ಮಾಜಿ ಸಚಿವ ಬಸವರಾಜ್ ಪಾಟೀಲ್ ಹುಮ್ನಾಬಾದ್ ವಿಧಿವಶ
ಬೀದರ್, ಆಗಸ್ಟ್ 10 : ಮಾಜಿ ಸಚಿವ ಬಸವರಾಜ್ ಪಾಟೀಲ್ ಹುಮ್ನಾಬಾದ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಬೀದರ್ನ ನಿವಾಸದಲ್ಲಿ ಮಧ್ಯಾಹ್ನ ಬಸವರಾಜ ಪಾಟೀಲ್ ಹುಮ್ನಾಬಾದ್ ವಿಧಿವಶರಾಗಿದ್ದಾರೆ. ಬಸವರಾಜ್ ಪಾಟೀಲ್ ಅವರ ಪುತ್ರ ರಾಜಶೇಖರ ಪಾಟೀಲ್ ಹುಮ್ನಾಬಾದ್ ಕ್ಷೇತ್ರದ ಕಾಂಗ್ರೆಸ್ ಶಾಸಕರು.
1978, 1983, 1985, 1989 ಸೇರಿ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಸವರಾಜ ಪಾಟೀಲ್ ಅವರು ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
2009ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿತ್ತು. ಆದ್ದರಿಂದ, ಅವರು ಬಿಜೆಪಿ ಸೇರಿದ್ದರು.
ಸಿದ್ದರಾಮಯ್ಯ ಸಂತಾಪ : ಮಾಜಿ ಸಚಿವ ಬಸವರಾಜ ಪಾಟೀಲ್ ಹುಮ್ನಾಬಾದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ದುಃಖವನ್ನು ಭರಿಸುವ ಶಕ್ತಿಯನ್ನು ಪುತ್ರ ಶಾಸಕ ರಾಜಶೇಖರ ಪಾಟೀಲ್ ಸೇರಿದಂತೆ ಕುಟುಂಬ ಎಲ್ಲರಿಗೂ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ
ವಿಧಾನ
ಸಭೆಯ
ಸದಸ್ಯರಾಗಿ
ಹಾಗೂ
ರಾಜ
ವಿಧಾನ
ಪರಿಷತ್ನ
ಸದಸ್ಯರಾಗಿ
ಉಭಯ
ಸದನಗಳನ್ನೂ
ಪ್ರತಿನಿಧಿಸಿದ
ಬಸವರಾಜ
ಪಾಟೀಲ್
ಹುಮ್ನಾಬಾದ್
ಅವರು
ಬೀದರ್
ಜಿಲ್ಲೆಯ
ಸರ್ವಾಂಗೀಣ
ಅಭಿವೃದ್ಧಿಗೆ
ಅಪಾರವಾಗಿ
ಶ್ರಮಿಸಿದ್ದರು.
ಸರಳ
ವ್ಯಕ್ತಿತ್ವದ
ವಿರಳ
ವ್ಯಕ್ತಿಯಾಗಿದ್ದ
ಬಸವರಾಜ
ಪಾಟೀಲ್
ಹುಮ್ನಾಬಾದ್
ಅವರು
ಸ್ನೇಹ
ಜೀವಿಯಾಗಿದ್ದರು
ಎಂದು
ಸಿದ್ದರಾಮಯ್ಯ
ಬಣ್ಣಿಸಿದ್ದಾರೆ.