ಶ್ರೀಗಳ ಪ್ರಕರಣ, ಗಾಯಕಿ ಬಟ್ಟೆಯಲ್ಲಿ ವೀರ್ಯಾಣು ಪತ್ತೆ
ಬೆಂಗಳೂರು, ನ.21 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪ್ರೇಮಲತಾ ಅವರು ಸಿಐಡಿ ಅಧಿಕಾರಿಗಳಿಗೆ ನೀಡಿರುವ ಬಟ್ಟೆಯ ಮೇಲೆ ವೀರ್ಯಾಣುವಿನ ಅಂಶ ಪತ್ತೆಯಾಗಿದೆ. ಈ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸಿಐಡಿಗೆ ವರದಿ ನೀಡಿದೆ.
ರಾಘವೇಶ್ವರ
ಶ್ರೀಗಳು
ತಮ್ಮ
ಮೇಲೆ
ನಿರಂತರವಾಗಿ
ಅತ್ಯಾಚಾರ
ಮಾಡಿದ್ದಾರೆ
ಎಂದು
ಆರೋಪಿಸಿರುವ
ಗಾಯಕಿ
ಪ್ರೇಮಲತಾ
ದಿವಾಕರ್
ಶಾಸ್ತ್ರೀ
ಅವರು,
ಈ
ಆರೋಪಕ್ಕೆ
ಪೂರಕವಾಗಿ
ಅತ್ಯಾಚಾರದ
ಸಂದರ್ಭದಲ್ಲಿ
ಧರಿಸಿದ್ದ
ಉಡುಪನ್ನು
ಸಿಐಡಿ
ಅಧಿಕಾರಿಗಳಿಗೆ
ನೀಡಿದ್ದರು.
[ರಾಘವೇಶ್ವರ
ಶ್ರೀಗಳಿಗೆ
ಜಾಮೀನು]
ಉಡುಪನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ್ದ ಸಿಐಡಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅದನ್ನು ಪರೀಕ್ಷೆಗಾಗಿ ಕಳುಹಿಸಿದ್ದರು. ಪ್ರಯೋಗಾಲಯ ಈ ಕುರಿತ ವರದಿ ನೀಡಿದ್ದು, ಸಿಐಡಿ ಅಧಿಕಾರಿಗಳು ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. [ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?]
ಆದರೆ, ಉಡುಪಿನ ಮೇಲೆ ಪತ್ತೆಯಾಗಿರುವ ವೀರ್ಯ ರಾಘವೇಶ್ವರ ಸ್ವಾಮಿಗಳದ್ದಾ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆದು ಅದರ ವರದಿ ಬಂದ ನಂತರ ಈ ಬಗ್ಗೆ ಸತ್ಯಾಂಶ ತಿಳಿಯಲಿದೆ. ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. [ಆರೋಪಗಳನ್ನು ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ]
ತಡೆಯಾಜ್ಞೆಯನ್ನು ತೆರವುಗೊಳಿಸಿ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಕ್ಕೆ ಮಾನವಿ ಮಾಡಿದ್ದು, ಈ ಕುರಿತ ವಿಚಾರಣೆ ಬುಧವಾರ ನಡೆದಿದ್ದು, ಇಂದಿಗೆ ವಿಚಾರಣೆ ಮುಂದೂಡಲಾಗಿದೆ. ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ಅವರ ಏಕ ಸದಸ್ಯಪೀಠ ಈ ಬಗ್ಗೆ ಇಂದು ವಿಚಾರಣೆ ಮುಂದುವರೆಸಲಿದೆ.