ಡಿಕೆ ರವಿ ಸಾವಿನ ತನಿಖೆ ಅಂತಿಮ ಹಂತದಲ್ಲಿ : ಸಿನ್ಹಾ
ಬೆಂಗಳೂರು, ಜುಲೈ 28 : ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಕೆಲವೇ ದಿನಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದು ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಸೋಮವಾರ
ಬೆಂಗಳೂರಿಗೆ
ಭೇಟಿ
ನೀಡಿದ್ದ
ಅನಿಲ್
ಕುಮಾರ್
ಸಿನ್ಹಾ
ಅವರು
ಮಾಧ್ಯಮಗಳ
ಜೊತೆ
ಮಾತನಾಡಿದರು.
ಡಿ.ಕೆ.ರವಿ
ಅವರ
ಸಾವಿನ
ಪ್ರಕರಣದ
ತನಿಖೆ
ಅಂತಿಮ
ಹಂತ
ತಲುಪಿದೆ.
ಸದ್ಯ,
ತನಿಖೆ
ಸಂದರ್ಭದಲ್ಲಿ
ಸಂಗ್ರಹಿಸಿದ
ಸಾಕ್ಷಿಗಳನ್ನು
ಕ್ರೋಢಿಕರಿಸಲಾಗುತ್ತಿದೆ
ಎಂದು
ತಿಳಿಸಿದರು.
[ಡಿಕೆ
ರವಿ
ಸಾವಿನ
ಪ್ರಕರಣ
Timeline]
'ಡಿ.ಕೆ.ರವಿ ಅವರ ಸಾವಿನ ತನಿಖೆ ನಡೆಯುವಾಗ ಸಿಬಿಐ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಅವರು, ಶೀಘ್ರದಲ್ಲಿಯೇ ವರದಿಯ ಸತ್ಯಾಂಶ ಜನರಿಗೆ ತಿಳಿಯಲಿದೆ' ಎಂದರು. [ಡಿಕೆ ರವಿ ಸಾವಿನ ತನಿಖೆ ಸಿಬಿಐಗೆ]
ಅಕ್ರಮ ಗಣಿಗಾರಿಕೆ ಸೇರಿದಂತೆ ಕರ್ನಾಟಕ ಸರ್ಕಾರ ವಹಿಸಿರುವ ಇತರ ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಹೇಳಿದ ಅವರು, ಒಂದಂಕಿ ಲಾಟರಿ ಹಗರಣದ ತನಿಖೆ ಕೈಗೆತ್ತಿಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. [ಡಿಕೆ ರವಿ ಆತ್ಮಹತ್ಯೆ ಹಿಂದೆ ಕ್ರಿಮಿನಲ್ ಸಂಚಿಲ್ಲ]
2015ರ ಮಾರ್ಚ್ 16ರಂದು ಡಿ.ಕೆ.ರವಿ ಅವರು ಸಾವನ್ನಪ್ಪಿದ್ದರು. ರವಿ ಅವರ ಶವ ತಾವರೆಕೆರೆ ಸಮೀಪದ ಸೈಂಟ್ ಜಾನ್ ವುಡ್ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿತ್ತು. ಮೊದಲು ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಬಳಿಕ ಸಿಬಿಐ ತನಿಖೆಗೆ ನೀಡಲಾಗಿತ್ತು. [ಪಿಟಿಐ ಚಿತ್ರ]