ಹಾವೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ರೈತ
ಹಾವೇರಿ, ಜೂ.27 : ಆತ್ಮಹತ್ಯೆ ಮಾಡಿಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕರೆ ನೀಡಿದ್ದಾರೆ. ಆದರೆ, ಶನಿವಾರ ಹಾವೇರಿಯಲ್ಲಿ ಮತ್ತೊಬ್ಬ ರೈತ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾವೇರಿ
ಜಿಲ್ಲೆಯ
ಕುರುಗುಂದ
ಗ್ರಾಮದ
ಜಗದೀಶ್
ಕಿಡೆಗಣಿ
(45)
ಅವರು
ಆತ್ಮಹತ್ಯೆಗೆ
ಶರಣಾದ
ರೈತ.
ಶನಿವಾರ
ಬೆಳಗ್ಗೆ
ಹೊಲಕ್ಕೆ
ತೆರಳಿದ್ದ
ಜಗದೀಶ್
ಅವರು
ವಿಷ
ಸೇವಿಸಿ
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
ಸಾಲದ
ಬಾಧೆಯೇ
ಆತ್ಮಹತ್ಯೆಗೆ
ಕಾರಣ
ಎಂದು
ತಿಳಿದುಬಂದಿದೆ.
[ರೈತ
ಆತ್ಮಹತ್ಯೆ
:
ಯಾರು,
ಏನು
ಹೇಳಿದರು?]
ಜಗದೀಶ್ ಕಿಡೆಗಣಿ ಅವರು ವಿವಿಧ ಬ್ಯಾಂಕುಗಳಲ್ಲಿ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದರು. ಅದನ್ನು ತೀರಿಸಲಾಗದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ : 'ರೈತರ ಹಿತ ಕಾಪಡಲು ಸರ್ಕಾರ ಬದ್ಧವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮನವಿ ಮಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಮಾತ್ರ ಪರಿಹಾರವಲ್ಲ' ಎಂದು ಹೇಳಿದರು.
ಆತ್ಮಹತ್ಯೆ ಪ್ರಕರಣಗಳು
* ಜೂನ್ 8, ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗುರುನಾಥ ಮಲ್ಲಪ್ಪ ಚಾಪಗಾವಿ (50) ಆತ್ಮಹತ್ಯೆ
* ಜೂನ್ 25, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣದಹೊಸೂರಿನ ನಿಂಗೇಗೌಡ (50)
* ಜೂನ್ 26, ನಂಜನಗೂಡು ತಾಲೂಕು ಸಿಬ್ಬೇಗೌಡನಹುಂಡಿಯ ಶಿವಲಿಂಗೇಗೌಡ (40)