ಗದಗಿನಲ್ಲಿ ಹಗಲಿನಲ್ಲಿಯೂ ಉರಿಯುವ ಬೀದಿ ದೀಪಗಳು
ಗದಗ,
ನವೆಂಬರ್,
26-
ರಾಜ್ಯ
ಸರಕಾರ
ರಾಜ್ಯದೆಲ್ಲೆಡೆ
ಲೋಡ
ಶೆಡ್ಡಿಂಗ್
ಜಾರಿ
ಮಾಡಿ
ವಿದ್ಯುತ್
ಉಳಿತಾಯ
ಮಾಡುತ್ತಿದೆ.
ಮೇಲಾಗಿ
ಗ್ರಾಮೀಣ
ಪ್ರದೇಶಗಲ್ಲಿ
ಹಗಲು
ಹೊತ್ತಿನಲ್ಲಿಯೇ
ವಿದ್ಯುತ್
ಪೂರೈಕೆ
ಇರುವುದಿಲ್ಲ.
ಸಂಜೆ
ವಿದ್ಯುತ್
ಬಂದರೂ
ಕೂಡ
ಸಿಂಗಲ್
ಫೇಸ್
ಇರುತ್ತದೆ.[ಹತ್ತಿ
ಗಿರಣಿಗಳಿಂದ
ವಾಯುಮಾಲಿನ್ಯ:
ಮಾಲೀಕರಿಗೆ
ಎಚ್ಚರಿಕೆ]
ಆದರೆ
ಗದುಗಿನ
ರೈಲ್ವೆ
ಸ್ಟೇಷನ್
ರಸ್ತೆಯಲ್ಲಿ
ಮಧ್ಯಾಹ್ನ
12
ಗಂಟೆಯಾದರೂ
ಬೀದಿ
ದೀಪಗಳು
ಉರಿಯುತ್ತಿರುವುದು
ಸಾರ್ವಜನಿಕರ
ಆಕ್ರೋಶಕ್ಕೆ
ಕಾರಣವಾಗಿದೆ.
ಈಗಾಗಲೇ
ಲೋಡ್
ಶೆಡ್ಡಿಂಗ್
ನಿಂದ
ಪರಿತಪಿಸುತ್ತಿರುವ
ಜನತೆ
ಈ
ದೃಶ್ಯ
ನೋಡಿ
ಸರ್ಕಾರಕ್ಕೆ
ಹಿಡಿಶಾಪ
ಹಾಕುತ್ತಿದ್ದಾರೆ.
ಸಂಭಂದಪಟ್ಟ
ಅಧಿಕಾರಿಗಳಿಗೆ
ಮಾಹಿತಿ
ನೀಡಿದ್ದರೂ
ಇದುವರೆಗೂ
ಲೈಟ್
ಉರಿಯುತ್ತಿವೆ
ಎಂದು
ಜೆಡಿಎಸ್
(ಎಸ್)
ಯುವ
ಮುಖಂಡ
ಪ್ರಭುರಾಜ
ಗೌಡ
ಪಾಟೀಲ
ದೂರಿದರು.
ಈ
ಹಿಂದೆಯೂ
ಹಲವಾರು
ಬಾರಿ
ಇದೇ
ರೀತಿ
ಹಗಲು
ಹೊತ್ತಿನಲ್ಲಿ
ಕೆಲವೊಂದು
ಬಡಾವಣೆಗಳಲ್ಲಿ
ಬೀದಿ
ದೀಪಗಳು
ಹೊತ್ತಿ
ಉರಿದಿದ್ದವು.
ಆ
ಸಮಯದಲ್ಲಿ
ಹಿರಿಯ
ಅಧಿಕಾರಿಗಳು
ಯಾರ
ಮೇಲೆಯೂ
ಕ್ರಮ
ತೆಗೆದುಕೊಳ್ಳಲಿಲ್ಲ.
ಈಗಲಾದರೂ
ತಪ್ಪು
ಮಾಡಿದವರ
ಮೇಲೆ
ಸೂಕ್ತ
ಕ್ರಮ
ಕೈಗೊಳ್ಳಬೇಕೆಂದು
ಮತ್ತೋಬ್ಬ
ಜೆಡಿಎಸ್
ಧುರೀಣ
ಸಂತೋಷ
ಪಾಟೀಲ
ಆಗ್ರಹಿಸಿದ್ದಾರೆ.