ಎಸ್ಎಸ್ಎಲ್ಸಿ ಪರೀಕ್ಷೆಗಾಗಿ ಸಹಾಯವಾಣಿ ಆರಂಭ
ಬೆಂಗಳೂರು, ಫೆಬ್ರವರಿ 27 : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿಯನ್ನು ಆರಂಭಿಸಲಿದೆ. ಮಾರ್ಚ್ 30ರಿಂದ 2016ನೇ ಸಾಲಿನ ಪರೀಕ್ಷೆಗಳು ಆರಂಭವಾಗಲಿವೆ.
ಈ
ಸಹಾಯವಾಣಿ
ಮಾರ್ಚ್
3ರಿಂದ
28ರ
ತನಕ
ಪ್ರತಿ
ದಿನ
ಬೆಳಗ್ಗೆ
9
ರಿಂದ
ಸಂಜೆ
7
ಗಂಟೆಯವರೆಗೆ
ಕಾರ್ಯನಿರ್ವಹಿಸಲಿವೆ.
ದಿನಾಂಕ
ಮಾರ್ಚ್
30
ರಿಂದ
ಏಪ್ರಿಲ್
13ರ
ತನಕ
ಸಹಾಯವಾಣಿ
ಬೆಳಗ್ಗೆ
9
ರಿಂದ
ಮಧ್ಯಾಹ್ನ
2.30ರವರೆಗೆ
ಮಾತ್ರ
ಕಾರ್ಯನಿರ್ವಹಣೆ
ಮಾಡಲಿವೆ.
[SSLC
ಪರೀಕ್ಷಾ
ವೇಳಾಪಟ್ಟಿ]
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ವಿದ್ಯಾರ್ಥಿಗಳ ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮವನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು, ಸಮಾಜ, ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ. [ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ]
ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನವಹಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಯನ್ನು ಬಗೆಹರಿಸಿ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಫೂರ್ತಿ ನೀಡಬೇಕಾದ ಅವಶ್ಯಕತೆ ಇದೆ. ಈ ರೀತಿಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿಯನ್ನು ಆರಂಭಿಸಲಾಗುತ್ತಿದೆ. [ಅಧ್ಯಾಪಕರ ಜವಾಬ್ದಾರಿ ನೆನಪಿಸಿದ ಕಿಮ್ಮನೆ]
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿವರ್ಷ ವರ್ಷವೂ ಸಹಾಯವಾಣಿ ಮತ್ತು ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತದೆ. ಸಹಾಯವಾಣಿ ಸಂಖ್ಯೆಗಳು : 080-23310075, 080-23310076. [SSLC ಟಾಪರ್ ವಿಶ್ವಜೀತ್ ಹೆಗಡೆ ಕಣ್ಣಲ್ಲಿ ಐಐಟಿ ಕನಸು]