ಫೇಸ್ಬುಕ್ ಖಾತೆ, ಪೊಲೀಸರಿಗೆ ದೂರು ನೀಡಿದ ರೆಡ್ಡಿ
ಬೆಂಗಳೂರು, ಫೆ. 25 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿರುವ ಗಾಲಿ ಜನಾರ್ದನ ರೆಡ್ಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಹೆಸರಿನಲ್ಲಿರುವ ನಕಲಿ ಫೇಸ್ಬುಕ್ ಖಾತೆಗಳನ್ನು ಬಂದ್ ಮಾಡಿ, ಖಾತೆ ತೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಜನಾರ್ದನ
ರೆಡ್ಡಿ
ಅವರ
ಆಪ್ತ
ಸಹಾಯಕರಾದ
ವಿ.ಶಿವಕುಮಾರ್
ಅವರು
ಬೆಂಗಳೂರಿನ
ಸಿಐಡಿ
ಪೊಲೀಸರಿಗೆ
ಈ
ಕುರಿತು
ದೂರು
ನೀಡಿದ್ದಾರೆ.
ಕೆಲವು
ಕಿಡಿಗೇಡಿಗಳು
ಜನಾರ್ದನ
ರೆಡ್ಡಿ
ಅವರ
ಹೆಸರಿನಲ್ಲಿ
ನಕಲಿ
ಖಾತೆ
ತೆರೆದು
ಅವರ
ಘನತೆಗೆ
ಕುತ್ತು
ಬರುವಂತಹ
ಹೇಳಿಕೆಗಳನ್ನು
ಅದರಲ್ಲಿ
ನೀಡುತ್ತಿದ್ದಾರೆ
ಎಂದು
ಆರೋಪಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಅಧಿಕೃತವಾಗಿ ಯಾವುದೇ ಫೇಸ್ಬುಕ್ ಅಕೌಂಟ್ಗಳನ್ನು ಹೊಂದಿಲ್ಲ. ಆದರೆ, ಅವರ ಹೆಸರಿನಲ್ಲಿ ಹಲವು ನಕಲಿ ಖಾತೆಗಳಿದ್ದು, ಇವುಗಳಲ್ಲಿ ಹಲವು ಫೋಟೋ ಮತ್ತು ರೆಡ್ಡಿ ಅವರ ಪರ-ವಿರೋಧ ಹೇಳಿಕೆಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಚಿತ್ರ: ಅಗ್ರಹಾರದಿಂದ ಹೊರ ಬಂದ ರೆಡ್ಡಿಗೆ ಬಹುಪರಾಕ್]
'ರೆಡ್ಡಿ ಅಭಿಮಾನಿಗಳ ಸಂಘ', 'ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಗಳ ಸಂಘ' 'ಗಾಲಿ ಜನಾರ್ದನ ರೆಡ್ಡಿ' ಮುಂತಾದ ಹೆಸರಿನಲ್ಲಿ ಹಲವು ಖಾತೆಗಳಿದ್ದು, ಇವೆಲ್ಲವೂ ನಕಲಿಯಾಗಿವೆ. ಜನಾರ್ದನ ರೆಡ್ಡಿ ಅವರು ಯಾವುದೇ ಖಾತೆಯನ್ನು ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜನಾರ್ದನ ರೆಡ್ಡಿ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅವರ ಘನತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಪ್ರಕಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.