ಯುವತಿ ಸಾವು : ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮಡಿಕೇರಿ ಆಸ್ಪತ್ರೆಗೆ ಮುತ್ತಿಗೆ
ಮಡಿಕೇರಿ, ಜೂನ್ 29 : ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವುದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಸಂಬಂಧಿಕರು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಮೃತಪಟ್ಟಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ.
ಹೊಟ್ಟೆ
ನೋವಿನಿಂದ
ಬಳಲುತ್ತಿದ್ದ
ಕುಶಾಲನಗರ
ಸಮೀಪದ
ಕಣಿವೆಯ
ಮಮತಾ
(17)
ಎಂಬುವವರನ್ನು
ಮಡಿಕೇರಿ
ಜಿಲ್ಲಾಸ್ಪತ್ರೆಗೆ
ದಾಖಲಿಸಲಾಗಿತ್ತು.
ಮಮತಾ
ಪರೀಕ್ಷೆ
ನಡೆಸಿದ
ವೈದ್ಯರು
ಎರಡು
ಬಾರಿ
ಶಸ್ತ್ರಚಿಕಿತ್ಸೆ
ನಡೆಸಿದ್ದರು.
ಆದರೆ,
ಶಸ್ತ್ರ
ಚಿಕಿತ್ಸೆ
ಫಲಕಾರಿಯಾಗದ
ಕಾರಣ
ರೋಗ
ಉಲ್ಭಣಗೊಂಡಿತ್ತು.
ಆದ್ದರಿಂದ
ಆಕೆಯನ್ನು
ಮಂಗಳೂರಿನ
ಖಾಸಗಿ
ಆಸ್ಪತ್ರೆಗೆ
ದಾಖಲಿಸಲಾಗಿತ್ತು.
[ಖಾಸಗಿ
ಆಸ್ಪತ್ರೆಗಳ
ಈ
ವಿಚಾರ
ತಿಳಿದರೆ
ನಿಜಕ್ಕೂ
ಬೆಚ್ಚಿ
ಬೀಳುತ್ತೀರಿ!]
ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದಳು. ಮಮತಾ ಸಾವಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಯವೇ ಕಾರಣ ಎಂದು ಆರೋಪಿಸಿ ಮಮತಾ ಸಂಬಂಧಿಕರು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಿಲ್ಲಾಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. [ಚಿತ್ರಗಳು : ಬೆಂಗಳೂರಲ್ಲಿ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಉದ್ಘಾಟನೆ]
ಸ್ಥಳಕ್ಕೆ
ಜಿಲ್ಲಾಧಿಕಾರಿ
ಹಾಗೂ
ಜಿಲ್ಲಾ
ಪೊಲೀಸ್
ವರಿಷ್ಠಾಧಿಕಾರಿಗಳು
ಬರಬೇಕೆಂದು
ಪ್ರತಿಭಟನಾಕಾರರು
ಪಟ್ಟು
ಹಿಡಿದರು.
ಸ್ಥಳಕ್ಕಾಗಮಿಸಿದ
ಹೆಚ್ಚುವರಿ
ಜಿಲ್ಲಾಧಿಕಾರಿ
ಸತೀಶ್
ಕುಮಾರ್
ಪ್ರತಿಭಟನಾಕಾರರ
ಮನವೊಲಿಸಲು
ಯತ್ನಿಸಿದರು.
ಆದರೆ,
ಸತೀಶ್
ಕುಮಾರ್
ಅವರನ್ನೇ
ಪ್ರತಿಭಟನಾಕಾರರು
ತರಾಟೆಗೆ
ತೆಗೆದುಕೊಂಡರು.
['ಮುಂಜಿ
ಶಾಸ್ತ್ರ'ದಲ್ಲಿ
ವೈದ್ಯರ
ನಿರ್ಲಕ್ಷ್ಯ:
ಸಿಎಂಗೆ
ಪೋಷಕರ
ಪತ್ರ]
ಸಂಧಾನ ಸಭೆ : ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಮಮತಾ ಸಂಬಂಧಿಕರ ನಡುವೆ ಸಂಧಾನ ಸಭೆ ನಡೆಯಿತು.
ಸಭೆಯಲ್ಲಿ
ಸುನೀಲ್
ಸುಬ್ರಮಣಿ
ಅವರು,
ಮಮತಾ
ಸಾವಿನ
ಬಗ್ಗೆ
ಕಾನೂನು
ರೀತಿಯಲ್ಲಿ
ಕ್ರಮ
ಕೈಗೊಳ್ಳುವಂತೆ
ಅಧಿಕಾರಿಗಳಿಗೆ
ಸೂಚನೆ
ನೀಡಿದರು.
ಮಮತಾ
ಸಂಬಂಧಿಕರು
ವೈದ್ಯರ
ನಿರ್ಲಕ್ಷ್ಯದಿಂದಲೇ
ಸಾವಾಗಿದ್ದು
ವೈದ್ಯರ
ವಿರುದ್ಧ
ಮಮತಾ
ಅವರ
ತಂದೆ
ಮೋಹನ್
ಈಗಾಗಲೇ
ದೂರು
ನೀಡಿದ್ದಾರೆ.
ಆದ್ದರಿಂದ
ವೈದ್ಯರನ್ನು
ಬಂಧಿಸುವಂತೆ
ಒತ್ತಾಯಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, 'ಮರಣೋತ್ತರ ಚಿಕಿತ್ಸೆಯ ನಂತರ ಸತ್ಯಾಂಶ ತಿಳಿದುಬರಲಿದೆ. ಶಸ್ತ್ರಚಿಕಿತ್ಸೆಯಿಂದ ಯುವತಿ ಮೃತಪಟ್ಟಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.