ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲೋಕಾಯುಕ್ತ ಹಗರಣದ Timeline

By ರವೀಂದ್ರ ಭಟ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 08 : ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ನಡೆಯುವ ದಾಳಿ ತಪ್ಪಿಸಲು 1 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆ ತಂದಿದೆ. ಭಾಸ್ಕರರಾವ್ ರಾಜೀನಾಮೆಯೊಂದಿಗೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

2015ರ ಮೇ 11ರಂದು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಬರೆದ ಪತ್ರದಿಂದ ಲೋಕಾಯುಕ್ತದಲ್ಲಿ ನಡೆದ ಈ ಹಗರಣ ಬೆಳಕಿಗೆ ಬಂದಿತು. ಲೋಕಾಯುಕ್ತ ಕಚೇರಿಯಲ್ಲಿಯೇ ಹಣದ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. [ಭಾಸ್ಕರರಾವ್ ರಾಜೀನಾಮೆ]

lokayukta

ಕರ್ನಾಟಕ ಸರ್ಕಾರ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಗೆ ನೀಡಿದೆ. ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಜೈಲು ಸೇರಿದ್ದಾರೆ. ಲೋಕಾಯುಕ್ತ ಹಗರಣದ Timeline ಇಲ್ಲಿದೆ.....[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಲೋಕಾಯುಕ್ತ ಹಗರಣದ Timeline

* 2015ರ ಮೇ 11ರಂದು ಲೋಕಾಯುಕ್ತ ಕಚೇರಿಯಲ್ಲಿನ ಡೀಲಿಂಗ್ ಬಗ್ಗೆ ಎಸ್‍ಪಿ ಸೋನಿಯಾ ನಾರಂಗ್ ಪತ್ರ
* ಜೂನ್ 11ರಂದು ಟಿವಿ ವಾಹಿನಿಗಳ ಮೂಲಕ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ನಾರಂಗ್ ಬರೆದ ಪತ್ರ ಬಹಿರಂಗ
* ಜೂನ್ 24 - ಆರೋಪದ ನಾರಂಗ್ ಅವರಿಂದ ವರದಿ ಕೇಳಿದ ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ
* ಹಗರಣದಲ್ಲಿ ಕೇಳಿಬಂತು ಲೋಕಾಯುಕ್ತರ ಪುತ್ರನ ಹೆಸರು
* ಜೂನ್ 26 - ಮೌನ ಮುರಿದ ಭಾಸ್ಕರರಾವ್, ಪುತ್ರ ಅಶ್ವಿನ್ ರಾವ್ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ
* ಹಗರಣದ ತನಿಖೆಯನ್ನು ಸಿಸಿಬಿಗೆ ವಹಿಸುವುದಾಗಿ ಘೋಷಣೆ
* ಜುಲೈ 01 - ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ, ತಡೆ ತಂದ ಅಶ್ವಿನ್ ರಾವ್
* ಜುಲೈ 06 - ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿದ ಸರ್ಕಾರ
* ಜುಲೈ 21 - ಎಸ್‌ಐಟಿಯಿಂದ ಅಶೋಕ್ ಕುಮಾರ್ ಬಂಧನ
* ಜುಲೈ 26 - ಎಸ್‌ಐಟಿಯಿಂದ ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಬಂಧನ
* ಜುಲೈ 27 - ತೆಲಂಗಾಣದಲ್ಲಿ ಅಶ್ವಿನ್ ರಾವ್ ಬಂಧಿಸಿದ ಎಸ್‌ಐಟಿ
* ಆಗಸ್ಟ್‌ - ಭಾಸ್ಕರರಾವ್ ಪದಚ್ಯುತಿಗೆ ಪ್ರಕ್ರಿಯೆ ಆರಂಭಿಸಿದ ಪ್ರತಿಪಕ್ಷ ಬಿಜೆಪಿ, ಜೆಡಿಎಸ್
* ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ವಿರುದ್ಧ 4ನೇ ಎಫ್‌ಐಆರ್ ದಾಖಲು
* ಸೆಪ್ಟೆಂಬರ್ 16 - ಎಸ್‌ಐಟಿಯಿಂದ 5 ಆರೋಪಿಗಳ ವಿರುದ್ಧ 1,550 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
* ನವೆಂಬರ್ 23 - ಸದನದಲ್ಲಿ ಲೋಕಾಯುಕ್ತ ಪದಚ್ಯುತಿ ನಿರ್ಣಯ ಮಂಡನೆ, ಒಪ್ಪಿಗೆ
* ಡಿಸೆಂಬರ್ 7 - ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ
* ಡಿಸೆಂಬರ್ 8 - ರಾಜ್ಯಪಾಲರಿಂದ ಭಾಸ್ಕರರಾವ್ ರಾಜೀನಾಮೆ ಅಂಗೀಕಾರ

English summary
Karnataka Lokayukta justice Y.Bhaskar Rao resigned. Y.Bhaskar Rao has taken more than 100 days leave after corruption in Lokayukta comes to light. Here is timeline of corruption in lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X