ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಹೊಣೆ ಹೈಕಮಾಂಡ್ಗೆ
ಬೆಂಗಳೂರು, ಮೇ 23 : ರಾಜ್ಯಸಭೆ ಚುನಾವಣೆಗೆ ಬಿಜೆಪಿ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರ ಹೆಸರನ್ನು ಅಂತಿಮಗೊಳಿಸಿದೆ. ಆದರೆ, ಕಾಂಗ್ರೆಸ್ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಹೈಕಮಾಂಡ್ ನಾಯಕರು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ
ವಿಧಾನಸಭೆಯಿಂದ
ರಾಜ್ಯಸಭೆಗೆ
ನಾಲ್ವರು
ಸದಸ್ಯರನ್ನು
ಆಯ್ಕೆ
ಮಾಡಲು
ಜೂನ್
11ರಂದು
ಚುನಾವಣೆ
ನಡೆಯಲಿದೆ.
ಬಿಜೆಪಿ
ಒಬ್ಬರು
ಸದಸ್ಯರನ್ನು
ಆಯ್ಕೆ
ಮಾಡಿ
ಕಳಿಸುವ
ಶಕ್ತಿ
ಹೊಂದಿದ್ದು,
ಕೇಂದ್ರ
ಸಚಿವ
ವೆಂಕಯ್ಯ
ನಾಯ್ಡು
ಅವರ
ಹೆಸರನ್ನು
ಅಂತಿಮಗೊಳಿಸಿದೆ.
[ಕರ್ನಾಟಕದಿಂದ
ರಾಜ್ಯಸಭೆಗೆ
ಮತ್ತೆ
ಎಂ
ವೆಂಕಯ್ಯನಾಯ್ಡು]
ವಿಧಾನಸಭೆಯಲ್ಲಿ 123 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಶಕ್ತಿ ಹೊಂದಿದೆ. ಒಂದು ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ. [ರಾಜ್ಯಸಭೆ ಸದಸ್ಯರಾಗಲು ಪೈಪೋಟಿ]
ರಾಜ್ಯಸಭಾ ಸದಸ್ಯರಾಗಲು ಮಾಜಿ ಸಚಿವ ಪಿ.ಚಿದಂಬರಂ, ಜೈರಾಮ್ ರಮೇಶ್, ಮಾಜಿ ಸಂಸದೆ ರಮ್ಯಾ ಮುಂತಾದವರ ಹೆಸರು ಕೇಳಿಬರುತ್ತಿದೆ. ಆದ್ದರಿಂದ, ರಾಜ್ಯ ಕಾಂಗ್ರೆಸ್ ನಾಯಕರು ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೈಕಮಾಂಡ್ ನಾಯಕರಿಗೆ ನೀಡಿದ್ದಾರೆ. [ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆ]
ರಾಜ್ಯಸಭಾ ಚುನಾವಣೆಗೆ ಮೇ 24 ರಿಂದ ನಾಮತ್ರ ಸಲ್ಲಿಸಬಹುದಾಗಿದ್ದು, ಮೇ 31 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಮೇ 26ರಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ದೆಹಲಿಗೆ ತೆರಳಲಿದ್ದು, ಆಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.