ಶ್ರೀಗಳ ಪ್ರಕರಣ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜ.30 : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ಶುಕ್ರವಾರ
ನ್ಯಾಯಮೂರ್ತಿ
ಆನಂದ
ಭೈರಾರೆಡ್ಡಿ
ಮತ್ತು
ಎನ್.
ಆನಂದ್
ಅವರನ್ನು
ಒಳಗೊಂಡ
ವಿಭಾಗೀಯ
ಪೀಠವು
ಎರಡೂ
ಕಡೆಯ
ವಾದಗಳನ್ನು
ಆಲಿಸಿ
ವಿಚಾರಣೆಯನ್ನು
ಪೂರ್ಣಗೊಳಿಸಿ,
ತೀರ್ಪನ್ನು
ಕಾಯ್ದಿರಿಸಿದೆ.
[ಶ್ರೀಗಳ
ಪ್ರಕರಣದ
ವಿಚಾರಣೆಗೆ
ಹೊಸ
ಪೀಠ]
ರಾಘವೇಶ್ವರ ಶ್ರೀಗಳು ಪ್ರಕರಣ ರದ್ದು ಕೋರಿರುವ ಅರ್ಜಿಯ ವಿಚಾರಣೆಯಿಂದ ಐವರು ನ್ಯಾಯಮೂರ್ತಿಗಳು ವಿವಿಧ ಕಾರಣಗಳಿಗಾಗಿ ಹಿಂದೆ ಸರಿದಿದ್ದರು. ಆದ್ದರಿಂದ ಹೊಸ ಪೀಠ ರಚನೆಯಾಗಿತ್ತು. ಗುರುವಾರದಿಂದ ಪೀಠದಲ್ಲಿ ವಿಚಾರಣೆ ನಡೆದಿತ್ತು. [ವಿಚಾರಣೆಯಿಂದ ಹಿಂದೆ ಸರಿದ 4ನೇ ಜಡ್ಜ್]
ರಾಘವೇಶ್ವರ ಶ್ರೀಗಳ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿಗಳಾದ ಪವನ್ಕುಮಾರ್ ಬಿ. ಭಜಂತ್ರಿ, ಹೆಚ್.ಜಿ.ರಮೇಶ್, ಕೆ.ಎನ್.ಫಣೀಂದ್ರ, ರಾಮಮೋಹನ ರೆಡ್ಡಿ ಮತ್ತು ಎನ್.ಕುಮಾರ್ ಅವರು ಹಿಂದೆ ಸರಿದಿದ್ದರು. [ರಾಘವೇಶ್ವರಶ್ರೀಗಳಿಗೆ ಮತ್ತೆ ಸಂಕಟ]
ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರ ಪೀಠಕ್ಕೆ ವರ್ಗಾವಣೆಯಾಗಿತ್ತು. ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆಗೆ ಹೊಸ ಪೀಠವೊಂದನ್ನು ಸ್ಥಾಪನೆ ಮಾಡಿದ್ದು, ಅದು ವಿಚಾರಣೆ ಪೂರ್ಣಗೊಳಿಸಿದೆ.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಶ್ರೀಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.