ತಾಕತ್ ಇದ್ರೆ ಮುಸ್ಲಿಂ ಸಂಘಟನೆ ನಿಷೇಧಿಸಿ : ಶೋಭಾ
ಬೆಂಗಳೂರು, ಸೆ. 13 : ಕರ್ನಾಟಕದಲ್ಲಿ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸುವ ಚಿಂತನೆ ಇದೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಕತ್ ಇದ್ದರೆ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಲಿ ಎಂದು ಅವರು ಸಿಎಂಗೆ ಸವಾಲು ಹಾಕಿದ್ದಾರೆ.
ಶನಿವಾರ
ಚಿಕ್ಕಮಗಳೂರಿನಲ್ಲಿ
ಮಾತನಾಡಿ
ಉಡುಪಿ-ಚಿಕ್ಕಮಗಳೂರು
ಕ್ಷೇತ್ರದ
ಸಂಸದೆ
ಶೋಭಾ
ಕರಂದ್ಲಾಜೆಯವರು,
ಕಾನೂನಿನ
ಮೂಲಕ
ಹಿಂದೂಪರ
ಸಂಘಟನೆಗಳನ್ನು
ನಿಯಂತ್ರಿಸಲು
ಸಿದ್ದರಾಮಯ್ಯ
ಅವರು
ಸಂಚು
ರೂಪಿಸಿದ್ದಾರೆ.
ತಾಕತ್
ಇದ್ದರೆ
ಮುಸ್ಲಿಂ
ಸಂಘಟನೆಗಳನ್ನು
ನಿಷೇಧ
ಮಾಡಲಿ
ಎಂದು
ಸವಾಲು
ಹಾಕಿದರು.
[ಶ್ರೀರಾಮ
ಸೇನೆ
ನಿಷೇಧಕ್ಕೆ
ಚಿಂತನೆ]
ಹಿಂದೂ ಪರ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಶೋಭಾ ಕರಂದ್ಲಾಜೆಯವರು, ಸರ್ಕಾರ ಇಂತಹ ಧೋರಣೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೆ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುವಂತಹ ನಾಯಕರು ಕಾಂಗ್ರೆಸ್ ನಲ್ಲಿದ್ದಾರೆ ಎಂದು ಲೇವಡಿ ಮಾಡಿದರು. [ಮದ್ರಸಾ ಎಂದರೇನು? #banmadrasa ಏಕೆ?]
ಮುಖ್ಯಮಂತ್ರಿಗಳ ತಿರುಗೇಟು : ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಅವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ಶೋಭಾ ಕರಂದ್ಲಾಜೆ ಅವರು ಕೋಮುವಾದಿಗಳ ಪರ ಇರುವವರ ಹಾಗೆ ಮಾತನಾಡುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯಾರೇ ದಾಂದಲೆ ನಡೆಸಿದರೇ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಸಂಘಟನೆಗೆ ಗೋವಾದಲ್ಲಿ ಈಗಾಗಲೇ ನಿಷೇಧ ಹೇರಲಾಗಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲೂ ಇಂಥ ಚಿಂತನೆ ಮಾಡಬೇಕಾದ್ದು ಅನಿವಾರ್ಯ ಎಂದು ಹೇಳಿದ್ದರು.