್ಕಿದೆ. ಕನ್ನಡಿಗರಾದ ಎಚ್.ಎಲ್.ದತ್ತು ಅವರು ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಚಿಕ್ಕಮಗಳೂರು ಮೂಲದ ದತ್ತು ಅವರು 42ನೇ ಸಿಜೆಯಾಗಿ ಸೆ.28ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಸದ್ಯ
ಸುಪ್ರೀಂಕೋರ್ಟ್
ಮುಖ್ಯ
ನ್ಯಾಯಮೂರ್ತಿಯಾಗಿರುವ
ಆರ್.ಎಂ.ಲೋಧಾ
ಅವರು,
ಸೆ.27ರಂದು
ನಿವೃತ್ತಿ
ಹೊಂದಲಿದ್ದು,
ಅವರ
ಸ್ಥಾನವನ್ನು
ಕರ್ನಾಟಕದ
ಹಂದ್ಯಾಲ
ಲಕ್ಷ್ಮೀನಾರಾಯಣಸ್ವಾಮಿ
ದತ್ತು
(ಎಚ್.ಎಲ್.
ದತ್ತು)
ಅವರು
ಅಲಂಕರಿಸಲಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ಸಂಜೆ ನ್ಯಾ.ದತ್ತು ಅವರ ನೇಮಕಕ್ಕೆ ಅಂತಿಮ ಒಪ್ಪಿಗೆ ನೀಡಿದ್ದಾರೆ. ನ್ಯಾ.ಲೋಧಾ ಅವರ ನೇತೃತ್ವದ ನ್ಯಾಯಾಧೀಶರ ನೇಮಕಾತಿ ಸಮಿತಿ (ಕೊಲಿಜಿಯಂ), ದತ್ತು ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಡತ ರವಾನಿಸಿತ್ತು. ಸರ್ಕಾರವೂ ಇದನ್ನು ಒಪ್ಪಿ ರಾಷ್ಟ್ರಪತಿಗಳಿಗೆ ರವಾನಿಸಿತ್ತು. [ದತ್ತು ಅವರ ಸಂಕ್ಷಿಪ್ತ ಪರಿಚಯ]
ಸೆ.28 ರಂದು 42ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ದತ್ತು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಅವಧಿ 2015ರ ಡಿಸೆಂಬರ್ 3ರ ವರೆಗೆ ಇರಲಿದೆ. ಸದ್ಯ ನ್ಯಾ.ದತ್ತು ಅವರು 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ಪೀಠದ ನೇತೃತ್ವ ವಹಿಸಿದ್ದಾರೆ. ಈ ಹಿಂದೆ ಅವರನ್ನು ಲೋಕಪಾಲ ಆಯ್ಕೆ ಸಮಿತಿಗೂ ಶಿಫಾರಸು ಮಾಡಲಾಗಿತ್ತು. [ಅಮಿತ್ ಶಾ ಗೆ ಕ್ಲೀನ್ ಚಿಟ್ ನೀಡಿಲ್ಲ: ಸದಾಶಿವಂ]
ನಾಲ್ಕನೇ ಕನ್ನಡಿಗರು : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆ ಅಲಂಕರಿಸುತ್ತಿರುವ ನ್ಯಾ.ದತ್ತು ಅವರು ನಾಲ್ಕನೇ ಕನ್ನಡಿಗರಾಗಿದ್ದಾರೆ. ಇದುವರೆಗೂ ಇ.ಎಸ್. ವೆಂಕಟರಾಮಯ್ಯ, ಎಂ.ಎನ್. ವೆಂಕಟಾಚಲಯ್ಯ, ಎಸ್. ರಾಜೇಂದ್ರ ಬಾಬು ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.