ಕ್ರಿಕೆಟ್ ಬೆಟ್ಟಿಂಗ್ : ಹುಬ್ಬಳ್ಳಿಯಲ್ಲಿ 28 ಬಕ್ಕಿಗಳು ಬಲೆಗೆ
ಹುಬ್ಬಳ್ಳಿ, ಫೆ. 18: ಕ್ರಿಕೆಟ್ ಪಂದ್ಯವೆಂದರೆ ಬುಕ್ಕಿಗಳಿಗೆ ಹಬ್ಬ. ಮುಂಬೈ ಹಾಗೂ ನವದೆಹಲಿಯಂತಹ ಮಹಾನಗರಗಳಲ್ಲಿ ಮಾತ್ರ ಅಲ್ಲ. ಹುಬ್ಬಳ್ಳಿಯಂತಹ ನಗರಗಳಲ್ಲೂ ಬುಕ್ಕಿಗಳ ಚಟುವಟಿಕೆ ಬಯಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ 28 ಜನ ಬಲೆಗೆ ಬಿದ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಬುಕ್ಕಿಗಳು ಬೆಟ್ಟಿಂಗ್ ಕಟ್ಟಿದ್ದವರಿಂದ ಕಟ್ಟಿದ್ದವರಿಂದ ಹಣ ಪಡೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1.5 ಲಕ್ಷ ರು. ನಗದು ಹಾಗೂ 22 ಮೊಬೈಲ್ ಫೋನ್ಗಳನ್ನು ವಶಪಡಿಸಿಳ್ಳಲಾಗಿದೆ.
ಬಂಧಿತ ಆರೋಪಿಗಳು : ಹಳೇಹುಬ್ಬಳ್ಳಿ ಚನ್ನಪೇಟೆ ನಿವಾಸಿ ಗಂಗಾಧರ ಮಿಸ್ಕಿನ್, ಶರಾವತಿ ನಗರದ ಸುಭಾಷ್ ಭಾಂಡಗೆ, ಗಣೇಶನಗರದ ಗಣೇಶ ಮೆಹರವಾಡೆ, ಅರವಿಂದನಗರದ ರಮೇಶ ಅಥಣಿ, ಪರಶುರಾಮ ಪವಾರ, ರಾಜು ಇರಕಲ್ಲ, ಚಂದ್ರಕಾಂತ ಪವಾರ, ಅರ್ಜುನ ಶಿರಾಳಕರ, ಗಣೇಶಪೇಟ ಮುಕ್ಕೇರಿ ಗಲ್ಲಿಯ ಅಲ್ತಾಫ್ ಕಿತ್ತೂರು, ಬಾಕಳೆ ಗಲ್ಲಿಯ ಭಾಸ್ಕರ ಉರ್ಫ್ ವಿನಾಯಕ ಮೇತ್ರಾಣಿ, ತುಮಕೂರು ಓಣಿಯ ರಿಯಲ್ ಎಸ್ಟೇಟ್ ಉದ್ಯಮಿ ಹೀರಾಚಂದ, ದಿವಟೆ ಓಣಿಯ ಕೃಷ್ಣಾ ಎಂ. ಮೆಹರವಾಡೆ, ಈರಣ್ಣ ಕೆ. ಬಸವಾ, ಜಿ. ಅಡ್ಡಾದ, ರಾಘವೇಂದ್ರ ಬಿ. ಕಠಾರೆ, ಘಂಟಿಕೇರಿ ಅರಳಿಕಟ್ಟಿ ಓಣಿಯ ಸಂತೋಷ ವಿ. ಕಾಟವೆ.