ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಿಗಳಿಂದ ಗೌರಿಬಿದನೂರಿನಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ

ಬಂಜರು ಭೂಮಿಗಳನ್ನು ಹಸಿರಾಗಿಸಲು ಐಐಎಸ್ ಸಿ ವಿಜ್ಞಾನಿಗಳಿಂದ ಹೊಸ ತಂತ್ರಗಾರಿಕೆ. ಡ್ರೋನ್ ಮೂಲಕ ಬೀಜ ಬಿತ್ತನೆಯ ಹೊಸ ಪ್ರಯೋಗ. ಆರಂಭಿಕ ಹಂತದಲ್ಲಿ ಗೌರಿಬಿದನೂರಿನಲ್ಲಿ ಈ ಪ್ರಯೋಗ ಜಾರಿ.

|
Google Oneindia Kannada News

ಬೆಂಗಳೂರು, ಜೂನ್ 24: ಬರಡು ನೆಲಗಳಲ್ಲಿ ಏಕ ಕಾಲಕ್ಕೆ ಅತಿ ಹೆಚ್ಚು ಬೀಜಗಳನ್ನು ಬಿತ್ತುವ ಮೂಲಕ, ಅರಣ್ಯ ಬೆಳೆಸುವ ಹೊಸ ಪ್ರಯೋಗಾತ್ಮಕ ಕೈಂಕರ್ಯಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ವಿಜ್ಞಾನಿಗಳು ಕೈ ಹಾಕಿದ್ದಾರೆ. ಈ ಯೋಜನೆಗೆ 'ಸೀಡ್ ಬಾಂಬಿಂಗ್' ಎಂದು ಹೆಸರಿಡಲಾಗಿದೆ.

ಚಿತ್ರದುರ್ಗ: ಆಡು ಮಲ್ಲೇಶ್ವರ ನಿಸರ್ಗಧಾಮದಲ್ಲಿ ಬೀಜಬಿತ್ತನೆ ಚಿತ್ರದುರ್ಗ: ಆಡು ಮಲ್ಲೇಶ್ವರ ನಿಸರ್ಗಧಾಮದಲ್ಲಿ ಬೀಜಬಿತ್ತನೆ

ಐಐಎಸ್ ಸಿ, ರಾಜ್ಯ ಸರ್ಕಾರ ಹಾಗೂ ಎಚ್ ಎನ್ ಸೆಂಟರ್ (ವೈಜ್ಞಾನಿಕ ಕೇಂದ್ರ) ಗಳ ಪರಸ್ಪರ ಸಹಕಾರದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

IISc Scientists started Seed Bombing in Gauribidanur

ಇದರ ಪ್ರಾಥಮಿಕ ಹೆಜ್ಜೆಯಾಗಿ, ಗೌರಿಬಿದನೂರಿನಲ್ಲಿ ಡ್ರೋನ್ ಗಳ ಮೂಲಕ ನಿರ್ದಿಷ್ಟ ಪ್ರದೇಶದಲ್ಲಿ ಏಕಕಾಲದಲ್ಲಿ ಬೀಜ ನೆಡುವ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನವಾದ ಜೂನ್ 2ರಂದು ಹಮ್ಮಿಕೊಳ್ಳಲಾಗಿತ್ತು. ಆನಂತರ ಕೊಂಚ ಮಳೆ ಬಂದಿದ್ದರಿಂದ ಈ ಪ್ರಯೋಗಕ್ಕೆ ಹೊಸ ಯಶಸ್ಸು ತರುವ ನಿರೀಕ್ಷೆ ಹುಟ್ಟಿಸಿದೆ.

ಇನ್ನು, ಈ ಪ್ರದೇಶಕ್ಕೆ ಬೋರ್ ವೆಲ್ ಗಳ ಮೂಲಕ ನೀರು ಹಾಯಿಸಿದರೆ, ಆ ಬರಡು ನೆಲಗಳು ಕೆಲವೇ ತಿಂಗಳುಗಳಲ್ಲಿ ಹಸಿರಾಗಿ ಕೆಲವೇ ವರ್ಷಗಳಲ್ಲಿ ಪುಟ್ಟ ಅರಣ್ಯಗಳಾಗಿ ಮಾರ್ಪಾಟು ಹೊಂದುತ್ತವೆ. ಇದರಿಂದ ಆ ಪ್ರದೇಶಗಳಲ್ಲಿನ ಹವಾಮಾನ, ನೀರಿನ ವ್ಯವಸ್ಥೆಗೆ ಹೊಸ ಆಯಾಮ ಕೊಟ್ಟಂತಾಗುತ್ತದೆ ಎಂಬುದು ವಿಜ್ಞಾನಿಗಳ ತರ್ಕ.

ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ

ಈ ನ್ಯೂಸ್ ಮಿನಟ್ ಗೆ ನೀಡಿರುವ ಹೇಳಿಕೆಯಲ್ಲಿ, ವಿಜ್ಞಾನಿಗಳ ತಂಡದಲ್ಲೊಬ್ಬರಾದ ಪ್ರೊಫೆಸರ್ ರೆಡ್ಡಿಯವರು, ಗೌರಿ ಬಿದನೂರು ಬಳಿಯ ಬಂಜರು ನೆಲವು ನಿಜ ಅರ್ಥದಲ್ಲಿ ಫಲವತ್ತಾಗಿದೆ. ಆದರೆ, ನೀರಿನ ಕೊರತೆ ಇರುವ ಕಾರಣದಿಂದಾಗಿ ಅದು ಬರಡಾಗಿದೆ. ಈ ಪ್ರದೇಶದಲ್ಲಿ ನೀರು ಬೇಕೆಂದರೆ ಸುಮಾರು 1000 ಅಡಿಗಳಷ್ಟು ಭೂಮಿಯನ್ನು ಕೊರೆಯಬೇಕಿದೆ ಎಂದಿದ್ದಾರೆ.

ಹಾಗಾಗಿ, ಸೀಡ್ ಬಾಂಬಿಂಗ್ ಆದ ನಂತರ, ಬೋರ್ ವೆಲ್ ಗಳನ್ನು ಕೊರೆಯಿಸಿ ಈ ಪ್ರದೇಶಗಳಲ್ಲಿ ನೀರನ್ನು ಹರಿಯಿಸಿ, ಇಲ್ಲಿ ಅರಣ್ಯ ಬೆಳವಣಿಗೆಗೆ ಪ್ರಾಶಸ್ತ್ರ್ಯವಾದ ವಾತಾವರಣ ಕಲ್ಪಿಸಲಾಗುವುದು ಎಂದು ರೆಡ್ಡಿ ತಿಳಿಸಿದ್ದಾರೆ.

English summary
IISc scientists have introduced a new kind of Mass Seeding technique in which they use drones. With the aim to convert barren lands into green lands, scientists chooses Gauribidanur district for their experiment. And here they are using Seed Bombing Technique.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X