ಡಿಕೆ ರವಿ ಕೊನೆಯ ಕರೆ ಸ್ವೀಕರಿಸಿದ್ದು 11.22ಕ್ಕೆ
ಬೆಂಗಳೂರು, ಮಾ. 18 : ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖೆ ಕೈಗೊಂಡಿರುವ ಪೊಲೀಸರು ಸೋಮವಾರ ಬೆಳಗ್ಗೆ 11.22ಕ್ಕೆ ರವಿ ಅವರು ಕೊನೆಯ ಫೋನ್ ಕರೆ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರಕರಣದ
ತನಿಖೆ
ನಡೆಸುತ್ತಿರುವ
ಅಧಿಕಾರಿಯೊಬ್ಬರು
ಒನ್
ಇಂಡಿಯಾದ
ಜೊತೆ
ಈ
ಕುರಿತು
ಮಾಹಿತಿ
ಹಂಚಿಕೊಂಡಿದ್ದಾರೆ.
ರವಿ
ಅವರು
ಸೋಮವಾರ
ಬೆಳಗ್ಗೆ
11.22ಕ್ಕೆ
ಕೊನೆಯ
ಫೋನ್
ಕರೆಗೆ
ಉತ್ತರ
ನೀಡಿದ್ದಾರೆ.
ಆ
ಫೋನ್
ಕರೆ
ಸ್ನೇಹಿತರಿಂದ
ಬಂದಿದ್ದು,
ಅವರು
ಸಹ
ಐಎಎಸ್
ಅಧಿಕಾರಿಯಾಗಿದ್ದಾರೆ.
[ಮಣ್ಣಲ್ಲಿ
ಮಣ್ಣಾದ
ಡಿಕೆ
ರವಿ]
ಐಎಎಸ್ ಅಧಿಕಾರಿ ವಿಚಾರಣೆ : ಡಿಕೆ ರವಿ ಅವರಿಗೆ ಕೊನೆಯದಾಗಿ ಕರೆ ಮಾಡಿದ ಐಎಎಸ್ ಅಧಿಕಾರಿಯನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಇಲ್ಲಿಯವರೆಗಿನ ತನಿಖೆಯಿಂದ ನಿರ್ಧರಿಸಿದ್ದಾರೆ. [ಡಿಕೆ ರವಿ ಸಾವು : ಪೊಲೀಸರ ತನಿಖೆ ಹೇಗೆ?]
ರವಿ ಅವರ ಕಾರು ಚಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು, ರವಿ ಅವರ ಪತ್ನಿ ಕುಸುಮಾ ಮತ್ತು ಕೆಲವು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಆದರೆ, ದುಖಃದಲ್ಲಿರುವ ಕುಟುಂಬದವರ ವಿಚಾರಣೆ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. [ಈ ಸಾವು ನ್ಯಾಯವೇ ಮತ ಹಾಕಿ]
ವಾಗ್ವಾದ ನಡೆದಿತ್ತೇ? : ಡಿಕೆ ರವಿ ಅವರು ಶನಿವಾರ ಮತ್ತು ಭಾನುವಾರ ನಾಗರಭಾವಿಯಲ್ಲಿರುವ ಅವರ ಮಾವನ ಮನೆಯಲ್ಲಿದ್ದರು. ಸೋಮವಾರ ಅಲ್ಲಿಂದಲೇ ಕಚೇರಿಗೆ ಹೋಗಿದ್ದರು. ಅಲ್ಲಿ ಕೌಟುಂಬಿಕ ವಿಷಯಕ್ಕೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕುಟುಂಬ ಸದಸ್ಯರ ವಿಚಾರಣೆ ನಂತರ ಮಾತ್ರ ಖಚಿತ ಮಾಹಿತಿ ಲಭ್ಯವಾಗಲಿದೆ.