ಗಣಪತಿ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ 6 ತಿಂಗಳ ಗಡುವು
ಬೆಂಗಳೂರು, ಜುಲೈ 17: ಮಂಗಳೂರಿನ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಅಧಿಕೃತವಾಗಿ ಒಪ್ಪಿಸಿ, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ತನಿಖೆಗೆ ನ್ಯಾ.ಕೆ.ಎನ್.ಕೇಶವನಾರಾಯಣ ಅವರಿರುವ ಏಕಸದಸ್ಯ ಪೀಠವನ್ನು ನೇಮಿಸಲಾಗಿದೆ.
ಡಿವೈಎಸ್ಪಿ
ಗಣಪತಿ
ಅವರ
ಆತ್ಮಹತ್ಯೆ
ಪ್ರಕರಣದ
ತನಿಖೆ
ನಡೆಸಿರುವ
ಸಿಐಡಿ
ತನ್ನ
ಮಧ್ಯಂತರ
ವರದಿಯನ್ನು
ಸರ್ಕಾರಕ್ಕೆ
ನೀಡಿದೆ.
ಆದರೆ,
ಸಾರ್ವಜನಿಕರು
ಹಾಗೂ
ಪ್ರತಿಪಕ್ಷಗಳ
ಒತ್ತಡಕ್ಕೆ
ಮಣಿದಿರುವ
ಸರ್ಕಾರ
ಹೆಚ್ಚಿನ
ತನಿಖೆ
ಜವಾಬ್ದಾರಿಯನ್ನು
ನ್ಯಾ.
ಕೇಶವ
ನಾರಾಯಣ
ಅವರಿಗೆ
ವಹಿಸಿ
ಶನಿವಾರದಂದು
ಆದೇಶ
ಹೊರಡಿಸಿದೆ.
ತನಿಖಾ
ವರದಿಯನ್ನು
6
ತಿಂಗಳೊಳಗೆ
ಸಲ್ಲಿಸುವಂತೆ
ಸೂಚಿಸಲಾಗಿದೆ.
ವಿಶ್ವೇಶ್ವರಯ್ಯ
ತಾಂತ್ರಿಕ
ವಿವಿ
ಮಾಜಿ
ಕುಲಪತಿ
ಎಚ್.ಮಹೇಶಪ್ಪ
ವಿರುದ್ಧ
ವರದಿ
ನೀಡಿ
ನ್ಯಾ.ಕೇಶವನಾರಾಯಣ
ಅವರು
ಸುದ್ದಿಯಾಗಿದ್ದರು.
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿಯೊಂದಿಗೆ
ಚರ್ಚಿಸಿ
ಅಧಿಕೃತ
ಆದೇಶ
ಹೊರಡಿಸಲಾಗಿದೆ.
ವಿಚಾರಣೆ
ಆಯೋಗ-1952ರ
ಪ್ರಕಾರ
ನ್ಯಾ.ಕೇಶವನಾರಾಯಣ
ಕಾರ್ಯನಿರ್ವಹಿಸಲಿದ್ದು,
6
ತಿಂಗಳೊಳಗೆ
ವರದಿ
ನೀಡಬೇಕಿದೆ.
ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಹೈಕೋರ್ಟ್ ನಿ.ನ್ಯಾ.ಕೆ.ಎನ್ ಕೇಶವ ನಾರಯಣ ನೇತೃತ್ವದ ಸಮಿತಿಗೆ ವಹಿಸಿ ಆದೇಶಿಸಲಾಗಿದೆ pic.twitter.com/S7K2EWUgHk
— Karnataka Varthe (@KarnatakaVarthe) July 16, 2016
4 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ನ್ಯಾಯಮೂರ್ತಿ, ವಿಟಿಯು ಪ್ರಕರಣದಲ್ಲಿ ಮಹೇಶಪ್ಪ ಅವರು ಅಮಾನತು ಆಗಲು ಪ್ರಮುಖ ಪಾತ್ರವಹಿಸಿದ್ದರು. ಈಗ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಳ್ಳುವರೇ ಎಂಬ ಕುತೂಹಲವಿದೆ.