ಚಿತ್ರಗಳು : ಅಸ್ಸಾಂನಲ್ಲಿ ಡಿಕೆಶಿ ಚುನಾವಣಾ ಪ್ರಚಾರ
ಬೆಂಗಳೂರು, ಏಪ್ರಿಲ್ 07 : 'ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಇದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಸ್ಸಾಂ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ.
126
ಸದಸ್ಯ
ಬಲದ
ಅಸ್ಸಾಂ
ವಿಧಾನಸಭೆಗೆ
ಎರಡು
ಹಂತಗಳಲ್ಲಿ
ಮತದಾನ
ನಡೆಯುತ್ತಿದೆ.
ಏಪ್ರಿಲ್
4ರಂದು
ಮೊದಲ
ಹಂತದ
ಮತದಾನ
ಪೂರ್ಣಗೊಂಡಿದ್ದು,
ಏಪ್ರಿಲ್
11ರಂದು
2ನೇ
ಹಂತದ
ಮತದಾನ
ನಡೆಯಲಿದೆ.
[5
ರಾಜ್ಯಗಳ
ಚುನಾವಣೆ
ವೇಳಾಪಟ್ಟಿ]
ಕಾಂಗ್ರೆಸ್
ಹೈಕಮಾಂಡ್
ಜಾನುಬಾರಿ
ಮತ್ತು
ಜಾಗೀರ್
ವಿಧಾನಸಭಾ
ಕ್ಷೇತ್ರಗಳ
ಉಸ್ತುವಾರಿಯನ್ನು
ಡಿ.ಕೆ.ಶಿವಕುಮಾರ್
ಅವರಿಗೆ
ವಹಿಸಿದೆ.
ಸಚಿವರು
ಅಲ್ಲಿಯೇ
ವಾಸ್ತವ್ಯ
ಹೂಡಿದ್ದು,
ಪ್ರಚಾರ
ಕಾರ್ಯದಲ್ಲಿ
ತೊಡಗಿಸಿಕೊಂಡಿದ್ದಾರೆ.
'ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಾಯಕರು ನೀಡಿದ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದೇನೆ. ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಇದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಗೂ ಚುನಾವಣೆಯ ಉಸ್ತುವಾರಿ ವಹಿಸಲಾಗಿದೆ. ಅವರು ಸಹ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
'ಅಸ್ಸಾಂನ ರಾಜಧಾನಿ ಗೌಹಾಟಿ ಬಳಿಯ ಪ್ರತಿಷ್ಠಿತ ಜಲುಕ್ಬರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲದ ಹೋರಾಟ ನಡೆಸಲಿದೆ. ಜಾಗಿ ರೋಡ್ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯ ಜಯ ಬಹುತೇಕ ಖಚಿತವಾಗಿದೆ' ಎಂದು ಡಿ.ಕೆ.ಶಿವಕುಮಾರ್ ಅವರು ಫೇಸ್ಬುಕ್ ಪುಟದಲ್ಲಿ ಬರೆದಿದ್ದಾರೆ.
ಉಳಿದ ನಾಯಕರಿಗೂ ಇದೆ ಹೊಣೆ : ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿದೆ. ರಾಜ್ಯದ ಉಳಿದ ಹಲವು ನಾಯಕರು ಬೇರೆ-ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸ್ಟಾರ್ ಪ್ರಚಾರಕರಾಗಿ ಮತಯಾಚನೆ ಮಾಡುವ ಸಾಧ್ಯತೆ ಇದೆ.