ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ : ಜಯಚಂದ್ರ ಹೇಳುವುದೇನು?
ಬೆಂಗಳೂರು, ಡಿಸೆಂಬರ್ 09 : 'ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ಕುರಿತು ಚರ್ಚಿಸಲು ಎಲ್ಲಾ ಟಿವಿ ವಾಹಿನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುತ್ತದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
'ಟಿವಿ
ವಾಹಿನಿಗಳಲ್ಲಿ
ಪ್ರಸಾರವಾಗುವ
ಜ್ಯೋತಿಷ್ಯ
ಕಾರ್ಯಕ್ರಮಗಳಿಗೆ
ನಿರ್ಬಂಧ
ಹೇರುವ
ಚಿಂತನೆ
ಇದೆ'
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಸೋಮವಾರ
ಹೇಳಿದ್ದರು.
'ಈ
ಬಗ್ಗೆ
ಚರ್ಚಿಸಲು
ಶೀಘ್ರವೇ
ಸಭೆ
ಕರೆಯಲಾಗುತ್ತದೆ'
ಎಂದು
ಜಯಚಂದ್ರ
ಅವರು
ತಿಳಿಸಿದ್ದಾರೆ.
[ಜ್ಯೋತಿಷ್ಯ
ಕಾರ್ಯಕ್ರಮದ
ಬಗ್ಗೆ
ಸಿದ್ದರಾಮಯ್ಯ
ಹೇಳಿದ್ದೇನು?]
ಸೋಮವಾರ ಬೆಂಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, 'ಇವತ್ತು ಟಿವಿಗಳಲ್ಲಿ ಮೌಢ್ಯ ಬಿತ್ತುವಂತಹ ಜ್ಯೋತಿಷ್ಯ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿವೆ. ಈ ವ್ಯವಸ್ಥಿತ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು' [ಟಿವಿ ವಾಹಿನಿಗಳ ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ?]
'ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಿರುವ ಇಂದಿನ ಕಾಲದಲ್ಲಿ ನಾವು ಜ್ಯೋತಿಷ್ಯದ ಬಗ್ಗೆಯೂ ಮಾತನಾಡುತ್ತಿದ್ದೇವೆ. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿವೆ' ಎಂದು ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ. [ಟಿವಿ ಜ್ಯೋತಿಷ್ಯ ಕಾರ್ಯಕ್ರಮ ಬೇಕೆ?, ವೋಟ್ ಹಾಕಿ]
ಅಧ್ಯಯನ ವರದಿ ನೋಡುತ್ತೇವೆ : 'ಮಾಟ, ಮಂತ್ರ, ವಾಮಾಚಾರ ಮುಂತಾದವುಗಳನ್ನು ನಿಷೇಧಿಸುವ ಕುರಿತು ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಧ್ಯಯನ ವರದಿಯನ್ನು ತಯಾರಿಸಿವೆ. ಸರ್ಕಾರ ಈ ವರದಿಯನ್ನು ತರಿಸಿಕೊಂಡು ಪರಿಶೀಲಿಸಲಿದೆ. ನಂತರ ವಾಹಿನಿಗಳ ಮುಖ್ಯಸ್ಥರ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ' ಎಂದು ಜಯಚಂದ್ರ ತಿಳಿಸಿದರು.