ಮಠಗಳಿಗೆ ಮೂಗುದಾರ, ಸಚಿವರ ಸ್ಪಷ್ಟನೆಗಳು
ಬೆಂಗಳೂರು, ಡಿ.22 : 'ಮಠಗಳ ಸ್ವಾಯತ್ತತೆಗೆ ಧಕ್ಕೆ ತರುವ ಉದ್ದೇಶ ಸರ್ಕಾರಕ್ಕಿಲ್ಲ. ಮಠಗಳ ದಿನನಿತ್ಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಸ್ತಾವನೆಯೂ ಇಲ್ಲ, ದೂರುಗಳು ಬಂದರೆ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡಲಿದೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ
ಸೋಮವಾರ
ಮಾತನಾಡಿದ
ಸಚಿವ
ಜಯಚಂದ್ರ
ಅವರು,
ಕರ್ನಾಟಕ
ಹಿಂದೂ
ಧಾರ್ಮಿಕ
ಸಂಸ್ಥೆಗಳು
ಮತ್ತು
ಧರ್ಮದಾಯ
ದತ್ತಿಗಳ
(ತಿದ್ದುಪಡಿ)
ಮಸೂದೆ
ಮೂಲಕ
ಮಠಗಳ
ದಿನನಿತ್ಯದ
ಚಟುವಟಿಕೆಗಳಲ್ಲಿ
ಸರ್ಕಾರ
ಹಸ್ತಕ್ಷೇಪ
ಮಾಡುವುದಿಲ್ಲ
ಎಂದು
ಹೇಳಿದರು.
[ಮಠಗಳ
ಮೇಲೆ
ನಿಯಂತ್ರಣ,
ಮಠಾಧೀಶರಿಂದ
ಹೋರಾಟ]
ಸರ್ಕಾರ ತಾನಾಗಿ ಯಾವುದೇ ಮಠಮಾನ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ದೂರುಗಳು ಬಂದಾಗ ಇಲ್ಲವೇ ಮಠಗಳನ್ನು ನಿರ್ವಹಣೆ ತಮ್ಮಿಂದ ಸಾಧ್ಯವಿಲ್ಲವೆಂದು ಮಠಾಧೀಶರುಗಳು ಮುಂದೆ ಬಂದರೆ ಮಾತ್ರ ಹಸ್ತಕ್ಷೇಪ ಮಾಡಲಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.[ಮಠಗಳ ಮೇಲೆ ಹಿಡಿತಕ್ಕೆ ಸಜ್ಜಾದ ಸರ್ಕಾರ]
ಈ ತಿದ್ದುಪಡಿ ವಿಧೇಯಕದ ಬಗ್ಗೆ ಯಾರು ಆತಂಕಪಡುವ ಅಗತ್ಯವಿಲ್ಲ. ಯಾರಿಗೂ ತಪ್ಪು ತಿಳುವಳಿಕೆ ಬೇಡ. ಮಠಗಳ ಸ್ವಾಧೀನದಲ್ಲಿರುವ ಸಾರ್ವಜನಿಕರ ಆಸ್ತಿಗೆ ಧಕ್ಕೆಯುಂಟಾಗುವ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಮಧ್ಯ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಣೆ ನೀಡಿದರು. ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಾತ್ರ ಮಂಡಿಸಲಾಗಿದೆ, ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಬೇಕಾಗಿದೆ. ಆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೋಸಲೆ ಹಾಗೂ ಶೃಂಗೇರಿ ಮಠದ ವಿವಾದ ಇತ್ಯರ್ಥಪಡಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ. ಅದೇ ರೀತಿ ಮಠಾಧೀಶರು ಸ್ವಇಚ್ಛೆಯಿಂದ ಬಯಸಿದರೆ ಅಥವಾ ಅಪ್ರಾಪ್ತ ವಯಸ್ಕರು, ವಯೋ ಸಹಜ ಅಸಮರ್ಥತೆ, ಉತ್ತರಾಧಿಕಾರಿ ನೇಮಕ ವಿಳಂಬ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ಸರ್ಕಾರ ಮಧ್ಯ ಪ್ರವೇಶಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.