ಹಾಸನ, ಚಿಕ್ಕಮಗಳೂರಿನಲ್ಲಿ ಹಲವೆಡೆ ಭೂಕಂಪ
ಚಿಕ್ಕಮಗಳೂರು, ಫೆ. 25 : ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 4 ಸೆಕೆಂಡ್ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಬಂದು ನಿಂತಿದ್ದಾರೆ. ರಿಕ್ಟರ್ ಮಾಪಕದಲ್ಲಿ 2.1ರಷ್ಟು ಕಂಪನ ದಾಖಲಾಗಿದೆ.
ಹಾಸನ
ಜಿಲ್ಲೆಯ
ಮೂರು
ತಾಲೂಕುಗಳು
ಮತ್ತು
ಚಿಕ್ಕಮಗಳೂರಿನ
ಸಕಲೇಶಪುರ,
ಮೂಡಿಗೆರೆಯ
ಕೆಲವು
ಪ್ರದೇಶಗಳಲ್ಲಿ
ಬುಧವಾರ
ಬೆಳಗ್ಗೆ
6.30ರ
ಸುಮಾರಿಗೆ
ಭೂಮಿ
ಕಂಪಿಸಿದ
ಅನುಭವವಾಗಿದೆ.
ಜನರು
ತಕ್ಷಣ
ಆತಂಕದಿಂದ
ಮನೆಯಿಂದ
ಹೊರಗೆ
ಬಂದಿದ್ದಾರೆ.
ಸುಮಾರು 4 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಪಾತ್ರಗಳು ಕೆಳಗೆ ಬಿದ್ದವು ಎಂದು ಜನರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭೂಮಿ ಕಂಪಿಸಿದ ಅನುಭವವಾದ ನಂತರ ಎಲ್ಲರೂ ಮನೆಯಿಂದ ಹೊರಗೋಡಿದೆವು ಎಂದು ತಿಳಿಸಿದ್ದಾರೆ. [ಕುಂದಾಪುರ, ಕಾರ್ಕಳದಲ್ಲಿ ಲಘು ಭೂಕಂಪನ]
ಜನರು ಆತಂಕ ಪಡುವ ಅಗತ್ಯವಿಲ್ಲ : ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಆಗಿರುವ ಭೂಕಂಪನದ ಬಗ್ಗೆ ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ರಿಕ್ಟರ್ ಮಾಪಕದಲ್ಲಿ 2.1ರಷ್ಟು ಕಂಪನ ದಾಖಲಾಗಿದೆ. ಇದು ಕಡಿಮೆ ಪ್ರಮಾಣದ ಕಂಪನವಾಗಿದ್ದು, ಜನರು ಈ ಬಗ್ಗೆ ಆತಂಕಗೊಳ್ಳುವುದು ಬೇಡ ಎಂದು ಅಧಿಕಾರಿಗಳು ಮಾಧ್ಯಮಗಳ ಮೂಲಕ ಜನರಿಗೆ ಕರೆ ನೀಡಿದ್ದಾರೆ.