ಹಾನಗಲ್ ಶಾಸಕ ಮನೋಹರ್ ತಹಶೀಲ್ದಾರ್ ಪರಿಚಯ
ಬೆಂಗಳೂರು, ಅಕ್ಟೋಬರ್ 28 : ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ಮನೋಹರ್ ತಹಶೀಲ್ದಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ತಹಶೀಲ್ದಾರ್ ಅವರು ಸಚಿವರಾಗುತ್ತಿದ್ದಾರೆ.
4
ಬಾರಿ
ಶಾಸಕರಾಗಿ
ಆಯ್ಕೆಯಾಗಿರುವ
ಮನೋಹರ್
ತಹಶೀಲ್ದಾರ್
(69)
ಅವರು
ಬಿಇ
ಮೆಕ್ಯಾನಿಕಲ್
ಪದವೀಧರರು.
ಹಿಂದೆ
ಎಸ್.ಎಂ.
ಕೃಷ್ಣ
ಅವರು
ಮುಖ್ಯಮಂತ್ರಿಗಳಾಗಿದ್ದ
ಅವಧಿಯಲ್ಲಿ
ತಹಶೀಲ್ದಾರ್
ಅವರು
ವಿಧಾನಸಭೆ
ಉಪಾಧ್ಯಕ್ಷರಾಗಿ
ಕಾರ್ಯನಿರ್ವಹಿಸಿದ್ದರು.
[ವಿನಯ್
ಕುಲಕರ್ಣಿ
ಪರಿಚಯ
ಓದಿ]
1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಮನೋಹರ್ ತಹಶೀಲ್ದಾರ್ ಅವರು 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ನಿಷ್ಠವಾಗಿರುವ ಅವರಿಗೆ ಈಗ ಸಚಿವರಾಗುವ ಅವಕಾಶ ಸಿಕ್ಕಿದೆ. [ಜಾರ್ಜ್ ಕೈತಪ್ಪಲಿದೆ ಗೃಹ ಖಾತೆ]
ಮನೋಹರ್ ತಹಶೀಲ್ದಾರ್ ಅವರು ಬಲಿಜ ಸಮುದಾಯಕ್ಕೆ ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ 66,324 ಮತಗಳನ್ನು ಪಡೆದ ತಹಶೀಲ್ದಾರ್ ಅವರು ಕೆಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಂ.ಉದಾಸಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ತಹಶೀಲ್ದಾರ್ ಅವರ ಪರಿಚಯ ಇಲ್ಲಿದೆ....
*
ಮನೋಹರ್
ತಹಶೀಲ್ದಾರ್
ಹಾವೇರಿ
ಜಿಲ್ಲೆ
ಹಾನಗಲ್
ಕ್ಷೇತ್ರದ
ಶಾಸಕ
*
4
ಬಾರಿ
ಶಾಸಕರಾಗಿ
ಆಯ್ಕೆಯಾಗಿದ್ದಾರೆ
*
ವಿಧಾನಸಭೆ
ಉಪಾಧ್ಯಕ್ಷರಾಗಿ
ಕಾರ್ಯ
ನಿರ್ವಹಣೆ
ಮಾಡಿದ್ದಾರೆ
*
ಮೊದಲ
ಬಾರಿಗೆ
ಸಚಿವರಾಗುವ
ಅವಕಾಶ
ಸಿಕ್ಕಿದೆ