ಅಶ್ವಿನ್ರಾವ್ಗೆ ಸೇರಿದ 5 ಕೋಟಿ ಆಸ್ತಿ ಜಪ್ತಿ?
ಬೆಂಗಳೂರು, ಜನವರಿ 30 : ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರಿಗೆ ಸೇರಿದ ಸುಮಾರು 5.5 ಕೋಟಿ ರೂ.ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ತಿಳಿದುಬಂದಿದೆ. ಅಶ್ವಿನ್ರಾವ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.
ಹೈದರಾಬಾದ್,
ಬೆಂಗಳೂರು
ಸೇರಿದಂತೆ
ವಿವಿಧ
ಕಡೆ
ಅಶ್ವಿನ್
ರಾವ್
ಅವರು
ಖರೀದಿ
ಮಾಡಿದ್ದ
ಸುಮಾರು
5.5
ಕೋಟಿ
ರೂ.ಮೌಲ್ಯದ
ಆಸ್ತಿಯನ್ನು
ಜಾರಿ
ನಿರ್ದೇಶನಾಲಯ
ಜಪ್ತಿ
ಮಾಡಿದೆ
ಎಂಬ
ಮಾಹಿತಿ
ಲಭ್ಯವಾಗಿದೆ.
ಕರ್ನಾಟಕ
ಲೋಕಾಯುಕ್ತದಲ್ಲಿನ
ಭ್ರಷ್ಟಾಚಾರ
ಪ್ರಕರಣದ
ತನಿಖೆಗೆ
ಜಾರಿ
ನಿರ್ದೇಶನಾಲಯವೂ
ಕೈ
ಜೋಡಿಸಿದೆ.
[ಲೋಕಾಯುಕ್ತದ
ಭ್ರಷ್ಟಾಚಾರದಲ್ಲಿ
ಅಕ್ರಮ
ಹಣ
ವರ್ಗಾವಣೆ?]
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್ಐಟಿ ಅಶ್ವಿನ್ ರಾವ್ ಅವರು ಸುಮಾರು 1 ಕೋಟಿ ರೂ. ಮೊತ್ತದ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿತ್ತು. ಇದು ಹವಾಲಾ ಹಣವೇ? ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿತ್ತು. [ಲೋಕಾಯುಕ್ತದ ಭ್ರಷ್ಟಾಚಾರ 4 ಪ್ರಮುಖ ಬೆಳವಣಿಗೆಗಳು]
'ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002'ರ ಅನ್ವಯ ಅಶ್ವಿನ್ ರಾವ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಅಶ್ವಿನ್ ರಾವ್ ಅವರಿಗೆ ಡಾ.ವಿಲ್ಸನ್ ಎಂಬುವವರು ಹಣವನ್ನು ನೀಡಿದ್ದರು ಎಂದು ಪತ್ತೆ ಹಚ್ಚಿದ ಐಡಿ, ಆ ಬಗ್ಗೆ ತನಿಖೆ ನಡೆಸುತ್ತಿತ್ತು. ಅಶ್ವಿನ್ ರಾವ್ ಅವರು ತಮ್ಮ ಸಹಚರರಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಅಶ್ವಿನ್ ರಾವ್ ಅವರು ಮೊದಲ ಆರೋಪಿಯಾಗಿದ್ದು, ಎಸ್ಐಟಿ ಅವರನ್ನು ಬಂಧಿಸಿದೆ. ಸದ್ಯ, ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಸ್ಐಟಿ 10ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ.