ಪಂಚಾಯಿತಿ ಫೈಟ್ : ಜೆಡಿಎಸ್ ಹಿನ್ನಡೆಗೆ ಕಾರಣ ಬಹಿರಂಗ!
ಮಂಡ್ಯ, ಫೆಬ್ರವರಿ 25 : 'ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹಿನ್ನಡೆಗೆ ಪಕ್ಷದ ನಾಯಕರ ಆಂತರಿಕ ಭಿನ್ನಾಭಿಪ್ರಾಯವೇ ಕಾರಣ' ಎಂದು ಶಾಸಕ ಚೆಲುವರಾಯಸ್ವಾಮಿ ದೂರಿದ್ದಾರೆ. 30 ಜಿಲ್ಲಾ ಪಂಚಾಯಿತಿಗಳ ಪೈಕಿ 2 ಸ್ಥಾನಗಳಲ್ಲಿ ಮಾತ್ರ ಜೆಡಿಎಸ್ ಜಯಗಳಿಸಿದೆ.
ಮಂಡ್ಯದಲ್ಲಿ
ಬುಧವಾರ
ಮಾತನಾಡಿದ
ನಾಗಮಂಗಲ
ಶಾಸಕ
ಚೆಲುವರಾಯಸ್ವಾಮಿ
ಅವರು,
'ಪಕ್ಷದೊಳಗಿನ
ಆಂತರಿಕ
ಭಿನ್ನಾಭಿಪ್ರಾಯ
ಹಾಗೂ
ನಾಯಕರ
ನಡುವಳಿಕೆಗಳಿಂದಲೇ
ರಾಜ್ಯದಲ್ಲಿ
ಜೆಡಿಎಸ್
ಪಕ್ಷಕ್ಕೆ
ಹಿನ್ನಡೆಯಾಗಿದೆ
ಎಂದು
ಅಸಮಾಧಾನ
ವ್ಯಕ್ತಪಡಿಸಿದರು.
['ಪರಿಷತ್
ಚುನಾವಣೆ
ಸೋಲಿನ
ಹೊಣೆ
ಹೊರುವುದಿಲ್ಲ']
'2011ರ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈ ಬಾರಿ 2 ಜಿಲ್ಲೆಗಳಲ್ಲಿ ಮಾತ್ರ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಪಕ್ಷದಲ್ಲಿನ ನಾಯಕರು ತೆಗೆದುಕೊಳ್ಳುವ ಗೊಂದಲದ ನಿರ್ಧಾರ ಹಾಗೂ ವ್ಯತಿರಿಕ್ತ ಹೇಳಿಕೆಗಳೇ ಕಾರಣ' ಎಂದು ದೂರಿದರು.[ದೇವೇಗೌಡ, ಎಚ್ಡಿಕೆಗೆ ಇಕ್ಬಾಲ್ ಅನ್ಸಾರಿ ಬಹಿರಂಗ ಸವಾಲು!]
'ಹಾಸನ ಮತ್ತು ಮಂಡ್ಯ ಜಿಲ್ಲೆ ಹೊರತು ಪಡಿಸಿ ತುಮಕೂರು, ಕೋಲಾರ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಂಡ್ಯ ಜಿಲ್ಲೆಯ ಮತದಾರರು ಕಳೆದ ಬಾರಿಗಿಂತ ಈ ಬಾರಿ ಇನ್ನೂ ಎರಡು ಹೆಚ್ಚು ಸ್ಥಾನವನ್ನು ನೀಡಿ, ಶಕ್ತಿ ತುಂಬುವ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ' ಎಂದರು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ಅಂದಹಾಗೆ ಮಂಡ್ಯ ಜಿಲ್ಲಾ ಪಂಚಾಯಿತಿಯ 41 ಸ್ಥಾನಗಳ ಪೈಕಿ ಜೆಡಿಎಸ್ 27ರಲ್ಲಿ ಜಯಗಳಿಸಿದೆ. ಕಾಂಗ್ರೆಸ್ 13 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಪೈಕಿ ಜೆಡಿಎಸ್ 5ರಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಒಂದು ಸ್ಥಾನಗಳಿಸಿದ್ದರೆ, ಮತ್ತೊಂದರಲ್ಲಿ ಅತಂತ್ರ ಫಲಿತಾಂಶ ಬಂದಿದೆ. [ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಪ್ರಚಾರದ ವೇಳೆ ಚೆಲುವರಾಯಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕಾಣಿಸಿಕೊಳ್ಳದೆ ತಟಸ್ಥವಾಗಿದ್ದರು.