ಕರ್ನಾಟಕ ಲೋಕಾಯುಕ್ತ ಹುದ್ದೆಗೆ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮ
ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸೋಮವಾರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು, ಜನವರಿ 09: ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸೋಮವಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಉನ್ನತಾಧಿಕಾರ ಸಮಿತಿ ಶಿಫಾರಸಿನ ಮೇರೆಗೆ ರಾಜ್ಯಪಾಲರು ಅಂತಿಮ ಘೋಷಣೆ ಹೊರಡಿಸಲಿದ್ದಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅಧ್ಯಕ್ಷತೆಯಲ್ಲಿ
ನಡೆದ
ಸರ್ವಪಕ್ಷ
ಸಭೆಯಲ್ಲಿ
ಲೋಕಾಯುಕ್ತ
ಹುದ್ದೆಗೆ
ಹೈಕೋರ್ಟ್
ಹಾಲಿ
ನ್ಯಾಯಮೂರ್ತಿ
ಆನಂದ್
ಬೈರಾರೆಡ್ಡಿ,
ನಿವೃತ್ತ
ನ್ಯಾಯಮೂರ್ತಿ
ಎನ್.ಕೆ.ಪಾಟೀಲ್
ಹಾಗೂ
ಸಿ.ವಿಶ್ವನಾಥ್
ಶೆಟ್ಟಿ
ಅವರ
ಹೆಸರು
ಪ್ರಸ್ತಾಪವಾಗಿತ್ತು.
ಮುಖ್ಯಮಂತ್ರಿ
ಸಿದ್ದರಾಮಯ್ಯನವರು
ವಿಶ್ವನಾಥ್
ಶೆಟ್ಟಿ
ಪರ
ಒಲವು
ತೋರಿದ್ದು
,
ಇದಕ್ಕೆ
ವಿರೋಧ
ಪಕ್ಷಗಳು
ಸಹಮತ
ವ್ಯಕ್ತಪಡಿಸಿದವು.[ಲೋಕಾಯುಕ್ತದಲ್ಲಿ
ಭ್ರಷ್ಟಾಚಾರ:
ನ್ಯಾ.
ಭಾಸ್ಕರ್
ರಾವ್
ಗೆ
ಜಾಮೀನು]
ಸುಮಾರು ಒಂದೂವರೆ ವರ್ಷಗಳಿಂದ ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆ ನೇಮಕಾತಿಗೆ ಕಾಲ ಕೂಡಿ ಬಂದಿದ್ದು , ಇಂದಿನ ಸಭೆ ವಿವರಗಳನ್ನು ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದೆ.[ಲೋಕಾಯುಕ್ತ ನೇಮಕಕ್ಕೆ ಸಭೆ, ಮತ್ತೆ ನಾಯಕ್ ಹೆಸರು]
ಸಿ.ವಿಶ್ವನಾಥ್ ಶೆಟ್ಟಿ ಅವರು ಮಂಗಳೂರು ಮೂಲದವರಾಗಿದ್ದು , ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದು, ಸುಪ್ರೀಂಕೋರ್ಟಿನ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.(ಒನ್ಇಂಡಿಯಾ ಸುದ್ದಿ)