ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಿಕೆಟ್, ಟಿಕೆಟ್, ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿಸಿದೆ ಈ ಸೂಚನೆ
ಬೆಂಗಳೂರು, ಆಗಸ್ಟ್ 21: 2018 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲದ ಪ್ರಶ್ನೆ ಎದ್ದಿದೆ. ಈ ನಡುವೆ ಡಿಸೆಂಬರ್ ವೇಳೆಗೆ ಅಭ್ಯರ್ಥಿಗಳ ಪಟ್ಟಿ, ಟಿಕೆಟ್ ಹಂಚಿಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.
ಆದರೆ,
ಹಾಲಿ
ಶಾಸಕ,
ಸಚಿವರುಗಳಿಗೆ
ಮೈನಡುಕ
ಹುಟ್ಟುವ
ಸೂಚನೆಯೊಂದನ್ನು
ಹೈಕಮಾಂಡ್
ನೀಡಿದೆ.
ಕಳಪೆ
ಸಾಧನೆ
ತೋರಿರುವ,
ಜನಾನುರಾಗಿಯಾಗಿರದ
ಜನ
ಪ್ರತಿನಿಧಿಗಳಿಗೆ
ಟಿಕೆಟ್
ನಿರಾಕರಿಸುವಂತೆ
ಸಿದ್ದರಾಮಯ್ಯ,
ಪರಮೇಶ್ವರ್
ಅವರಿಗೆ
ಹೈಕಮಾಂಡ್
ಖಡಕ್
ಎಚ್ಚರಿಕೆ
ನೀಡಿದೆ.
ಬಿಜೆಪಿಯಂತೆ ಕಾಂಗ್ರೆಸ್ ಕೂಡಾ ತನ್ನ ಶಾಸಕರು, ಸಚಿವರುಗಳ ರಿಪೋರ್ಟ್ ಕಾರ್ಡ್ ತಯಾರಿಸುತ್ತಿದ್ದು, ಇದರಲ್ಲಿ ಕಳಪೆ ಸಾಧನೆ ಮಾಡಿರುವ ಜನ ಪ್ರತಿನಿಧಿಗಳಿಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಇದರಿಂದ ಅನೇಕ ಹಿರಿಯ ಸಚಿವರು ಕಂಗಾಲಾಗಿದ್ದು, ಅಳಿದುಳಿದ ಸಮಯದಲ್ಲಿ ಜನಸೇವೆ ಮಾಡುವ ಪ್ರಯತ್ನದಲ್ಲಿ ತೊಡಗಿರುವುದು ಕಂಡು ಬಂದಿದೆ.
Comments
karnataka government mla karnataka assembly elections 2018 congress ಕಾಂಗ್ರೆಸ್ ಟಿಕೆಟ್ ಕರ್ನಾಟಕ ವಿಧಾನಸಭೆ ಚುನಾವಣೆ 2018 ಕರ್ನಾಟಕ ಸರ್ಕಾರ
English summary
Non-performing MLAs and some current cabinet ministers, will not be given a ticket by the Congress in Karnataka to contest the 2018 assembly elections.