ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್
ಬೆಂಗಳೂರು, ಸೆಪ್ಟೆಂಬರ್ 06 : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಕರೆ ನೀಡಿದೆ.
ಸುಪ್ರೀಂಕೋರ್ಟ್
ತಮಿಳುನಾಡಿಗೆ
ಪ್ರತಿದಿನ
15,000
ಕ್ಯೂಸೆಕ್
ನೀರು
ಹರಿಸಬೇಕು
ಎಂದು
ಸೋಮವಾರ
ಆದೇಶ
ನೀಡಿದೆ.
ಈ
ಆದೇಶ
ಹೊರಬಿದ್ದ
ಬಳಿಕ
ಮಂಡ್ಯ,
ಶ್ರೀರಂಗಪಟ್ಟಣ,
ಬೆಳಗೋಳ,
ಕೆಆರ್ಎಸ್
ಬಳಿ
ಹಲವು
ಸಂಘಟನೆಗಳು
ಪ್ರತಿಭಟನೆ
ನಡೆಸುತ್ತಿವೆ.[ತಮಿಳುನಾಡಿಗೆ
ನೀರು
ಹರಿಸಿ
ಎಂದ
ಸುಪ್ರೀಂ]
ಬೆಂಗಳೂರಿನಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತಿವೆ.[ಕಾವೇರಿ ತೀರ್ಪು: ರಾಜ್ಯ ಸರ್ಕಾರ ರೈತರ ಕ್ಷಮೆ ಕೇಳಲಿ]
ವಾಟಾಳ್ರಿಂದ ರಸ್ತೆ ತಡೆ : ಸೋಮವಾರ ಸಂಜೆ ರಿಚ್ಮಂಡ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಮುಖ್ಯಸ್ಥ ವಾಟಾಳ್ ನಾಗರಾಜ್ ಅವರು ಸೆಪ್ಟೆಂಬರ್ 9ರಂದು (ಶುಕ್ರವಾರ) ಕರ್ನಾಟಕ ಬಂದ್ ನಡೆಸುವುದಾಗಿ ಹೇಳಿದರು.[ಸುಪ್ರೀಂಗೆ ರಾಜ್ಯದ ಸ್ಥಿತಿ ಮನವರಿಕೆ, ತಮಿಳುನಾಡಿಗೆ ನೀರು ಬಿಡಲ್ಲ]
'ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ಆದರೆ, ತಮಿಳುನಾಡಿಗೆ ನೀರು ಹರಿಯಲು ಬಿಡುವುದಿಲ್ಲ. ಕರ್ನಾಟಕ ಬಂದ್ಗೆ ರಾಜ್ಯದ ಎಲ್ಲಾ ಜನರು ಬೆಂಬಲ ನೀಡಬೇಕು' ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.