ಅತಂತ್ರ ಸ್ಥಿತಿಯಲ್ಲಿ ಎಸ್ಎಸ್ಎಲ್ಸಿ ಮೌಲ್ಯಮಾಪನ
ಬೆಂಗಳೂರು, ಏಪ್ರಿಲ್ 17: ಪ್ರೌಢಶಾಲಾ ಶಿಕ್ಷಕರ ಸಂಘದಲ್ಲಿ ಮೌಲ್ಯಮಾಪನ ವಿಷಯದಲ್ಲಿ ಬಿರುಕು ಉಂಟಾಗಿರುವುದರಿಂದ ಎಸ್ಎಸ್ಎಲ್ಸಿ ಮೌಲ್ಯಮಾಪನ ಸೋಮವಾರ (ಏಪ್ರಿಲ್ 18) ದಂದು ಆರಂಭಗೊಳ್ಳುವುದು ಕಷ್ಟ ಎನ್ನಬಹುದು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಅವರು ಮೌಲ್ಯಮಾಪನ ನಡೆಸಲು ಸಿದ್ಧ ಎಂದಿದ್ದಾರೆ. ಆದರೆ, ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ.ಗೋಪಿನಾಥ್, ಯಾವುದೇ ಕಾರಣಕ್ಕೂ ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.[ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಹೇಗೆ ದೂರು ನೀಡಬೇಕು?]
ಸರ್ಕಾರ
ನಮ್ಮ
ಪ್ರಮುಖ
ಬೇಡಿಕೆ
ಈಡೇರಿಸಿದೆ.
ಬಾಕಿ
ಉಳಿದ
ಬೇಡಿಕೆಗಳನ್ನು
ಸರ್ಕಾರ
ಶೀಘ್ರದಲ್ಲೇ
ಈಡೇರಿಸುವ
ಸಾಧ್ಯತೆಯಿದೆ.
ಹೀಗಾಗಿ
ಕೋಡಿಂಗ್
ಪ್ರಕ್ರಿಯೆಯಲ್ಲಿ
ಪಾಲ್ಗೊಳ್ಳಲು
ನಿರ್ಧರಿಸಲಾಗಿದೆ
ಎಂದು
ಮಂಜುನಾಥ್
ಹೇಳಿದ್ದಾರೆ.
[ಪ್ರಶ್ನೆ
ಪತ್ರಿಕೆ
ಸೋರಿಕೆ,
ಪಿಯು
ವಿದ್ಯಾರ್ಥಿಗಳಲ್ಲಿ
ಭುಗಿಲೆದ್ದ
ಆಕ್ರೋಶ]
ರಾಜ್ಯದಲ್ಲಿ 63 ಸಾವಿರ ಶಿಕ್ಷಕರು ನಮ್ಮ ಸಂಘದಡಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ 35 ಸಾವಿರ ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸುತ್ತಾರೆ. 280 ಕೇಂದ್ರಗಳಲ್ಲೂ ನಮ್ಮ ಸದಸ್ಯರು ಹಾಜರಾಗುತ್ತಾರೆ ಎಂದು ತಿಳಿಸಿದರು.[75 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆ ಎಳೆದ ಶಾಲಾ ಮಂಡಳಿ]
ಗೋಪಿನಾಥ್ ರಿಂದ ವಿರೋಧ: ಕೋಡಿಂಗ್ ಪ್ರಕ್ರಿಯೆಯನ್ನು ಅನುದಾನಿತ ಪ್ರೌಢಶಾಲಾ ಶಿಕ್ಷಕರು ಬಹಿಷ್ಕರಿಸಿದ್ದಾರೆ. ಕುಮಾರ್ ನಾಯಕ್ ವರದಿ ಜಾರಿಯಾಗಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ. [ತಾಯಿ ಶವ ಮನೆಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಹುಡುಗಿ]
ಹುಬ್ಬಳ್ಳಿ,
ಬೆಳಗಾವಿ,
ಗುಲ್ಬರ್ಗ,
ಹೈ-ಕರ್ನಾಟಕ
ಸೇರಿದಂತೆ
ರಾಜ್ಯದ
ಬಹುತೇಕ
ಜಿಲ್ಲೆಗಳಲ್ಲಿ
ಕೋಡಿಂಗ್
ಪ್ರಕ್ರಿಯೆ
ನಡೆದಿಲ್ಲ.
ವಿದ್ಯಾರ್ಥಿಗಳು
ಕೂಡ
ಶಿಕ್ಷಕರ
ಪರವಾಗಿ
ಧ್ವನಿ
ಎತ್ತಿದ್ದು,
ಇಂತಹ
ಸಂದರ್ಭದಲ್ಲಿ
ಮೌಲ್ಯಮಾಪನ
ಮಾಡುವುದು
ಸರಿಯಲ್ಲ.
ಮಂಜುನಾಥ್
ಅವರು
ಏಕಪಕ್ಷೀಯವಾಗಿ
ನಿರ್ಧಾರ
ಕೈಗೊಂಡಿದ್ದಾರೆ
ಎಂದು
ಡಿಸಿ
ಗೋಪಿನಾಥ್
ಹೇಳಿದ್ದಾರೆ.
ಒಟ್ಟಾರೆ, ಬಹುತೇಕ ಕಡೆ ಕೋಡಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಮೌಲ್ಯಮಾಪನ ವಿಳಂಬವಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಕಳೆದ 16 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಿಯುಸಿ ಉಪನ್ಯಾಸಕರು ಹಾಗೂ ಪ್ರಾಂಶುಪಾಲರುಗಳ ಸಂಘವು ನಿರಂತರ ಹೋರಾಟ ನಡೆಸುತ್ತಿದೆ.