ಹಾವೇರಿ-ಶಿರಸಿ ರೈಲು ಮಾರ್ಗಕ್ಕೆ ಒಪ್ಪಿಗೆ ಸಿಗಲಿದೆಯೇ?
ಉತ್ತರ ಕನ್ನಡ, ಜನವರಿ 20 : 'ಹಾವೇರಿ-ಶಿರಸಿ ರೈಲು ಮಾರ್ಗ ನಿರ್ಮಾಣ ಮಾಡುವ ಕುರಿತು ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸುತ್ತೇನೆ' ಎಂದು ಎಂದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ಹೇಳಿದ್ದಾರೆ. 2012ರಿಂದ ಹಾವೇರಿ-ಶಿರಸಿ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ.
ಶಿರಸಿಯಲ್ಲಿ
ಮಂಗಳವಾರ
ಮಾತನಾಡಿದ
ಕೇಂದ್ರ
ಆಯುಷ್
ಸಚಿವ
ಶ್ರೀಪಾದ
ನಾಯ್ಕ
ಅವರು,
'ಹುಬ್ಬಳ್ಳಿ-ಅಂಕೋಲಾ
ರೈಲು
ಮಾರ್ಗ
ನಿರ್ಮಾಣಕ್ಕೆ
ಪರಿಸರ
ರಕ್ಷಣೆಯಂತಹ
ಬಹು
ದೊಡ್ಡ
ಸಮಸ್ಯೆಗಳಿವೆ.
ಆದರೆ,
ಹಾವೇರಿ-ಶಿರಸಿ
ರೈಲು
ಮಾರ್ಗ
ನಿರ್ಮಾಣ
ಸುಲಭವಾಗಿದ್ದು,
ಈ
ಕುರಿತು
ಸರ್ಕಾರಕ್ಕೆ
ಮನವರಿಕೆ
ಮಾಡಿಕೊಡಲಾಗುತ್ತದೆ'
ಎಂದರು.
[ಹುಬ್ಬಳ್ಳಿ-ಅಂಕೋಲಾ
ರೈಲು
ಮಾರ್ಗದ
ಕನಸು
ನನಸಾಗುವುದೇ?]
2012ರ ರೈಲ್ವೆ ಬಜೆಟ್ನಲ್ಲಿ ಹಾವೇರಿ-ಶಿರಸಿ ರೈಲು ಮಾರ್ಗದ ಸಮೀಕ್ಷೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು. ಜಿಲ್ಲೆಯ ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆಗಳಂತೆ ಈ ಯೋಜನೆಯೂ ನೆನೆಗುದಿಗೆ ಬಿದ್ದಿದೆ. [ಗದಗ-ಕೂಡಗಿ-ಹುಟಗಿ ಜೋಡಿ ಮಾರ್ಗಕ್ಕೆ ಒಪ್ಪಿಗೆ]
ಶಿರಸಿಗೆ ಆಯುರ್ವೇದ ಸಂಶೋಧನಾ ಕೇಂದ್ರ : 'ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ಶಿರಸಿಯಲ್ಲಿ ಕೇಂದ್ರ ಸರ್ಕಾರದ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ಹೇಳಿದ್ದಾರೆ. [ಕುಡಚಿ-ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣ]
ಮಂಗಳವಾರ ಶಿರಸಿಯಲ್ಲಿ ಮಾತನಾಡಿದ ಅವರು, 'ಆಯುರ್ವೇದ, ಯುನಾನಿ ಮತ್ತು ವನಸ್ಪತಿ ಸೇರಿದಂತೆ ದೇಶೀಯ ವೈದ್ಯ ಪದ್ಧತಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೊಳಿಸಲಾಗುವುದು. ದೇಶದ ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ತೆರೆಯಲಾಗುವುದು' ಎಂದು ತಿಳಿಸಿದರು.
'ಗೋವಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಾನು, ಕರ್ನಾಟಕದ ಉತ್ತರ ಕನ್ನಡ ಮತ್ತು ಮಹಾರಾಷ್ಟ್ರದ ಲೋಕಸಭಾ ಕ್ಷೇತ್ರದ ಜನತೆಯನ್ನು ಸ್ವಾವಲಂಬನೆಗೆ ಒಯ್ಯುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕೇಂದ್ರಕ್ಕೆ ವರದಿ ನೀಡುತ್ತೇನೆ' ಎಂದರು.