ಸಿದ್ದರಾಮಯ್ಯ ಸಂಪುಟಕ್ಕೆ ನಾಲ್ವರು ಹೊಸ ಸಚಿವರ ಸೇರ್ಪಡೆ
ಬೆಂಗಳೂರು, ಅಕ್ಟೋಬರ್ 28 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಲ್ವರು ಸಚಿವರು ಸಿದ್ದರಾಮಯ್ಯ ಸಂಪುಟ ಸೇರಿದರು. ರಾಜಭನವದ ಹೊರಗೆ ನೂತನ ಸಚಿವರ ನೂರಾರು ಬೆಂಬಲಿಗರು ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸಿದರು.
ಕೆಪಿಸಿಸಿ
ಅಧ್ಯಕ್ಷ
ಮತ್ತು
ವಿಧಾನಪರಿಷತ್
ಸದಸ್ಯ
ಡಾ.ಜಿ.ಪರಮೇಶ್ವರ,
ಹಾಸನ
ಜಿಲ್ಲೆ
ಅರಕಲಗೂಡು
ಶಾಸಕ
ಎ.ಮಂಜು,
ಧಾರವಾಡ
ಶಾಸಕ
ವಿನಯ್
ಕುಲಕರ್ಣಿ,
ಹಾವೇರಿ
ಜಿಲ್ಲೆಯ
ಹಾನಗಲ್
ಶಾಸಕ
ಮನೋಹರ
ತಹಶೀಲ್ದಾರ್
ಅವರು
ಸಚಿವರಾಗಿ
ಪ್ರಮಾಣ
ವಚನ
ಸ್ವೀಕರಿಸಿದರು.
[ಪರಮೇಶ್ವರ
ಪರಿಚಯ
ಓದಿ]
ಡಾ.ಜಿ.ಪರಮೇಶ್ವರ ಹಾಗೂ ಮನೋಹರ್ ತಹಶೀಲ್ದಾರ್ ಅವರು ಸಂಪುಟ ದರ್ಜೆ ಸಚಿವರಾಗಿ, ಎ.ಮಂಜು ಮತ್ತು ವಿನಯ್ ಕುಲಕರ್ಣಿ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಸೋತರು ಸಂಪುಟ ಸೇರಿದ ಪರಮೇಶ್ವರ :2013ರ ವಿಧಾನಸಭೆ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದ್ದರು.
2014ರ ಜುಲೈ 1ರಂದು ಪರಮೇಶ್ವರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಪರಮೇಶ್ವರ ಅವರು ಅಕ್ಟೋಬರ್ 29ರ ಗುರುವಾರ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅಂದೇ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ.
ಸಾರ್ಥಕ ಸಮಾವೇಶ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪರಮೇಶ್ವರ ಅವರು ಐದು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30ರ ಶುಕ್ರವಾರ 'ಸಾರ್ಥಕ ಸಮಾವೇಶ' ಹಮ್ಮಿಕೊಳ್ಳಲಾಗಿದೆ. ಅರಮನೆ ಮೈದಾನದ ನಲ್ಪಾಡ್ ಪೆವಿಲಿಯನ್ನಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ ಉದ್ಘಾಟನೆಗೊಳ್ಳಲಿದೆ.
ಸಮಯ 5 ಗಂಟೆ : ನೂತನವಾಗಿ ಸಂಪುಟ ಸೇರಿದ ಸಚಿವರಿಗೆ ಶೀಘ್ರದಲ್ಲಿಯೇ ಖಾತೆ ಹಂಚಿಕೆಯಾಗಲಿದೆ. [ಜಾರ್ಜ್ ಕೈ ತಪ್ಪಲಿದೆ ಗೃಹ ಖಾತೆ]
ಸಮಯ 4.52 : ಈಗ ಸಿದ್ದರಾಮಯ್ಯ ಸಂಪುಟದ ಒಟ್ಟು ಸಚಿವರ ಸಂಖ್ಯೆ 34
ಸಮಯ 4.49 : ಸಂಪುಟ ದರ್ಜೆ ಸಚಿವರಾಗಿ ಪರಮೇಶ್ವರ, ಮನೋಹರ್ ತಹಶೀಲ್ದಾರ್ ಮತ್ತು ಸ್ವತಂತ್ರ ಖಾತೆ ಸಚಿವರಾಗಿ ವಿನಯ್ ಕುಲಕರ್ಣಿ, ಎ.ಮಂಜು ಅವರಿಂದ ಪ್ರಮಾಣ ವಚನ ಸ್ವೀಕಾರ
ಸಮಯ 4.48 : ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಮಯ 4.47 : ನೂತನ ಸಚಿವರನ್ನು ಅಭಿನಂದಿಸಿದ ರಾಜ್ಯಪಾಲ ವಜುಭಾಯಿ ವಾಲಾ
ಸಮಯ 4.45 : ಸ್ವತಂತ್ರ ಖಾತೆ ಸಚಿವರಾಗಿ ಎ.ಮಂಜು ಅವರು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು
ಸಮಯ 4.42 : ಸ್ವತಂತ್ರ ಖಾತೆ ಸಚಿವರಾಗಿ ವಿನಯ್ ಕುಲಕರ್ಣಿ ಅವರು ದೇವರ ಹೆಸರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು
ಸಮಯ 4.38 : ಮನೋಹರ್ ತಹಶೀಲ್ದಾರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು
ಸಮಯ
4.35
:
ದೇವರ
ಹೆಸರಿನಲ್ಲಿ
ಪ್ರಮಾಣ
ವಚನ
ಸ್ವೀಕರಿಸಿದ
ಡಾ.ಜಿ.ಪರಮೇಶ್ವರ
ಸಮಯ
4.30
:
ಪ್ರಮಾಣ
ವಚನ
ಕಾರ್ಯಕ್ರಮಕ್ಕೆ
ಆಗಮಿಸಿದ
ರಾಜ್ಯಪಾಲ
ವಜುಭಾಯಿ
ವಾಲಾ
ಸಮಯ 4.25 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಲವು ಸಚಿವರು ರಾಜಭವನಕ್ಕೆ ಆಗಮಿಸಿದ್ದಾರೆ
*
ಧಾರವಾಡ
ದಕ್ಷಿಣದ
ಶಾಸಕ
ವಿನಯ್
ಕುಲಕರ್ಣಿ
ಪರಿಚಯ
*
ಮನೋಹರ್
ತಹಶೀಲ್ದಾರ್
ಪರಿಚಯ
*
ಶಾಸಕ
ಅರಕಲಗೂಡು
ಮಂಜು
ಪರಿಚಯ